Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಉತ್ತರ ಕೊಡಿ Rohini Sindhuri – IPS Roopa
    ರಾಜ್ಯ

    ಉತ್ತರ ಕೊಡಿ Rohini Sindhuri – IPS Roopa

    vartha chakraBy vartha chakraಫೆಬ್ರವರಿ 19, 2023ಯಾವುದೇ ಟಿಪ್ಪಣಿಗಳಿಲ್ಲ2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಫೆ.19-

    IAS ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri ) ಮತ್ತು ಶಾಸಕ ಸಾ.ರಾ. ಮಹೇಶ್ (Sa Ra Mahesh) ಜೊತೆಗಿನ ರಾಜಿ ಸಂಧಾನವನ್ನು ಪ್ರಶ್ನಿಸಿರುವ IGP ಆಗಿರುವ IPS ಅಧಿಕಾರಿ ಡಿ. ರೂಪಾ (D Roopa) ಅವರು ರೋಹಿಣಿ ಸಿಂಧೂರಿ ವಿರುದ್ಧ 19 ಆರೋಪಗಳನ್ನು ಪಟ್ಟಿ ಮಾಡಿದ್ದಾರೆ.

    ಅಧಿಕಾರಿಯಾಗಿ ರಾಜಕಾರಣಿಗಳ ಜೊತೆಗೆ ಸಂಧಾನ ಏಕೆ – ಹೀಗೆ ಮುಂತಾದ ಅನೇಕ ಆರೋಪಗಳನ್ನು ಡಿ. ರೂಪಾ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ (Facebook) ನಲ್ಲಿ ಮಾಡಿದ್ದು, ಇದರಿಂದ IAS – IPS ನಡುವಿನ ಜಗಳ ತಾರಕಕ್ಕೆ ಏರಿದಂತಾಗಿದೆ.

    ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ರೋಹಿಣಿ ಸಿಂಧೂರಿ ವಿರುದ್ಧ IGP ಡಿ. ರೂಪಾ ಅವರು 19 ಆರೋಪಗಳ ಪಟ್ಟಿ ಮಾಡಿ ‘ರೋಹಿಣಿ ಮಾಡಿರುವ ಅಕ್ರಮ ಕಾರ್ಯಗಳಿಗೆ ಸಾಕ್ಷಿಗಳು ಇವೆ’ ಎಂದು ಹೇಳಿಕೊಂಡಿದ್ದಾರೆ. ಅನೇಕ ಹಿರಿಯ IAS ಅಧಿಕಾರಿಗಳಿಗೆ ಈಕೆ ಆಕ್ಷೇಪಾರ್ಹ ಚಿತ್ರ ( ಮಹೇಶ್ – ಸಿಂಧೂರಿ‌ ಒಟ್ಟಿಗೆ ಕುಳಿತ )ಕಳಿಸಿದ್ದಾರೆ. ಈಗಲೂ ನನ್ನ ಬಳಿ ಆ ಫೋಟೋಗಳಿವೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

    ಮಂಡ್ಯ (Mandya) CEO ಆದಾಗ ಶೌಚಾಲಯ ಕಟ್ಟಿಸಿದ್ದಕ್ಕಿಂತ ಫಿಗರ್ ಫ್ಲಡ್ಜ್ ಮಾಡಿ ಕೇಂದ್ರ ಸರ್ಕಾರದ ಪ್ರಶಸ್ತಿ ಪಡೆದಿದ್ದಾರೆ. ಚಾಮರಾಜನಗರದಲ್ಲಿ 24 ಮಂದಿ ಆಮ್ಲಜನಕ ಕೊರತೆಯಿಂದ ಮೃತಪಟ್ಟಾಗ ತನಿಖೆ ನಡೆಸದೆ ರೋಹಿಣಿ ಪಾರಾದರು. ಕನ್ನಡದ ಹುಡುಗಿ IAS ಶಿಲ್ಪ ನಾಗ್ ವಿರುದ್ಧ ಜಗಳ, ರಂಪ ಏತಕ್ಕೆ ಎಂದೂ IGP ಡಿ. ರೂಪಾ ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ.

    ಸಾರಾ ಮಹೇಶ್ ಮೇಲೆ ಅನೇಕ ಆರೋಪ ಮಾಡಿದರೂ ರೋಹಿಣಿ ಸಿಂಧೂರಿ ಒಂದನ್ನೂ ಪ್ರೂವ್ ಮಾಡಲಿಲ್ಲ. ಅದಕ್ಕೇ ಸಂಧಾನಕ್ಕೆ ಹೋದರಾ? ಪ್ರತಾಪ್ ಸಿಂಹ (Pratap Simha) ಮೇಲೆ ಪ್ರೈವೆಟ್ ಕ್ಲಿನಿಕ್ ಆಕ್ಸಿಜನ್ ಕೇಳಿದ್ದರು ಎಂದು ಆರೋಪ ಮಾಡಿದರೂ ಏಕೆ ಸಾಬೀತು ಮಾಡಲಿಲ್ಲ.

    ಹಾಸನ DC ಯಿಂದ ಎತ್ತಂಗಡಿ ಮಾಡಿದಾಗ ಸರ್ಕಾರದ ವಿರುದ್ಧ CAT ಗೆ ಅರ್ಜಿ ಹಾಕಿದರು. CAT ಗೆ ಅರ್ಜಿ ಹಾಕಲು ನನ್ನ ಪತಿ Munish Moudgil ನನ್ನ ಕಣ್ಣೆದುರೇ ಅರ್ಜಿ ಬರೆದು ಆಕೆಗೆ, ಆಕೆಯ ಪತಿಗೆ ಕಳಿಸಿದ್ದರು ಎಂದು ಸಹ IAS ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ IPS ಅಧಿಕಾರಿ ಡಿ. ರೂಪಾ ಪ್ರಶ್ನೆ ಮಾಡಿದ್ದಾರೆ.

    ಮೈಸೂರು ಜಿಲ್ಲಾಧಿಕಾರಿಯಾಗಿ ಹೋಗಿದ್ದ ಕನ್ನಡದ ಹುಡುಗ ಶರತ್‌ ಅವರನ್ನು 29 ದಿನ ಗಳಲ್ಲಿ ಎತ್ತಂಗಡಿ ಮಾಡಿಸಿದ್ದು? ಯಾವ ಹೈ ಲೆವೆಲ್ ಇನ್‌ಫ್ಲುಯೆನ್ಸ್‌ನಿಂದ ಎಂದೂ ಡಿ. ರೂಪಾ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಕೊರೊನಾ ಸಮಯದಲ್ಲಿ ಈಜುಕೊಳ ಕಟ್ಟಿಸಿಕೊಂಡಿದ್ದಕ್ಕೆ ಡಿ. ರೂಪಾ ಕಿಡಿ ಕಾರಿದ್ದಾರೆ.

    ಕೋವಿಡ್‌ನಿಂದ ಜನ ಸಾಯುತ್ತಿದ್ದರೆ, ಮಾನವೀಯತೆ ಇಲ್ಲದೆ ಈಜುಕೊಳ ಕಟ್ಟಿಸಿದ್ದು ಸಾಬೀತಾಗಿದೆ. ಮನುಷ್ಯತ್ವ ಇರುವವರು ಕೋವಿಡ್ ಸಮಯದಲ್ಲಿ ಜನ ಸಾಯುತ್ತಿರುವಾಗ ಈಜುಕೊಳ ಕಟ್ಟಿಸಿಕೊಳ್ತಾರಾ ಎಂದು ಪ್ರಶ್ನೆ ಮಾಡಿದ್ದಾರೆ.   ಹೀಗೆ ಅನೇಕ ಆರೋಪಗಳನ್ನ ಫೇಸ್‌ಬುಕ್ ಪೋಸ್ಟ್ ಮೂಲಕ ಡಿ. ರೂಪಾ ಮಾಡಿದ್ದಾರೆ. ಡಿಕೆ ರವಿ (DK Ravi) ಕೇಸ್, ಐಪಿಎಸ್ ಹರೀಶ್ ಸಾವು (IPS Harish), ಸಾರಾ ಮಹೇಶ್ ಜೊತೆಗಿನ ಗುದ್ದಾಟ, ಹರ್ಷ ಗುಪ್ತ (Harsha Gupta) ಜೊತೆ ಜಗಳ, ಮಣಿವಣ್ಣನ್ (Manivannan) ಜೊತೆ ಜಗಳ – ಅನೇಕ ವಿಚಾರಗಳ ಕುರಿತು ಐಪಿಎಸ್‌ ಅಧಿಕಾರಿ ಡಿ. ರೂಪಾ ಮೌದ್ಗಿಲ್‌ ಅವರು ಸ್ಮರಿಸಿಕೊಂಡಿದ್ದು, ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಕಾರ್ಯವೈಖರಿಯನ್ನು ಪ್ರಶ್ನೆ ಮಾಡಿದ್ದಾರೆ.

    #Mandya Bangalore d roopa dk ravi Harsha Gupta IAS - IPS IAS - IPS conflicts Karnataka m Manivannan Munish Moudgil Pratap Simha rohini sindhuri Sa Ra Mahesh ಹಾಸನ
    Share. Facebook Twitter Pinterest LinkedIn Tumblr Email WhatsApp
    Previous Articleಕೊನೆಗೂ ದೊರೆಯಿತು ವಿಧಾನಸೌಧದಲ್ಲಿ ಸಿಕ್ಕ ಹಣದ ಮೂಲ
    Next Article ಹಣ ಕೇಳಿದ್ದಕ್ಕೆ ಕತ್ತು ಕೊಯ್ದ!
    vartha chakra
    • Website

    Related Posts

    ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದವರಿಗೆ 6 ಕೋಟಿ ರೂ. ನಗದು ಬಹುಮಾನ

    ಡಿಸೆಂಬರ್ 21, 2025

    ಗಾಂಧಿ ಭಾರತವನ್ನು ಗೋಡ್ಸೆ ಭಾರತವಾಗಲು ಬಿಡುವುದಿಲ್ಲ: ಡಿ.ಕೆ. ಶಿವಕುಮಾರ್

    ಡಿಸೆಂಬರ್ 21, 2025

    ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕಕ್ಕೆ ಸಿಎಂ ಚಾಲನೆ

    ಡಿಸೆಂಬರ್ 20, 2025

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬೈರತಿ ಬಸವರಾಜ್ ಪತ್ತೆಗೆ ಲುಕ್ ಔಟ್ ನೋಟಿಸ್

    ಯೂಟ್ಯೂಬ್ ನಲ್ಲಿ ಪೋಲಿ ವಿಡಿಯೋಗಳ ಹಾವಳಿ

    ನರೇಗಾ ಯೋಜನೆ ಹೆಸರು ಬದಲಾವಣೆ : ಸೋನಿಯಾ ಗಾಂಧಿ ಅವರ ಸಂದೇಶ

    ನಾಯಕತ್ವದ ಬಗ್ಗೆ ಖರ್ಗೆ ಕೊಟ್ಟ ಅಪ್ಡೇಟ್

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • тут ರಲ್ಲಿ ಟೊಮ್ಯಾಟೋ ಸಾಲಕ್ಕಾಗಿ ಲ್ಯಾಪ್ ಟಾಪ್ ಕದ್ದ.
    • elektricheskie jaluzi_abot ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಬಿಜೆಪಿ ಶಾಸಕ ಪ್ರಚಾರ.
    • Ronaldfloca ರಲ್ಲಿ ಸೋತ ಕಾಂಗ್ರೆಸ್ ನಾಯಕರಿಗೆ ಪಾಠ.
    Latest Kannada News

    ಬೈರತಿ ಬಸವರಾಜ್ ಪತ್ತೆಗೆ ಲುಕ್ ಔಟ್ ನೋಟಿಸ್

    ಡಿಸೆಂಬರ್ 22, 2025

    ಯೂಟ್ಯೂಬ್ ನಲ್ಲಿ ಪೋಲಿ ವಿಡಿಯೋಗಳ ಹಾವಳಿ

    ಡಿಸೆಂಬರ್ 22, 2025

    ನರೇಗಾ ಯೋಜನೆ ಹೆಸರು ಬದಲಾವಣೆ : ಸೋನಿಯಾ ಗಾಂಧಿ ಅವರ ಸಂದೇಶ

    ಡಿಸೆಂಬರ್ 22, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ನಾಯಕತ್ವದ ಬಗ್ಗೆ ಖರ್ಗೆ ಕೊಟ್ಟ ಅಪ್ಡೇಟ್.#varthachakra #mallikarjunkharge #siddaramaiah #dkshivakumar
    Subscribe