ನವದೆಹಲಿ,ಜೂ.21-ಅಯ್ಯೋ ನನಗೆ ಭಯವಾಗುತ್ತಿದೆ, ಮಾತೆತ್ತಿದರೆ ED ಅಧಿಕಾರಿಗಳು ತಿಹಾರ್ ಜೈಲು ಎನ್ನುತ್ತಿದ್ದು, ಈ ರಾಜಕೀಯನೂ ಬೇಡ, ಚುನಾವಣೆನೂ ಬೇಡ, ನನಗೆ ಚಿಕ್ಕ ಮಕ್ಕಳಿದ್ದಾರೆ. ಈ ಸಂಕಷ್ಟಗಳಿಂದ ಆಚೆ ಬಂದರೇ ಸಾಕು ಎಂದು ಯೂಸುಫ್ ಷರಿಫ್ ಅಲಿಯಾಸ್ ಕೆಜಿಎಫ್ ಬಾಬು ಆತಂಕ ವ್ಯಕ್ತಪಡಿಸಿದ್ದಾರೆ.
ಎರಡು ದಿನಗಳ ED ವಿಚಾರಣೆ ಬಳಿಕ ಅವರು, ಪ್ರಕರಣ ಸಂಬಂಧ ವಕೀಲರನ್ನು ಸಂಪರ್ಕ ಮಾಡಿದ್ದಾರೆ. ED ದಾಳಿ ವೇಳೆ ಜಪ್ತಿ ಮಾಡಿದ್ದ ನಾಲ್ಕು ಕೆಜಿ ಚಿನ್ನವನ್ನು ವಾಪಸ್ ಪಡೆಯಲು ಪ್ರಯತ್ನ ಮಾಡುತ್ತಿದ್ದು, ಪ್ರಕರಣದ ಮುಂದಿನ ಹಂತಗಳ ಬಗ್ಗೆ ಕಾನೂನು ಸಲಹೆ ಪಡೆಯುತ್ತಿದ್ದಾರೆ.
ವಕೀಲರ ಭೇಟಿಗೂ ಮುನ್ನ ಮಾತನಾಡಿದ ಕೆಜಿಎಫ್ ಬಾಬು, ಎಂಎಲ್ಸಿ ಚುನಾವಣೆ ಸ್ಪರ್ಧೆ ಮಾಡಿದ್ದೇ ತಪ್ಪಾಯಿತು, ರಾಜಕೀಯವಾಗಿ ಗುರಿ ಮಾಡಲಾಗುತ್ತಿದೆ. ನನ್ನದು ಎಲ್ಲ ಸರಿಯಾದ ವ್ಯವಹಾರ (ವೈಟ್ ಬ್ಯುಸಿನೆಸ್ )1,740 ಕೋಟಿ ಆಸ್ತಿ ಘೋಷಣೆ ಮಾಡಿದ್ದೇನೆ. ಅದಕ್ಕೆ ಸರಿಯಾಗಿ ತೆರಿಗೆ ಕಟ್ಟುತ್ತಿದ್ದೇನೆ, ಕಾನೂನು ರೀತಿಯಲ್ಲಿ ನಡೆದರೂ ED ಬಿಡುತ್ತಿಲ್ಲ ಎಂದಿದ್ದಾರೆ.
ಐಟಿ, ಸಿಸಿಬಿ, ED ಒಬ್ಬರಾದ ಮೇಲೆ ಒಬ್ಬರು ದಾಳಿ ಮಾಡುತ್ತಿದ್ದಾರೆ. ನನ್ನದು ನಾಲ್ಕು ಕೆಜಿ ಚಿನ್ನವನ್ನು ಜಪ್ತಿ ಮಾಡಿದ್ದಾರೆ. ಅದನ್ನು ಬಿಡಿಸಿಕೊಳ್ಳಲು ಬಂದಿದ್ದೇನೆ. ವಕೀಲರನ್ನು ಸಂಪರ್ಕಿಸಿ ನ್ಯಾಯಾಲಯದ ಮೂಲಕ ಚಿನ್ನ ವಾಪಸ್ ಪಡೆಯಲು ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
Previous Articleಶುದ್ದ ಕುಡಿಯುವ ನೀರಿಗಾಗಿ ವಸತಿ ನಿಲಯ ವಿದ್ಯಾರ್ಥಿಗಳ ಪರದಾಟ
Next Article ಕುಖ್ಯಾತ ಕಳ್ಳರ ಬಂಧನ