ಸೈಬರ್ ಖದೀಮರು ಈಗ ಮಂಡ್ಯದ ಜಿಲ್ಲಾಧಿಕಾರಿಗಳ ಜಾಲತಾಣಕ್ಕೂ ಕೈ ಹಾಕಿದ್ದಾರೆ.
ಮಂಡ್ಯ ಜಿಲ್ಲಾಧಿಕಾರಿ ಹೆಸರಲ್ಲಿ ನಕಲಿ ವಾಟ್ಸಾಪ್ ಮತ್ತು ಪೇಸ್ಬುಕ್ ಖಾತೆ ತೆಗೆದು ಹಣಕ್ಕಾಗಿ ಸಂದೇಶ ರವಾನಿಸಲಾಗುತ್ತಿದೆ.
ಖದೀಮರ ಕಾಟಕ್ಕೆ ಬೇಸ್ತು ಬಿದ್ದ ಮಂಡ್ಯ ಜಿಲ್ಲಾಧಿಕಾರಿ ಎಸ್ ಅಶ್ವಥಿ ಅವರು ಸ್ಟೇಟಸ್ ನಲ್ಲಿ ತಮ್ಮ ಖಾತೆ ನಕಲಿ ಮಾಡಿರುವುದನ್ನ ದೃಢಪಡಿಸಿದ್ದಾರೆ.
ನಕಲಿ ವಾಟ್ಸಾಪ್ ಮತ್ತು ಫೆಸ್ಬುಕ್ ಖಾತೆ ಗೆ ಡಿಸಿ ಫೋಟೋ ಹಾಕಿ ಡಿಸಿಯಂತೆ ಮೆಸೆಜ್ ಮಾಡಿರುವವರ ವಿರುದ್ಧ ಎಚ್ಚರವಾಗಿರಿ ಎಂದು ತಿಳಿಸಿದ್ದಾರೆ. ಡಿಸಿ ಅವರ ನಕಲಿ ಖಾತೆಯಿಂದ ಅರ್ಜೆಂಟ್ ಹಣ ಬೇಕಿದೆ ಎಂದು ಕೆಲವರಿಗೆ ಸಂದೇಶ ರವಾನಿಸಲಾಗಿದೆ. ವಿಚಾರ ತಿಳಿದ ಜಿಲ್ಲಾಧಿಕಾರಿಗಳಿಂದ ಫೆಕ್ ವಾಟ್ಸಾಪ್ ಬಗ್ಗೆ ಮಾಹಿತಿ ನೀಡಲಾಗಿದೆ. ಯಾರು ಹಣ ನೀಡದಂತೆ ವಾಟ್ಸಾಪ್ ಸ್ಟೆಟಸ್ ನಲ್ಲಿ ಡಿಸಿ ಅಶ್ವಥಿ ಅವರು ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಮಂಡ್ಯದ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ
Previous Articleಲವ್ ಲಿ ಮುಲಕ ಕನ್ನಡಕ್ಕೆ ಎಂಟ್ರಿ ಕೊಟ್ಟ ಸ್ಟೆಫಿ ಪಟೇಲ್
Next Article ಮಂಡ್ಯದಲ್ಲಿ ವಿಶಿಷ್ಠ ಹಬ್ಬ ಆಚರಣೆ