Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ವರ್ಷಾಂತ್ಯದಲ್ಲಿ ಸಿನೆಮ ಹಬ್ಬ
    ಸಿನೆಮ

    ವರ್ಷಾಂತ್ಯದಲ್ಲಿ ಸಿನೆಮ ಹಬ್ಬ

    vartha chakraBy vartha chakraನವೆಂಬರ್ 3, 2022Updated:ನವೆಂಬರ್ 3, 20221 ಟಿಪ್ಪಣಿ1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    2022 ವರ್ಷ ಮುಗಿಯುತ್ತಾ ಬಂದಿರುವ ವೇಳೆಗೆ ಬರೋಬರಿ 165ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆ ಕಂಡಿವೆ. ಇನ್ನೂ ಸಾಕಷ್ಟು ಚಿತ್ರಗಳು ಬಿಡುಗಡೆಯ ಹಾದಿಯಲ್ಲಿವೆ. ಸ್ಟಾರ್‌ ಸಿನಿಮಾಗಳ, ಹಿಟ್‌ ಸಿನಿಮಾಗಳ ಹವಾದ ಮಧ್ಯೆ ಸಿನಿಮಾ ಬಿಡುಗಡೆ ಮಾಡುವುದು ಹೊಸಬರಿಗೆ ಸವಾಲು. ಆದರೂ, ನವೆಂಬರ್‌ನಲ್ಲಿ ಧೈರ್ಯ ಮಾಡಿ ಸಾಕಷ್ಟು ಸಂಖ್ಯೆಯಲ್ಲಿ ಹೊಸಬರು ತೆರೆಗೆ ಬರುತ್ತಿದ್ದಾರೆ.ಇಲ್ಲಿ ಹೊಸಬರ ಚಿತ್ರವೆಂದರೆ ಸಂಪೂರ್ಣ ಹೊಸಬರು ಎನ್ನುವಂತಿಲ್ಲ. ಆದರೆ, ಬಹುತೇಕ ಚಿತ್ರಗಳ ನಾಯಕ ನಟರು ಮಾತ್ರ ಹೊಸಬರು ಅಥವಾ ಒಂದೆರಡು ಸಿನಿಮಾ ಮಾಡಿದವರಾಗಿತ್ತಾರೆ. ಹಾಗೆ ನೋಡಿದರೆ ತೀರಾ ಹೊಸಬರಲ್ಲದ ಚಿತ್ರವೆಂದರೆ ಸದ್ಯ ತೆರೆಗೆ ಸಿದ್ಧವಾಗಿರುವುದು ಡಾರ್ಲಿಂಗ್‌ ಕೃಷ್ಣ ನಾಯಕರಾಗಿರುವ “ದಿಲ್‌ ಪಸಂದ್‌’. ಅದರಾಚೆ ಅನೌನ್ಸ್‌ ಆಗಿರುವ ಚಿತ್ರಗಳ ನಿರ್ದೇಶಕರು ನಾಲ್ಕೈದು ಸಿನಿಮಾ ಮಾಡಿದರಾಗಿದ್ದು, ಹೀರೋಗಳು ಮಾತ್ರ ನ್ಯೂ ಫೇಸ್‌.
    ಸದ್ಯ ನವೆಂಬರ್‌ ತಿಂಗಳಲ್ಲಿ ಬಿಡುಗಡೆಗೆ ಸಿದ್ಧವಾಗಿರುವ ಸಿನಿಮಾಗಳನ್ನು ಹೆಸರಿಸುವುದಾದರೆ, “ರಾಣ’, “ಕಂಬ್ಳಿಹುಳ’, “ಬನಾರಸ್‌’, “ಸೆಪ್ಟೆಂಬರ್‌ 13′, “ದಿಲ್‌ ಪಸಂದ್‌’, “ಯೆಲ್ಲೋ ಗ್ಯಾಂಗ್ಸ್‌’, “ಓ’, “ವಿಧಿ 370′, “ಆರ್‌ಸಿ ಬ್ರದರ್ಸ್‌’, “ರೆಮೋ’, “ಹುಬ್ಬಳ್ಳಿ ಡಾಬಾ’, “ಖಾಸಗಿ ಪುಟಗಳು’, “ಕ್ಷೇಮಗಿರಿಯಲ್ಲಿ ಕರ್‌ನಾಟಕ’, “ಕುಳ್ಳನ ಹೆಂಡತಿ’, “ವಾಸಂತಿ ನಲಿದಾಗ’, “ಮಾರಿಗುಡ್ಡದ ಗಡ್ಡಧಾರಿಗಳು’, “ನಹೀ ಜ್ಞಾನೇನ ಸದೃಶ್ಯಂ’… ಹೀಗೆ ಲೆಕ್ಕ ಹಾಕುತ್ತಾ ಹೋದರೆ ಪಟ್ಟಿ ಬೆಳೆಯುತ್ತದೆ. ಪ್ರತಿ ಸಿನಿಮಾ ತಂಡಗಳು ವಿಭಿನ್ನ ಸಿನಿಮಾ ಮಾಡಿದ ಖುಷಿಯಲ್ಲಿವೆ.
    ಸಿನಿಮಾವೊಂದರ ಗೆಲುವು ಹೊಸ ಹೀರೋ ಅಥವಾ ನಿರ್ದೇಶಕನ ಮೇಲೆ ಅವಲಂಭಿತವಾಗಿರುವುದಿಲ್ಲ. ಸಿನಿಮಾದ ಕಂಟೆಂಟ್‌ ಹಾಗೂ ಮೇಕಿಂಗ್‌ ಮೇಲೆ ನಿಂತಿರುತ್ತದೆ. ಇವತ್ತು ಸ್ಟಾರ್‌ಗಳಾಗಿರುವವರು ಆರಂಭದಲ್ಲಿ ಹೊಸಬರೇ. ಇದೇ ವಿಶ್ವಾಸದೊಂದಿಗೆ ಚಿತ್ರತಂಡಗಳು ಬಿಡುಗಡೆಗೆ ತಮ್ಮ ಸಿನಿಮಾ ಬಿಡುಗಡೆಗೆ ಮುಂದಾಗಿದೆ.

    ಸಿನಿಮ ಸಿನೆಮ ಹುಬ್ಬಳ್ಳಿ
    Share. Facebook Twitter Pinterest LinkedIn Tumblr Email WhatsApp
    Previous Articleಫಸ್ಟ್ Rank ಪಡೆದವರೇ ಅರೆಸ್ಟ್!
    Next Article ರೇಣುಕಾಚಾರ್ಯ ಸೋದರನ ಮಗ ಕಿಡ್ನಾಪ್?
    vartha chakra
    • Website

    Related Posts

    ಶಾಲೆಗಳಿಗೆ ಕಿಡಿಗೇಡಿಗಳ ಸಂದೇಶ

    ಜುಲೈ 18, 2025

    ಡಿ ಬಾಸ್ ಸ್ವಿಟ್ಜರ್ಲ್ಯಾಂಡ್ ಗೆ ಹೋಗೋಕೆ ಆಗೋಲ್ಲ!

    ಜುಲೈ 11, 2025

    ರಾಜ್ಯ ಕಾಂಗ್ರೆಸ್ ನಲ್ಲಿ ಏನಾಗುತ್ತಿದೆ ?

    ಜುಲೈ 7, 2025

    Comments are closed.

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಸೆಪ್ಟೆಂಬರ್ ನಲ್ಲಿ ಜಾತಿವಾರು ಜನಗಣತಿ !

    KGF ಬಾಬು ಬಳಿ ತೆರಿಗೆ ವಸೂಲಿ ಮಾಡಿದ ಅಧಿಕಾರಿಗಳು!

    ಡಿಸಿಎಂ ಶಿವಕುಮಾರ್ ಮೂರು ದಿನ ರಜೆ

    ರೌಡಿ ಬಿಕ್ಲು ಶಿವ ಹತ್ಯೆ – ಬೈರತಿ ಬಸವರಾಜ್ ಗೆ ಸಂಕಷ್ಟ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • BurtonEroke ರಲ್ಲಿ ಚುರುಕಾದ ನಕ್ಸಲರು.
    • seroquel cost 50mg ರಲ್ಲಿ ಹುಲಿಗಳಿಗೆ ವಿಷವಿಕ್ಕಿದ ಪಾಪಿಗಳು.
    • BurtonEroke ರಲ್ಲಿ ಸಿಎಂ ಬದಲಾವಣೆ ಬಾಯಿಚಪಲದ ಹೇಳಿಕೆ.
    Latest Kannada News

    ಸೆಪ್ಟೆಂಬರ್ ನಲ್ಲಿ ಜಾತಿವಾರು ಜನಗಣತಿ !

    ಜುಲೈ 23, 2025

    KGF ಬಾಬು ಬಳಿ ತೆರಿಗೆ ವಸೂಲಿ ಮಾಡಿದ ಅಧಿಕಾರಿಗಳು!

    ಜುಲೈ 23, 2025

    ಡಿಸಿಎಂ ಶಿವಕುಮಾರ್ ಮೂರು ದಿನ ರಜೆ

    ಜುಲೈ 22, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸರೋಜಾದೇವಿ, SM ಕೃಷ್ಣ ಮದ್ವೆ ಆಗಲಿಲ್ಲವೇಕೆ
    Subscribe