ಬೆಂಗಳೂರು,
ಅನುದಾನ ಹಂಚಿಕೆ ವಿಚಾರವಾಗಿ ಕೇಂದ್ರ ಸರ್ಕಾರದ ಜೊತೆ ನಿರಂತರ ಸಂಘರ್ಷ ಮಾಡುತ್ತಿರುವ ರಾಜ್ಯ ಸರ್ಕಾರ ಇದೀಗ ಮತ್ತೊಂದು ಸುತ್ತಿನ ಸಮರ ಘೋಷಣೆ ಮಾಡಿದೆ.
ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮಾರ್ಪಡಿಸಿ ಕೇಂದ್ರ ಸರ್ಕಾರ ಹೊಸದಾಗಿ ರೂಪಿಸಿರುವ ವಿಬಿಜಿ ರಾಮ್ ಜಿ ಕಾನೂನನ್ನು ರಾಜ್ಯದಲ್ಲಿ ಜಾರಿಗೆ ತರುವುದಿಲ್ಲ ಎಂದು ಘೋಷಿಸಿದೆ ಅಷ್ಟೇ ಅಲ್ಲ ಕೇಂದ್ರ ಸರ್ಕಾರದ ಈ ನೂತನ ಕಾಯಿದೆ ಸಿಂಧುತ್ವವನ್ನು ಕೋರ್ಟಿನಲ್ಲಿ ಪ್ರಶ್ನೆ ಮಾಡಲು ತೀರ್ಮಾನ ಮಾಡಿದೆ.
ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯನ್ನು ರದ್ದುಪಡಿಸಿ ಕೇಂದ್ರ ಸರ್ಕಾರ ವಿಬಿಜಿ ರಾಮ್ ಜಿ ಕಾಯ್ದೆಯನ್ನು ರೂಪಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಜಾರಿಯಲ್ಲಿದ್ದ ಉದ್ಯೋಗ ಖಾತ್ರಿ ಕಾಯ್ದೆ ರದ್ದು ಪಡಿಸಲು ತೀರ್ಮಾನಿಸಿರುವ ರಾಜ್ಯ ಸಂಪುಟ ಸಭೆ ಕೇಂದ್ರ ಸರ್ಕಾರದ ನೂತನ ಕಾಯಿದೆಯನ್ನು ಜಾರಿಗೊಳಿಸಿದರಲು ನಿರ್ಧರಿಸಿದೆ.
ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಕೇಂದ್ರ ಸರ್ಕಾರದ ನೂತನ ಕಾಯಿದೆಯನ್ನು ಜಾರಿಗೆ ತರುವ ರಾಜ್ಯಗಳ ಮೇಲೆ ಉಂಟಾಗುವ ಪರಿಣಾಮಗಳು ಮತ್ತು ಕಾಯ್ದೆಯಲ್ಲಿರುವ ಲೋಪ ದೋಷಗಳ ಬಗ್ಗೆ ಸಂಪುಟ ಸಭೆಯಲ್ಲಿ ಅಡ್ವೋಕೇಟ್ ಜನರಲ್ ಅವರಿಂದ ಮಾಹಿತಿ ಪಡೆಯಲಾಯಿತು ಎಂದು ಹೇಳಿದರು.
ಆನಂತರ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರದ ನೂತನ ಕಾಯಿದೆಯನ್ನು ಜಾರಿಗೆ ತರದಿರಲು ನಿರ್ಣಯಿಸಲಾಯಿತು ಎಂದು ಹೇಳಿದರು.
ಸಂಪುಟ ಸಭೆಯ ನಿರ್ಣಯ:
ಈ ಕಾಯ್ದೆಯು ಭಾರತದ ಸಂವಿಧಾನದ 21ನೇ ವಿಧಿಯಲ್ಲಿ ಉಲ್ಲೇಖಿಸಿರುವಂತೆ ನಾಗರಿಕರ ಕೆಲಸ ಮತ್ತು ಜೀವನೋಪಾಯದ ಹಕ್ಕನ್ನು ಉಲ್ಲಂಘಿಸುತ್ತದೆ.
ಈ ಕಾಯ್ದೆಯು ಸಂವಿಧಾನ ಬದ್ಧವಾಗಿ ನೀಡಲಾದ ಪಂಚಾಯತಿಗಳ ನ್ಯಾಯಸಮ್ಮತ ಹಕ್ಕುಗಳನ್ನು ತುಳಿಯುತ್ತದೆ ಮತ್ತು ಸಂವಿಧಾನೃ 73ನೇ ಮತ್ತು 74ನೇ ತಿದ್ದುಪಡಿಗಳ ಧೋರಣೆಗೆ ವಿರುದ್ಧವಾಗಿದೆ. ಸ್ಥಳೀಯ ಅಗತ್ಯತೆಗಳಿಗೆ ಅನುಗುಣವಾಗಿ ಕೆಳಗಿನಿಂದ ಮೇಲ್ಮಟ್ಟಕ್ಕೆ ಯೋಜನೆ ವಿಧಾನವನ್ನು ರಾಜಿ ಮಾಡಲಾಗಿದೆ.
ಈ ಕಾಯ್ದೆಯು ರಾಜ್ಯಗಳನ್ನು ಸಮಾಲೋಚನಾ ಪ್ರಕ್ರಿಯೆಯಿಂದ ಸಂಪೂರ್ಣವಾಗಿ ಹೊರಗಿಟ್ಟಿದ್ದಲ್ಲದೆ, ರಾಜ್ಯಗಳು ಯೋಜನೆಯ ಶೇ.40ರಷ್ಟು ಹಣವನ್ನು ಭರಿಸಬೇಕೆಂದು ಏಕ ಪಕ್ಷಿಯವಾಗಿ ಕೈಗೊಂಡಿರುವ ತೀರ್ಮಾನ ಖಂಡನಾರ್ಹ
ಇಂತಹ ಮಹತ್ವದ ಬದಲಾವಣೆಗಳ ಬಗ್ಗೆ ಕೇಂದ್ರ ಸರ್ಕಾರವು ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸದೆ ಕ ಏಕಪಕ್ಷೀಯವಾಗಿ ನಿರ್ಧರಿಸಿದ ನಿಯಮಗಳು ಮತ್ತು ಷರತ್ತುಗಳು ಸಾಂಸ್ಥಿಕ ವ್ಯವಸ್ಥೆಗೆ ಮಾರಕವಾಗಿವೆ
ವಿಬಿ ಜಿ ಆರ್ಎಎಂ ಜಿ ಕಾಯ್ದೆಯು ಗ್ರಾಮೀಣ ಜನರ ಸಾಮಾಜಿಕ ಮತ್ತು ಆರ್ಥಿಕ ಹಕ್ಕುಗಳಲ್ಲಿ ಗಂಭೀರ ವಿಕೃತಿಯಾಗಿದೆ ಏಕೆಂದರೆ ಒಂದೆಡೆ ಕೇಂದ್ರ ಸರ್ಕಾರವು ಅಧಿಸೂಚಿತಗೊಳಿಸಿದ ಪ್ರದೇಶಗಳಲ್ಲಿ ಮಾತ್ರ ಕಾಮಗಾರಿಗಳು ಲಭ್ಯವಿರುತ್ತವೆ ಮತ್ತು ಮತ್ತೊಂದೆಡೆ ಕೇಂದ್ರವು ನಿಗದಿಪಡಿಸಿದ ಕೂಲಿ ದರದಲ್ಲಿ, ರಾಜ್ಯ ಸರ್ಕಾರಗಳು ನಿಗದಿಪಡಿಸಿದ ಕನಿಷ್ಠ ಕೂಲಿಗೆ ಯಾವುದೇ ಖಾತರಿ ಇಲ್ಲ
ಈ ಕಾಯ್ದೆಯು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಕಲ್ಪಿಸಿದ ‘ಗ್ರಾಮ ಸ್ವರಾಜ್ಯ’ದ ಧೋರಣೆಯನ್ನು ಹಾಳುಮಾಡುತ್ತದೆ ಏಕೆಂದರೆ ಪಂಚಾಯತ್ಗಳಿಗೆ ಸ್ಥಳೀಯ ಅಗತ್ಯತೆಗಳಿಗೆ ಅನುಗುಣವಾಗಿ ಕಾಮಗಾರಿಗಳನ್ನು ಆಯ್ಕೆಮಾಡುವ ಅಥವಾ ಕಾಮಗಾರಿಗಳ ಆದ್ಯತೆಯನ್ನು ನಿರ್ಧರಿಸುವ ಸ್ವಾತಂತ್ರ್ಯ ಕಸಿದುಕೊಂಡಿದೆ.
ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿ ಸ್ಥಳೀಯ ಸಂಸ್ಥೆಗಳ ಅಧಿಕಾರವನ್ನು ಕಸಿದುಕೊಂಡು ಏಕ ಪಕ್ಷಿಯವಾಗಿ ಜಾರಿಗೊಳಿಸಿರುವ ವಿಬಿಜಿ ರಾಮ್ ಜಿ ಕಾಯಿದೆಯನ್ನು ಜನತಾ ನ್ಯಾಯಾಲಯಕ್ಕೆ ಕೊಂಡೊಯ್ಯಲು ತೀರ್ಮಾನಿಸಲಾಗಿದೆ ಈ ಬಗ್ಗೆ ವಿಶೇಷ ಗ್ರಾಮ ಸಭೆಗಳನ್ನು ನಡೆಸಿ ಜನರಿಗೆ ಅರಿವು ಮೂಡಿಸಲು ನಿರ್ಧರಿಸಲಾಗಿದೆ.
Previous Articleಮನೆ ಸುಡಲು ಹೋದವನ ಕತೆ ಏನಾಯ್ತು ಗೊತ್ತಾ?
Next Article ಪ್ರಹ್ಲಾದ್ ಜೋಷಿ ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಸವಾಲು


9 ಪ್ರತಿಕ್ರಿಯೆಗಳು
Iver Therapeutics Iver Therapeutics Iver Therapeutics
http://neuroreliefusa.com/# Neuro Relief USA
Iver Therapeutics: Iver Therapeutics – ivermectin australia
https://neuroreliefusa.shop/# neurontin 800 pill
zoloft generic: zoloft without dr prescription – generic for zoloft
https://neuroreliefusa.com/# neurontin 300 mg caps
https://neuroreliefusa.com/# Neuro Relief USA
modafinil online pharmacy: Smart GenRx USA – Smart GenRx USA
http://neuroreliefusa.com/# Neuro Relief USA