Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಪ್ರಿಯಾಂಕ್ ಖರ್ಗೆ ಕಟ್ಟಿಹಾಕಲು ರಣತಂತ್ರ
    ರಾಜಕೀಯ

    ಪ್ರಿಯಾಂಕ್ ಖರ್ಗೆ ಕಟ್ಟಿಹಾಕಲು ರಣತಂತ್ರ

    vartha chakraBy vartha chakraಜನವರಿ 3, 2023Updated:ಜನವರಿ 3, 2023ಯಾವುದೇ ಟಿಪ್ಪಣಿಗಳಿಲ್ಲ2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಚಿತ್ತಾಪುರ ಕ್ಷೇತ್ರ- ಸಮೀಕ್ಷೆ.
    ಆರ್.ಎಚ್.ನಟರಾಜ್,ಹಿರಿಯ ಪತ್ರಕರ್ತ.
    ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ರಾಜ್ಯ ಕಾಂಗ್ರೆಸ್ ಮಾಧ್ಯಮ ಸಮನ್ವಯ ಸಮಿತಿ ಮುಖಂಡ ಪ್ರಿಯಾಂಕ ಖರ್ಗೆ ಹೆಸರು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೇಳಿ‌ ಬರುತ್ತಿದೆ.ಸಂಘ ಪರಿವಾರದ ಕಟು ವಿರೋಧಿ, ಬಿಜೆಪಿ ಸರ್ಕಾರದ ಟೀಕಾಕಾರರನಾಗಿ ಗುರುತಿಸಲ್ಪಡುವ ಪ್ರಿಯಾಂಕ ಖರ್ಗೆ ಅವರನ್ನು ರಾಜಕೀಯವಾಗಿ ಕಟ್ಟಿ ಹಾಕಲು ಇದೀಗ ಬಿಜೆಪಿ ಮತ್ತು ಸಂಘ ಪರಿವಾರ ದೊಡ್ಡ ಪ್ರಮಾಣದಲ್ಲಿ ಕಾರ್ಯತಂತ್ರ ರೂಪಿಸಿದೆ.
    ಚಿತ್ತಾಪುರ ಕ್ಷೇತ್ರದಿಂದ ಇವರು ಮತ್ತೆ ಕಣಕ್ಕಿಳಿಯೋದು ಗ್ಯಾರೆಂಟಿ. ಯಾಕಂದ್ರೆ ಮೀಸಲು ಕ್ಷೇತ್ರವಾದ ಚಿತ್ತಾಪುರದಲ್ಲಿ ಪ್ರಿಯಾಂಕಾ ಖರ್ಗೆ ಗೆಲ್ಲುವ ಕುದುರೆ ಆಗಿದ್ದಾರೆ. ಈ ಕ್ಷೇತ್ರ ಏಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರತಿಷ್ಠೆಯ ಕಣವಾಗಿದೆ. ಮೇಲ್ನೋಟಕ್ಕೆ ಪ್ರಿಯಾಂಕ ಖರ್ಗೆ ಗೆಲ್ಲುವ ಸಾಧ್ಯತೆ ಇದೆ.ಆದರೆ ಅದಕ್ಕಾಗಿ ಬಾರಿ ಸವಾಲು ಎದುರಿಸಬೇಕಾಗಿದೆ.
    ಒಂದು ಕಾಲದಲ್ಲಿ ಖರ್ಗೆ ಅವರ ಗರಡಿಯಲ್ಲಿ ಬೆಳೆದ ಕೋಲಿ ಸಮಾಜದ ಪ್ರಭಾವಿ ನಾಯಕ ಬಾಬುರಾವ್ ಚಿಂಚನಸೂರ್ ಈಗ ಬಿಜೆಪಿಯ ವಿಧಾನ ಪರಿಷತ್ ಸದಸ್ಯ. ಪ್ರಿಯಾಂಕ್ ಜೊತೆಗಿನ ವೈಮನಸ್ಯದಿಂದಲೇ ಅವರು ಕಾಂಗ್ರೆಸ್ ತೊರೆದಿದ್ದು,ಇವರ ಸೋಲಿಗೆ ಪಣ ತೊಟ್ಟಿದ್ದಾರೆ.
    ಮತ್ತೊಂದೆಡೆ ಜಿಲ್ಲಾ ಕಾಂಗ್ರೆಸ್ ನಲ್ಲಿರುವ ಕೆಲವರು ಪ್ರಿಯಾಂಕ್ ಜೊತೆಗೆ ಅಷ್ಟಕಷ್ಟೇ.ಇವರೆಲ್ಲಾ ಅವರ ಸೋಲಿಗಾಗಿ ಎದುರಾಳಿಗಳ ಜೊತೆ ಕೈ ಜೋಡಿಸುವ ಸಾಧ್ಯತೆಯಿದ್ದು,ಇದನ್ನು ಈಗಲೇ ಬಗೆಹರಿಸಿಕೊಳ್ಳದೇ ಹೋದರೆ ಚುನಾವಣೆಯಲ್ಲಿ ಹೆಚ್ಚು ಬೆವರು ಹರಿಸಬೇಕಾಗಬಹುದು.
    ಈ ಕ್ಷೇತ್ರದಲ್ಲಿ ಜೆಡಿಎಸ್ ನ ಪ್ರಭಾವ ಅಷ್ಟಾಗಿ ಇಲ್ಲ.ಬಿಜೆಪಿ ಸಾಕಷ್ಟು ಬಲಯುತವಾಗಿದೆ.ಇಲ್ಲಿ ಟಿಕೆಟ್ ಗಾಗಿ ಭಾರಿ ಪೈಪೋಟಿಯೇ ನಡೆಯುತ್ತಿದೆ
    ವಿಠ್ಠಲ್ ವಾಲ್ಮೀಕಿ ನಾಯಕ್, ಅರವಿಂದ್ ಚವ್ಹಾಣ್ ಮಣಿಕಂಠ ರಾಠೋಡ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಇವರ ಜೊತೆಗೆ ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕರ ಪತ್ನಿ ಜಯಶ್ರೀ ಮತ್ತಿಮೂಡ್ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
    ಮಣಿಕಂಠ ರಾಥೋಡ್ ಅವರಂತೂ ಪ್ರಿಯಾಂಕ್ ಖರ್ಗೆನ ಈ ಬಾರಿ ಮನೆಗೆ ಕಳಿಸೋದು ಗ್ಯಾರಂಟಿ ಅನ್ನುತ್ತಾರೆ ಅಲ್ಲದೆ ಇವರಿಬ್ಬರ ನಡುವಿನ ಜಿದ್ದಾ ಜಿದ್ದಿ ಕೂಡಾ ದೊಡ್ಡ ರೀತಿಯಲ್ಲಿ ಸದ್ದು ಮಾಡಿದೆ.
    ಮಾಡಿದೆ.
    ಕಲಬುರಗಿ ಜಿಲ್ಲೆಯ ಪ್ರಮುಖ ತಾಲೂಕು ಚಿತ್ತಾಪುರ. ಕೃಷ್ಣಾ ಮತ್ತು ಭೀಮನದಿಗಳು ಹರಿಯುವ ಈ ಕ್ಷೇತ್ರ ಕಾಂಗ್ರೆಸ್ನ ಭದ್ರಕೋಟೆ. 5 ದಶಕಗಳಲ್ಲಿ 1 ಬಾರಿ ಬಿಜೆಪಿ, 3 ಬಾರಿ ಜನತಾ ಪರಿವಾರದ ಗೆಲವು ಹೊರತು ಪಡಿಸಿದ್ರೆ, ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳದ್ದೇ ಗೆಲುವು. ಸಂಸದರಾದ ಮಲ್ಲಿಕಾರ್ಜುನ ಖರ್ಗೆ 2013ರಲ್ಲಿ ಚಿತ್ತಾಪುರ ಕ್ಷೇತ್ರವನ್ನ ಪುತ್ರನಿಗೆ ಬಿಟ್ಟುಕೊಟ್ಮೇಲೆ 2013 ಮತ್ತು 2018ರಲ್ಲಿ ಬಿಜೆಪಿಯ ವಾಲ್ಮೀಕಿ ನಾಯಕ್ ವಿರುದ್ಧ ಗೆಲುವು ಸಾಧಿಸಿದರು. ಇದೀಗ ಹ್ಯಾಟ್ರಿಕ್ ಗೆಲುವು ಸಾಧಿಸಲು ರೆಡಿಯಾಗ್ತಿದ್ದಾರೆ.
    ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನ ಪ್ರಿಯಾಂಕಾ ಖರ್ಗೆ 69700 ಮತಗಳನ್ನ ಪಡೆದುಕೊಂಡಿದ್ರು. 65,307 ಮತಗಳು ಪಡೆದಿದ್ದ ಎದುರಾಳಿ ಬಿಜೆಪಿ ವಾಲ್ಮೀಕಿ ನಾಯಕ್ ವಿರುದ್ಧ 4393 ಮತಗಳ ಅಂತರದಿಂದ ಗೆದ್ದು 2ನೇ ಬಾರಿ ವಿಧಾನಸೌಧ ಪ್ರವೇಶಿಸಿದ್ದರು
    ಚಿತ್ತಾಪುರ ಕ್ಷೇತ್ರದಲ್ಲಿ 56 ಸಾವಿರ ಲಿಂಗಾಯತ ಮತದಾರರಿದ್ದು, ಬಿಜೆಪಿಯ ಸಾಂಪ್ರದಾಯಿಕ ಮತಗಳಾಗಿವೆ. ಇನ್ನು ಲಿಂಗಾಯತ ಸಮುದಾಯದ ನಂತರ ಅತಿ ಹೆಚ್ಚು ಸಂಖ್ಯೆಯಲ್ಲಿರುವ ಕೋಲಿ ಸಮುದಾಯದ 45 ಸಾವಿರ ಮತದಾರರನ್ನು ತಮ್ಮತ್ತ ಬಿಜೆಪಿ ಸೆಳೆಯುತ್ತಿದೆ. ಇವರನ್ನು ಕಾಂಗ್ರೆಸ್ ತನ್ನತ್ತ ಒಲಿಸಿಕೊಳ್ಳಲೇ ಬೇಕು ಇಲ್ಲವಾದರೆ ಪ್ರಿಯಾಂಕ್ ಹಾದಿ ಕಠಿಣವಾಗಲಿದೆ.
    ಇನ್ನು ಎಸ್ಸಿ ಮತ್ತು ಎಸ್ಟಿ ಸಮುದಾಯ 40 ಸಾವಿರ ಮುಸ್ಲಿಂ ಸಮುದಾಯದ 35 ಸಾವಿರ ಮತದಾರರು ಕಾಂಗ್ರೆಸ್ ಜೊತೆ ನಿಲ್ಲುವ ಸಾಧ್ಯತೆಯಿದೆ. 32 ಸಾವಿರ ಲಂಬಾಣಿ ಮತದಾರರಲ್ಲಿ ಬಹುತೇಕರು ಬಿಜೆಪಿ ಪರವಾಗಿದ್ದಾರೆ. 21000 ಕುರುಬ ಮತದಾರರು, ಎಂಟು ಸಾವಿರ ಗಾಣಿಗ ಮತದಾರರು ಕಾಂಗ್ರೆಸ್ ಪರವಿರುವುದು ಪ್ರಿಯಾಂಕ್ ಗೆಲುವಿಗೆ ಸಹಕಾರಿಯಾಗಲಿವೆ.

    ಚಿತ್ತಾಪುರ ಜಾತಿ ಸಮೀಕರಣ..
    ಲಿಂಗಾಯತ – 56000
    ಕೋಲಿ – 45000
    SC – ST – 40000
    ಮುಸ್ಲಿಂ – 35000
    ಲಂಬಾಣಿ – 32,000
    ಕುರುಬ – 21000
    ಗಾಣಿಗ – 8000
    ಬ್ರಾಹ್ಮಣ – 5000

    ಕಾಂಗ್ರೆಸ್ ರಾಜಕೀಯ
    Share. Facebook Twitter Pinterest LinkedIn Tumblr Email WhatsApp
    Previous Articleಮರೆಯಾದ ದಿವ್ಯಜ್ಯೋತಿ ಸಿದ್ದೇಶ್ವರ ಸ್ವಾಮೀಜಿ
    Next Article SM Krishna ಸಕ್ರಿಯ ರಾಜಕಾರಣದಿಂದ ನಿವೃತ್ತಿ
    vartha chakra
    • Website

    Related Posts

    ತಾಳಿ ಕಟ್ಟಿಸಿಕೊಳ್ಳಬೇಕಿದ್ದ ವಧು ಮಾಡಿದ್ದೇನು ಗೊತ್ತೇ ?

    ಮೇ 23, 2025

    ಸೋಮವಾರಪೇಟೆ ಜನರ ಕನಸು ಈಡೇರಿತು.

    ಮೇ 23, 2025

    ಪರಮೇಶ್ವರ್ ವಿರುದ್ಧ ಇಡಿ ದಾಳಿ ಯಾಕೆ ಗೊತ್ತಾ ?

    ಮೇ 22, 2025

    Comments are closed.

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಮುಂಗಾರು ಮಳೆಗೆ ಮಂತರ್ ಗೌಡ ಪ್ಲಾನ್ ಅಫ್ ಆಕ್ಷನ್

    ತಾಳಿ ಕಟ್ಟಿಸಿಕೊಳ್ಳಬೇಕಿದ್ದ ವಧು ಮಾಡಿದ್ದೇನು ಗೊತ್ತೇ ?

    ತಮನ್ನಾ ಬೆಂಬಲಕ್ಕೆ ನಿಂತ ಎಂ.ಬಿ.ಪಾಟೀಲ್

    ಸೋಮವಾರಪೇಟೆ ಜನರ ಕನಸು ಈಡೇರಿತು.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Michaelcandy ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎ.ಎಂ.ಬಸವರಾಜು ಸಸ್ಪೆಂಡ್
    • Michaelcandy ರಲ್ಲಿ ಸಿ.ಟಿ.ರವಿಗೆ ಬಿಜೆಪಿ ಹೈಕಮಾಂಡ್ ಗಿಫ್ಟ್ | CT Ravi
    • https://t.me/s/bbwcamsnet ರಲ್ಲಿ ಡಿ ಬಾಸ್ ದರ್ಶನ್ ಬಿಡುಗಡೆ ಯಾವಾಗ ಗೊತ್ತಾ.
    Latest Kannada News

    ಮುಂಗಾರು ಮಳೆಗೆ ಮಂತರ್ ಗೌಡ ಪ್ಲಾನ್ ಅಫ್ ಆಕ್ಷನ್

    ಮೇ 23, 2025

    ತಾಳಿ ಕಟ್ಟಿಸಿಕೊಳ್ಳಬೇಕಿದ್ದ ವಧು ಮಾಡಿದ್ದೇನು ಗೊತ್ತೇ ?

    ಮೇ 23, 2025

    ತಮನ್ನಾ ಬೆಂಬಲಕ್ಕೆ ನಿಂತ ಎಂ.ಬಿ.ಪಾಟೀಲ್

    ಮೇ 23, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ರಾಮನಗರ ಅಲ್ಲ.. ಇನ್ಮುಂದೆ ಬೆಂಗಳೂರು ದಕ್ಷಿಣ ! #dkshivakumar #hdkumarswamy #congress #bangaloresouth
    Subscribe