Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ದೇಶದ ಭವಿಷ್ಯ ಬರೆಯಲಿರುವ ಕರ್ನಾಟಕ ರಾಜಕಾರಣ | Karnataka Politics
    ಸುದ್ದಿ

    ದೇಶದ ಭವಿಷ್ಯ ಬರೆಯಲಿರುವ ಕರ್ನಾಟಕ ರಾಜಕಾರಣ | Karnataka Politics

    vartha chakraBy vartha chakraಏಪ್ರಿಲ್ 7, 202422 ಪ್ರತಿಕ್ರಿಯೆಗಳು5 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು – ಲೋಕಸಭೆಗೆ ಈ ಬಾರಿ ನಡೆಯುತ್ತಿರುವ ಚುನಾವಣೆಯಲ್ಲಿ ಕರ್ನಾಟಕ ಹಲವಾರು ವಿಷಯಗಳಿಂದ ಗಮನ ಸೆಳೆಯುತ್ತಿದೆ.ಈ ಚುನಾವಣೆಯಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ಗ್ಯಾರಂಟಿ ಗಳು ಕರ್ನಾಟಕದಲ್ಲಿ ರೂಪುಗೊಂಡವು.

    ಗ್ಯಾರಂಟಿಗಳ ಘೋಷಣೆ ಮೂಲಕ ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದ ಕಾಂಗ್ರೆಸ್ ನೆರೆಯ ರಾಜ್ಯದಲ್ಲೂ ಅದನ್ನು ಪ್ರಯೋಗಿಸಿ ಯಶಸ್ಸು ಪಡೆಯಿತು.
    ಮೊದಲಿಗೆ ಗ್ಯಾರಂಟಿಗಳನ್ನು ಟೀಕಿಸಿದ ಬಿಜೆಪಿ ಯಾವಾಗ ಕಾಂಗ್ರೆಸ್ ಗ್ಯಾರಂಟಿಗಳಿಂದ ಯಶಸ್ಸು ಪಡೆಯಿತೋ ಅವಾಗಿನಿಂದ ತನ್ನ ನಿಲುವು ಬದಲಾಯಿಸಿತು ಇದೀಗ ಸುಭದ್ರ ಸರ್ಕಾರ ಸೇರಿದಂತೆ ಕೇಂದ್ರ ಸರ್ಕಾರದ ಹಲವು ಜನಪರ ಯೋಜನೆಗಳಿಗೆ ಮೋದಿ ಕಾ ಗ್ಯಾರಂಟಿ ಎಂದು ಹೇಳಿ ಲಾಭ ಪಡೆಯಲು ಮುಂದಾಗಿದೆ ಈ ಮೂಲಕ ಕರ್ನಾಟಕ ಗ್ಯಾರಂಟಿ ದೇಶಾದ್ಯಂತ ಸದ್ದು ಮಾಡುತ್ತಿದೆ.
    ದಕ್ಷಿಣ ಭಾರತದಲ್ಲಿ ಬಿಜೆಪಿ ಸಂಘಟನಾತ್ಮಕವಾಗಿ ಹಿನ್ನಡೆ ಹೊಂದಿದೆ ಆದರೆ ಕರ್ನಾಟಕದಲ್ಲಿ ಗಮನಾರ್ಹ ರೀತಿಯಲ್ಲಿ ಸಂಘಟನೆ ಪ್ರಾಬಲ್ಯ ಪಡೆದಿದೆ ಇದನ್ನು ದಾಳವಾಗಿ ಬಳಸಿಕೊಂಡು ಕರ್ನಾಟಕ ದಕ್ಷಿಣ ಭಾರತದ ಬಿಜೆಪಿಯ ಹೆಬ್ಬಾಗಿಲು ಎಂದು ಬಿಂಬಿಸಲು ಕೇಸರಿ ಪಡೆ ಕಾರ್ಯತಂತ್ರ ರೂಪಿಸುತ್ತದೆ. ಈ ಮೂಲಕ ಕರ್ನಾಟಕ ದೇಶದ ಬಿಜೆಪಿ ನಾಯಕರ ಆಸಕ್ತಿಯ ತಾಣವಾಗಿದೆ.
    ಕಾಂಗ್ರೆಸ್ ಆಡಳಿತ ಇರುವ ದೇಶದ ದೊಡ್ಡ ರಾಜ್ಯಗಳ ಪೈಕಿ ಕರ್ನಾಟಕವೇ ಪ್ರಮುಖವಾದದ್ದು. ಕಳೆದ ಹತ್ತು ವರ್ಷಗಳಿಂದ ಸೋಲಿನ ದವಡೆಯಲ್ಲಿ ಸಿಲುಕಿ ಅದರಿಂದ ಹೊರಬರಲು ಪರದಾಡುತ್ತಿರುವ ಕಾಂಗ್ರೆಸ್ ,ಕರ್ನಾಟಕದತ್ತ ಆಸೆಯ ಕಣ್ಣುಗಳಿಂದ ನೋಡುತ್ತಿದೆ. ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷರು ಕರ್ನಾಟಕದವರೇ ಆಗಿದ್ದು ಕಾಂಗ್ರೆಸ್ ಇಲ್ಲಿಂದ ಹೆಚ್ಚಿನ ಸ್ಥಾನ ಗಳಿಸುವ ಮೂಲಕ ಸದ್ಯದಲ್ಲೇ ನಡೆಯುವ ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುವ ಕನಸು ಕಾಣುತ್ತಿದೆ. ಈ ಮೂಲಕ ಕರ್ನಾಟಕದ ಚುನಾವಣೆಯ ಫಲಿತಾಂಶ ಹಾಗೂ ಈ ಕುರಿತಾದ ರಾಜಕೀಯ ವಿದ್ಯಮಾನಗಳು ದೇಶದ ರಾಜಕೀಯ ದಿಕ್ಕು ದಿಸೆಗಳನ್ನು ನಿರ್ಧರಿಸಬಲ್ಲ ಸಂಗತಿಗಳಾಗಿ ಹೊರಹೊಮ್ಮತೊಡಗಿವೆ.

    ಪ್ರಮುಖವಾಗಿ ಬಿಜೆಪಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳು ದೇಶದ ಗಮನ ಸೆಳೆದಿದೆ. ಇಲ್ಲಿ ಸಣ್ಣದಾಗಿ ಕಾಣಿಸಿಕೊಂಡಿರುವ ಘಟನಾವಳಿ ಮುಂದೆ ದೇಶಾದ್ಯಂತ ವ್ಯಾಪಿಸಬಹುದೇನೋ ಎಂಬ ಚರ್ಚೆಗೆ ಗ್ರಾಸವಾಗಿದೆ.
    ದೇಶದ ಬಿಜೆಪಿಯ ಪ್ರಶ್ನಾತೀತ ಹಾಗೂ ಪರಮೋಚ್ಚ ನಾಯಕರು ಎಂದೆನಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಹೇಳಿದ ಮಾತುಗಳು ಬಿಜೆಪಿ ನಾಯಕರ ಪಾಲಿಗೆ ವೇದವಾಕ್ಯ. ಅವರು ಮನವಿ ಮಾಡಿದರೂ ಬಿಜೆಪಿ ನಾಯಕರು ಅದನ್ನು ಆದೇಶ ಎಂದು ಪರಿಗಣಿಸಿ ಮರು ಮಾತಿಲ್ಲದೆ ಪರಿಪಾಲಿಸುತ್ತಿದ್ದಾರೆ. ಈ ಮೂಲಕ ಇವರ ಸೂಚನೆಗಳು ಬಿಜೆಪಿಯ ಪಾಲಿಗೆ ಲಕ್ಷ್ಮಣ ರೇಖೆ ಎಂದೆನಿಸುತ್ತದೆ.
    ಇಂತಹ ಪರಮೋಚ್ಚ ನಾಯಕರ ಮಾತುಗಳು ಮತ್ತು ನಾಯಕತ್ವದ ಬಗ್ಗೆ ಕರ್ನಾಟಕದಲ್ಲಿ ಸಣ್ಣ ಪ್ರಮಾಣದಲ್ಲಿ ಅಪಸ್ವರ ಕಾಣಿಸಿಕೊಂಡಿದೆ ಈ ಮೂಲಕ ಇಲ್ಲಿಯವರೆಗೆ ಇವರನ್ನು ಪ್ರಶ್ನಾತೀತ ನಾಯಕರು ಎಂದು ಪರಿಗಣಿಸಿದ್ದವರು ಕರ್ನಾಟಕದಲ್ಲಿ ಮುಂದೆ ಏನಾಗುತ್ತದೆ ಎಂಬುದನ್ನು ಗಮನಿಸುತ್ತಿದ್ದಾರೆ.

    ಬಿಜೆಪಿಯ ಭೀಷ್ಮ ಅಡ್ವಾಣಿ, ಮುರಳಿ ಮನೋಹರ ಜೋಶಿ, ಯಶವಂತ ಸಿನ್ಹಾ, ರಾಮ್ ನಾಯಕ್, ಕಲ್ಯಾಣ್ ಸಿಂಗ್, ಉಮಾ ಭಾರತಿ ಸೇರಿದಂತೆ ಹಲವಾರು ನಾಯಕರನ್ನು ಮಾರ್ಗದರ್ಶಕ ತನ್ನನ್ನು ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಘೋಷಿಸಿಕೊಂಡರೋ ಆ ಗಳಿಗೆಯಿಂದ ಇಲ್ಲಿಯವರೆಗೆ ಮೋದಿ-ಶಾ ಗುಜರಾತಿ ಜೋಡಿ ಬಿಜೆಪಿ ಪಕ್ಷವನ್ನು ಅಕ್ಷರಶಃ ತನ್ನ ಬಿಗಿ ಹಿಡಿತಕ್ಕೆ ತೆಗೆದುಕೊಂಡಿದೆ.
    ಬಿಜೆಪಿಯಲ್ಲಿ ಇವರಿಬ್ಬರ ಸಾಮ್ರಾಜ್ಯ ಆರಂಭವಾಗುವವರೆಗೆ, ಅನಂತ್ ಕುಮಾರ್, ಸುಷ್ಮಾಸ್ವರಾಜ್, ಅರುಣ್ ಜೇಟ್ಲಿ, ಮನೋಹರ್ ಪರಿಕ್ಕರ್, ನಿತಿನ್ ಗಡ್ಕರಿ, ವೆಂಕಯ್ಯ ನಾಯ್ಡು ಸೇರುವಂತೆ ಹಲವಾರು ನಾಯಕರು ಪಕ್ಷದ ಆಗು ಹೋಗುಗಳ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದರು ಯಾವಾಗ ಮೋದಿ- ಶಾ ಜೋಡಿ ಪಕ್ಷದ ನಿರ್ಣಾಯಕ ಸ್ಥಾನದಲ್ಲಿ ಬಂದು ವಿರಾಜಮಾನವಾಯಿತೋ ಆ ಕ್ಷಣದಿಂದ ಈ ಎಲ್ಲಾ ನಾಯಕರು ಮೂಲೆಗುಂಪಾದರು ಮತ್ತೆ ಕೆಲವರು ಕಾಲನ ಗರ್ಭ ಸೇರಿದರು.
    ರಾಜನಾಥ್ ಸಿಂಗ್ , ನಿತಿನ್ ಗಡ್ಕರಿಯಂತಹ ನಾಯಕರು ಮೋದಿ ಅವರ ಸಂಪುಟದಲ್ಲಿ ಸಚಿವರಾಗಿ ಕಳೆದು ಹೋದರು.ಹೀಗೆ ಬಿಜೆಪಿಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಾ ಬಂದ ಈ ಗುಜರಾತಿ ಜೋಡಿಯೆದುರು ಧೈರ್ಯವಾಗಿ ಮಾತಾಡುವ ವ್ಯಕ್ತಿಗಳೇ ಬಿಜೆಪಿಯಲ್ಲಿ ಇಲ್ಲದಂತಾಯಿತು.

    ಹೈಕಮಾಂಡ್ ಎನಿಸಿದ ನಾಯಕತ್ವದ ಆದೇಶ ತಮಗೆ ಸರಿ ಕಾಣಲಿಲ್ಲ ಎಂದರೆ ಅದನ್ನು ಧಿಕ್ಕರಿಸಿ ತಾವೇ ಹೈ ಕಮಾಂಡ್ ಎಂಬಂತೆ ವರ್ತಿಸುತ್ತಿದ್ದ ಕರ್ನಾಟಕದ ರೈತ ನಾಯಕ ಯಡಿಯೂರಪ್ಪ ಅಂತವರು ಮೋದಿ ಮತ್ತು ಅಮಿತ್ ಶಾ ಮುಂದೆ ಕೈಕಟ್ಟಿ ನಿಲ್ಲುವಂತಾಯಿತು. ಈ ಇಬ್ಬರು ನಾಯಕರು ಹೇಳಿದಾಗ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಯಡಿಯೂರಪ್ಪ ಅವರು ಹೇಳಿದ ತಕ್ಷಣ ಮೂರು ಮಾತಿಲ್ಲದೆ ಸಿಎಂ ಹುದ್ದೆ ತೊರೆದು ಮನೆಗೆ ಹೋದರು.
    ಹಿಂದೊಮ್ಮೆ ಕಾಂಗ್ರೆಸ್ಸಿನಲ್ಲೂ ಇಂತಹುದೇ ವಾತಾವರಣ ಇತ್ತು. ಅಂದು ಯ`ಇಂದಿರಾ ಎಂದರೆ ಇಂಡಿಯಾ’ .. ಇಂದಿರಾ ಎಂದರೆ ಕಾಂಗ್ರೆಸ್ ಎಂದು ಕಾಂಗ್ರೆಸ್ ನಾಯಕರು ಸಂಪೂರ್ಣ ಶರಣಾಗತರಾಗಿದ್ದರು. ಇಂತಹ ಸಮಯದಲ್ಲಿ ಕಾಂಗ್ರೆಸ್ ಪಕ್ಷದಲ್ಲೇ ಇಂದಿರಾಗಾಂಧಿ ಅವರ ನಾಯಕತ್ವದ ವಿರುದ್ಧ ಬಂಡಾಯದ ಧ್ವನಿಗಳು ಕೇಳಿ ಬಂದವು. ಇಂಥ ಧ್ವನಿಗಳಿಗೆ ವೇದಿಕೆಯಾಗಿದ್ದು ಕರ್ನಾಟಕ. ಒಂದು ಕರ್ನಾಟಕದಲ್ಲಿ ಕಾಂಗ್ರೆಸ್ ನ ಪ್ರಭಾವಿ ನಾಯಕರು ಎನಿಸಿದ್ದ ದಿವಂಗತ ದೇವರಾಜ ಅರಸು ಸೇರಿದಂತೆ ಅನೇಕ ನಾಯಕರು ಇಂದಿರಾ ವಿರುದ್ಧ ಬಂಡಾಯದ ಕಹಳೆ ಊದಿದ್ದು ಈಗ ಇತಿಹಾಸ.
    ಇಂತಹ ಇತಿಹಾಸ ಇದೀಗ ಕರ್ನಾಟಕದಿಂದಲೇ ಮರು ಆರಂಭಗೊಳ್ಳುವ ಸಾಧ್ಯತೆಗಳು ಗೋಚರಿಸುತ್ತಿವೆ. ಬಿಜೆಪಿ ಎಂದರೆ ಮೋದಿ ಮತ್ತು ಅಮಿತ್ ಶಾ ಎಂಬ ವಾತಾವರಣವಿದೆ ಇಂತಹ ವಾತಾವರಣದ ವಿರುದ್ಧ ಅಪಸ್ವರ ಎಂಬ ಧ್ವನಿ ಕರ್ನಾಟಕದಿಂದ ಕೇಳಿ ಬರತೊಡಗಿದೆ.

    ಲೋಕಸಭೆ ಚುನಾವಣೆಗೆ ಬಿಜೆಪಿಯಲ್ಲಿ ಟಿಕೆಟ್ ಹಂಚಿಕೆಯ ಮೂಲಕ ಶುರುವಾದ ಬಿಜೆಪಿಯೊಳಗಿನ ಅಸಮಾಧಾನಗಳು ಹಾದಿ ರಂಪ ಬೀದಿರಂಪದ ಹಂತ ತಲುಪಿದವು. ಇವುಗಳನ್ನು ಸರಿಪಡಿಸಲು ರಾಜ್ಯ ನಾಯಕರು ಮಾಡಿದ ಎಲ್ಲ ಪ್ರಯತ್ನಗಳು ವಿಫಲವಾದ ನಂತರ ಅಮಿತ್ ಶಾ ಮತ್ತು ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ಸಿಂಗ್ ಅವರು ಅಖಾಡಕ್ಕಿಳಿದು ವಿಶೇಷ ಪ್ರಯತ್ನಗಳನ್ನು ಮಾಡಬೇಕಾಯಿತು.
    ಆದರೆ ಸಂಘ ಪರಿವಾರ ಹಿನ್ನೆಲೆಯಿಂದ ಬಂದ ಕೆಲವು ಪ್ರಭಾವಿ ನಾಯಕರು ಈ ಯಾವುದೇ ಪ್ರಯತ್ನಗಳಿಗೆ ತಲೆಬಾಗಲಿಲ್ಲ ಅಮಿತ್ ಶಾ ಅವರ ಮಾತುಗಳಿಗೆ ಸೊಪ್ಪು ಹಾಕಲಿಲ್ಲ ಪ್ರಧಾನಿ ಮೋದಿ ಅವರ ಸಾರ್ವಜನಿಕ ಸಭೆಯಿಂದ ದೂರ ಉಳಿಯುವ ಮೂಲಕ ಯಾರೂ ಕೂಡ ಪ್ರಶ್ನಾತೀತಕರು ಅಲ್ಲ ಎಂಬ ಸಂದೇಶ ರವಾನಿಸಿದರು
    ರಾಜ್ಯದ ಬಿಜೆಪಿ ಕಟ್ಟಾಳುಗಳೇ ಮೋದಿ-ಶಾ ವಿರುದ್ಧ ಸಿಡಿದೇಳುವ ಮಾತಾಡುತ್ತಿದ್ದಾರೆ.
    ಬಿಜೆಪಿಯಮಟ್ಟಿಗೆ ಅತ್ಯಂತ ಪ್ರಭಾವಿ ನಾಯಕರು ಎನಿಸಿಕೊಂಡ ಯಡಿಯೂರಪ್ಪ, ಶಿವರಾಜ ಸಿಂಗ್ ಚೌಹಾಣ್, ವಸುಂದರ ರಾಜೇ, ಮನೋಹರ್ ಲಾಲ್ ಖಟ್ಟರ್, ಉಮಾ ಭಾರತಿ ಅಂಥವರನ್ನು ಅಧಿಕಾರದಿಂದ ದೂರಸರಿಸಿದಾಗ ಅವರಾರು ಮೂರೂ ಮಾತನಾಡಲಿಲ್ಲ ಮೋದಿ ಮತ್ತು ಅಮಿತ್ ಶಾ ನಾಯಕತ್ವದ ಸೊಲ್ಲೆತ್ತಲಿಲ್ಲ
    ಇಂತಹ ಬಿಗಿಹಿಡಿತದ ವಾತಾವರಣವಿರುವ ಬಿಜೆಪಿಯಲ್ಲಿ ಈಗ ಲೋಕಸಭೆಗೆ ಸ್ಪರ್ಧಿಸಲು ತಮಗೆ ಟಿಕೆಟ್ ನೀಡಲಿಲ್ಲ ಎಂಬ ಕಾರಣಕ್ಕೆ ಯಾವ ಮುಲಾಜೂ ಇಲ್ಲದೆ ತಮ್ಮ ಅಸಹಕಾರ ಪ್ರದರ್ಶಿಸುತ್ತಿರುವುದು ಗಮನಾರ್ಹ ಸಂಗತಿಯಾಗಿದೆ.
    ನಾಯಕತ್ವದ ವಿರುದ್ಧ ಸೆಡ್ಡು ಹೊಡೆದು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಘೋಷಣೆ ಮಾಡಿರುವ ಹಿರಿಯ ನಾಯಕ ಈಶ್ವರಪ್ಪ ಅಂತಹ ದೊಡ್ಡ ಪ್ರಮಾಣದ ಜನಬೆಂಬಲ ಇರುವ ನಾಯಕರೇನಲ್ಲ. ತನ್ನ ಸ್ವಂತ ವಿಧಾನಸಭಾ ಕ್ಷೇತ್ರದಲ್ಲಿ ಹಿಂದೊಮ್ಮೆ ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದ ಈ ನಾಯಕ ಇದೀಗ,ಮೋದಿ-ಶಾ ಜೋಡಿಗೆ ಸೆಡ್ಡು ಹೊಡೆದು ಯಡಿಯೂರಪ್ಪನ ಮಗನ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ವಿಷಯ ಸಣ್ಣ ಸಂಗತಿಯಲ್ಲ.ಸ್ವತಃ ಮೋದಿ ಶಿವಮೊಗ್ಗಕ್ಕೆ ಬಂದರೂ ಈಶ್ವರಪ್ಪ, ಮೋದಿ ಕಾರ್ಯಕ್ರಮದಿಂದಲೇ ದೂರ ಉಳಿಯುವ ಮೂಲಕ ದೊಡ್ಡ ಸಂದೇಶ ರವಾನಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ತನಗೆ ಟಿಕೆಟ್ ನಿರಾಕರಿಸಿದಾಗ, ಇದೇ ರೀತಿ ಸಿಟ್ಟುಮಾಡಿಕೊಂಡಿದ್ದ ಈಶ್ವರಪ್ಪ ಕೇವಲ ಮೋದಿಯ ಒಂದು ಫೋನ್ ಕರೆಗೆ ತಣ್ಣಗಾಗಿ ತೆಪ್ಪಗಾಗಿದ್ದರು. ಆದರೆ ಈಗ ತಮ್ಮದೇ ಜಿಲ್ಲೆಯಲ್ಲಿ ನಡೆದ ಮೋದಿಯ ಕಾರ್ಯಕ್ರಮಕ್ಕೇ ಗೈರಾಗುತ್ತಾರೆ!

    ಇನ್ನು ಉತ್ತರ ಕನ್ನಡದ ಅನಂತ್ ಕುಮಾರ್ ಹೆಗಡೆ ಕೂಡಾ ಸೀದಾ ಮೋದಿ-ಶಾ ವಿರುದ್ಧ ಇಂತದ್ದೇ ಬಂಡಾಯದ ರಣಕಹಳೆ ಮೊಳಗಿಸಿದ್ದಾರೆ ಮೊನ್ನೆ ಕರ್ನಾಟಕಕ್ಕೆ ಬಂದಿದ್ದಾಗ ಸ್ವತಃ ಅಮಿತ್ ಶಾ ಕರೆ ಮಾಡಿದರೂ ಹೆಗಡೆ ಅವರಿಗೆ ಪ್ರತಿಕ್ರಿಯೆ ನೀಡಿಲ್ಲ.
    ಅನಂತಕುಮಾರ ಹೆಗಡೆ ಅವರ ಅಸಮಾಧಾನ ತಣಿಸಲು ಅಮಿತ್ ಶಾ ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾಗಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಈ ವಿಷಯದಲ್ಲಿ ಪ್ರಯತ್ನ ಪಟ್ಟರು ಸಫಲರಾಗಿಲ್ಲ ಎನ್ನುತ್ತವೆ ಅನಂತಕುಮಾರ್ ಹೆಗಡೆ ಅವರ ಆಪ್ತ ಮೂಲಗಳು.
    ಕೇವಲ ಇವರಿಬ್ಬರೇ ಮಾತ್ರವಲ್ಲ, ಸುಮಾರು ಹತ್ತು ಕ್ಷೇತ್ರಗಳ ಬಿಜೆಪಿಯೊಳಗೆ ಇಂತಹ ಬಂಡಾಯಗಳು ಕಾಣಿಸಿಕೊಂಡಿವೆ.
    ಬೆಳಗಾವಿಯಲ್ಲಿ ‌ಮಹಾಂತೇಶ ಕವಟಗಿ ಮಠ,ಪ್ರಭಾಕರ ಕೋರೆ,ಹಾಸನದಲ್ಲಿ ಪ್ರೀತಂ ಗೌಡ, ಕೊಪ್ಪಳದಲ್ಲಿ ಸಂಗಣ್ಣ ಕರಡಿ, ದಾವಣಗೆರೆಯಲ್ಲಿ ರವೀಂದ್ರ ನಾಥ್ ಬೆಂಗಳೂರು ಉತ್ತರದಲ್ಲಿ ಸದಾನಂದ ಗೌಡ ಸೇರಿದಂತೆ ಹಲವು ಉದಾಹರಣೆಗಳು ಕಣ್ಣಮುಂದಿವೆ.
    ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಒಂದು ಮಾತಿಗೆ ಗಪ್ ಚುಪ್ ಆಗುತ್ತಿದ್ದ ಬಿಜೆಪಿ ನಾಯಕರು ಈ ಮಟ್ಟಿಗೆ ಬಂಡಾಯದ ಧೈರ್ಯ ತೋರುತ್ತಿದ್ದಾರೆ.
    ಕರ್ನಾಟಕದಲ್ಲಿ ಕಾಣಿಸಿಕೊಂಡಿರುವ ಈ ಧೈರ್ಯ ಲೋಕಸಭಾ ಚುನಾವಣೆ ನಂತರದಲ್ಲಿ ಯಾವ ಸ್ವರೂಪ ಪಡೆಯಲಿದೆ.ದೇಶದಲ್ಲಿ ಇದು ಎಷ್ಟರಮಟ್ಟಿಗೆ ಪರಿಣಾಮ ಬೀರಲಿದೆ ಎನ್ನುವುದು ಕುತೂಹಲ ಮೂಡಿಸಿದ್ದು‌,ಕರ್ನಾಟಕದ ಈ ಬೆಳವಣಿಗೆಗಳು ರಾಷ್ಟ್ರದ ರಾಷ್ಟ್ರ ರಾಜಕಾರಣದ ದಿಕ್ಕು,ದಿಸೆಯಾಗಲಿವೆ.

    ITI Karnataka karnataka politics Politics ಈಶ್ವರಪ್ಪ ಕಾಂಗ್ರೆಸ್ ಚುನಾವಣೆ ನರೇಂದ್ರ ಮೋದಿ ರಾಜಕೀಯ ಹಾಸನ
    Share. Facebook Twitter Pinterest LinkedIn Tumblr Email WhatsApp
    Previous Articleದುಬಾರಿ ವಾಚ್ ಗಳ ಕಳ್ಳಸಾಗಣೆ ಜಾಲದಲ್ಲಿ ಮಂತ್ರಿ ಮಗ
    Next Article ರಾಜಕೀಯ ನಿವೃತ್ತಿ ಘೋಷಿಸಿದ ರಮೇಶ್ ಕುಮಾರ್ | Ramesh Kumar
    vartha chakra
    • Website

    Related Posts

    ವಿಮಾನ ನಿಲ್ದಾಣದಲ್ಲಿ ಮತ್ತೊಂದು ಸೌಲಭ್ಯ.

    ಜೂನ್ 2, 2025

    ವಿರಾಟ್ ಕೊಹ್ಲಿ ರೆಸ್ಟೋರೆಂಟ್ ವಿರುದ್ಧ ಎಫ್ಐಆರ್.

    ಜೂನ್ 2, 2025

    ಥಿಯೇಟರ್ ಸುಡುವ ಎಚ್ಚರಿಕೆ ಮಧ್ಯೆಯೂ ‘ಥಗ್ ಲೈಫ್’ ಪ್ರದರ್ಶನಕ್ಕೆ ಮುಂದಾದ ಕರ್ನಾಟಕದ ಚಿತ್ರಮಂದಿರಗಳು !

    ಮೇ 31, 2025

    22 ಪ್ರತಿಕ್ರಿಯೆಗಳು

    1. skoraya narkologicheskaya pomosh_aeel on ಸೆಪ್ಟೆಂಬರ್ 10, 2024 7:47 ಅಪರಾಹ್ನ

      круглосуточная наркологическая помощь москва https://skoraya-narkologicheskaya-pomoshch11.ru .

      Reply
    2. Vivod iz zapoya v Almati _jfPn on ಸೆಪ್ಟೆಂಬರ್ 17, 2024 10:47 ಫೂರ್ವಾಹ್ನ

      Вывод из запоя на дому http://www.fizioterapijakeskic.com .

      Reply
    3. Bernieflife on ಮೇ 10, 2025 3:20 ಅಪರಾಹ್ನ

      Вам требуется лечение? стоматология в хуньчуне лечение хронических заболеваний, восстановление после операций, укрепление иммунитета. Включено всё — от клиники до трансфера и проживания.

      Reply
    4. MichaelSap on ಮೇ 11, 2025 10:45 ಅಪರಾಹ್ನ

      ноутбук цены недорого ноутбуки 15 цены

      Reply
    5. Tysonphymn on ಮೇ 11, 2025 11:19 ಅಪರಾಹ್ನ

      купить хороший смартфон купить смартфон xiaomi

      Reply
    6. MichaelSnows on ಮೇ 13, 2025 11:24 ಅಪರಾಹ್ನ

      ГГУ имени Ф.Скорины https://www.gsu.by/ крупный учебный и научно-исследовательский центр Республики Беларусь. Высшее образование в сфере гуманитарных и естественных наук на 12 факультетах по 35 специальностям первой ступени образования и 22 специальностям второй, 69 специализациям.

      Reply
    7. Jimmymof on ಮೇ 14, 2025 1:04 ಫೂರ್ವಾಹ್ನ

      Francisk Skorina https://www.gsu.by Gomel State University. One of the leading academic and scientific-research centers of the Belarus. There are 12 Faculties at the University, 2 scientific and research institutes. Higher education in 35 specialities of the 1st degree of education and 22 specialities.

      Reply
    8. Angeltam on ಮೇ 14, 2025 2:19 ಅಪರಾಹ್ನ

      Create vivid images with Promptchan AI — a powerful neural network for generating art based on text description. Support for SFW and NSFW modes, style customization, quick creation of visual content.

      Reply
    9. WallaceDus on ಮೇ 14, 2025 3:24 ಅಪರಾಹ್ನ

      Недвижимость в Болгарии у моря https://byalahome.ru квартиры, дома, апартаменты в курортных городах. Продажа от застройщиков и собственников. Юридическое сопровождение, помощь в оформлении ВНЖ, консультации по инвестициям.

      Reply
    10. JesseMug on ಮೇ 15, 2025 6:34 ಫೂರ್ವಾಹ್ನ

      цветы дешево цветы доставка на дом

      Reply
    11. JamesStump on ಮೇ 15, 2025 6:38 ಫೂರ್ವಾಹ್ನ

      цветы на дом спб заказ цветов на дом

      Reply
    12. KennethTax on ಮೇ 15, 2025 9:15 ಫೂರ್ವಾಹ್ನ

      заказать букет роза квиксенд

      Reply
    13. Marcussaura on ಮೇ 20, 2025 4:56 ಫೂರ್ವಾಹ್ನ

      сделать реферат на заказ заказать реферат цена

      Reply
    14. ekskursii-kaliningrad on ಮೇ 21, 2025 10:31 ಅಪರಾಹ್ನ

      калининград экскурсии цена и расписание экскурсии в калининграде и области

      Reply
    15. Thomasphype on ಮೇ 23, 2025 4:05 ಅಪರಾಹ್ನ

      laravel разработка сайта https://razrabotka-sayta-laravel.ru

      Reply
    16. Edwarddog on ಮೇ 23, 2025 4:11 ಅಪರಾಹ್ನ

      латунный шильдик шильдики москва

      Reply
    17. DonaldAlicy on ಮೇ 23, 2025 5:16 ಅಪರಾಹ್ನ

      заказать бейджики москва изготовление металлических бейджев

      Reply
    18. Melvindeept on ಮೇ 24, 2025 9:19 ಫೂರ್ವಾಹ್ನ

      шильдики москва шильд металлический с гравировкой

      Reply
    19. Dwightbab on ಮೇ 25, 2025 1:20 ಫೂರ್ವಾಹ್ನ

      железные бейджи бейджики для сотрудников на заказ москва железные

      Reply
    20. JerryFrics on ಮೇ 26, 2025 2:51 ಫೂರ್ವಾಹ್ನ

      стоимость типография типография полиграфия

      Reply
    21. HarleyZen on ಮೇ 28, 2025 12:18 ಅಪರಾಹ್ನ

      цвет с доставкой недорого доставка цветов белые

      Reply
    22. damski_komplekti_iwMa on ಜೂನ್ 3, 2025 2:05 ಫೂರ್ವಾಹ್ನ

      Модерни дамски комплекти за офиса и ежедневието на достъпни цени
      комплекти дрехи за жени https://komplekti-za-jheni.com .

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ವಿಮಾನ ನಿಲ್ದಾಣದಲ್ಲಿ ಮತ್ತೊಂದು ಸೌಲಭ್ಯ.

    ವಿರಾಟ್ ಕೊಹ್ಲಿ ರೆಸ್ಟೋರೆಂಟ್ ವಿರುದ್ಧ ಎಫ್ಐಆರ್.

    ಮಹೇಶ್ ಜೋಶಿ ಗೆ ತಪರಾಕಿ

    ಥಿಯೇಟರ್ ಸುಡುವ ಎಚ್ಚರಿಕೆ ಮಧ್ಯೆಯೂ ‘ಥಗ್ ಲೈಫ್’ ಪ್ರದರ್ಶನಕ್ಕೆ ಮುಂದಾದ ಕರ್ನಾಟಕದ ಚಿತ್ರಮಂದಿರಗಳು !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Davidbib ರಲ್ಲಿ ಜುಲೈ 15 ರಿಂದ ವಿಧಾನಮಂಡಲದ ಮುಂಗಾರು ಅಧಿವೇಶನ.
    • alkogolizmsmolenskvucky ರಲ್ಲಿ ಬೇಸಿಗೆಯಲ್ಲಿ ರಾಜ್ಯಕ್ಕೆ ಎಷ್ಟು ವಿದ್ಯುತ್ ಬೇಕು ಗೊತ್ತಾ.
    • how can i get generic paxil prices ರಲ್ಲಿ ಯಡಿಯೂರಪ್ಪ ಅವರನ್ನು ಅನುಕರಿಸುವ ವಿಜಯೇಂದ್ರ | Yediyurappa
    Latest Kannada News

    ವಿಮಾನ ನಿಲ್ದಾಣದಲ್ಲಿ ಮತ್ತೊಂದು ಸೌಲಭ್ಯ.

    ಜೂನ್ 2, 2025

    ವಿರಾಟ್ ಕೊಹ್ಲಿ ರೆಸ್ಟೋರೆಂಟ್ ವಿರುದ್ಧ ಎಫ್ಐಆರ್.

    ಜೂನ್ 2, 2025

    ಮಹೇಶ್ ಜೋಶಿ ಗೆ ತಪರಾಕಿ

    ಜೂನ್ 2, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    Auto ಚಾಲಕನ ಮೇಲೆ ದರ್ಪ ತೋರಿದ ಮಹಿಳೆ ಕ್ಷಮೆ ಯಾಚಿಸಿದರು.
    Subscribe