ಬೆಂಗಳೂರು,ಜೂ.7
ರಾಜಧನಗರದ ಹೊರವಲಯದ ಆನೇಕಲ್ ಬಳಿಯ ಹೀಲಲಿಗೆ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿರುವ ಘಟನೆ ಪೊಲೀಸರನ್ನೇ ಬೆಚ್ಚಿಬೀಳುವಂತೆ ಮಾಡಿದೆ.
ಎಂದಿನಂತೆ ಠಾಣೆಯಲ್ಲಿ ಪೊಲೀಸರು ಕರ್ತವ್ಯ ನಿರತರಾಗಿದ್ದರು. ಈ ವೇಳೆ ಬ್ಯಾಗ್ ಹಿಡಿದು ಒಳಬಂದ ವ್ಯಕ್ತಿಯೊಬ್ಬ ಅದರೊಳಗೆ ಇದ್ದ ರುಂಡವನ್ನು ಪೊಲೀಸರ ಟೇಬಲ್ ಮೇಲೆ ಇಟ್ಟು ನಾನು ಕೊಲೆ ಮಾಡಿದ್ದೇನೆ ನನ್ನನ್ನು ಬಂಧಿಸಿ ಎಂದಿದ್ದಾನೆ.
ಈ ವಿದ್ಯಮಾನ ಕರ್ತವ್ಯದಲ್ಲಿದ್ದ ಪೊಲೀಸರನ್ನು ಬೆಚ್ಚಿ ಬೀಳುವಂತೆ ಮಾಡಿದೆ.
ಪ್ರಿಯಕರನ ಜೊತೆ ಸರಸವಾಡುತ್ತಿದ್ದ ಪತ್ನಿಯನ್ನು ರೆಡ್ ಹ್ಯಾಂಡಾಗಿ ಹಿಡಿದು ರೊಚ್ಚಿಗೆದ್ದ ಪತಿ ಆಕೆಯ ಕತ್ತು ಕತ್ತರಿಸಿ ರುಂಡವನ್ನು ಕೈಯಲ್ಲಿ ಹಿಡಿದುಕೊಂಡು ಸೂರ್ಯನಗರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಹೆನ್ನಾಗರ ನಿವಾಸಿ ಶಂಕರ್(28) ತನ್ನ ಪತ್ನಿ ಮಾನಸ ಳ ರುಂಡ ಕಡಿದು ಬೈಕ್ ನಲ್ಲೇ ಹಿಡಿದುಕೊಂಡು ಸೂರ್ಯನಗರ ಠಾಣೆಗೆ ಬಂದಿದ್ದಾನೆ.
ಶಂಕರ್ ಹಾಗೂ ಮಾನಸ ಇಬ್ಬರೂ ಪ್ರೀತಿಸಿ 5 ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ದಂಪತಿ ತಿಂಗಳ ಹಿಂದಷ್ಟೇ ಹೀಲಲಿಗೆ ಗ್ರಾಮದ ಬಾಡಿಗೆ ಮನೆಗೆ ಬಂದಿದ್ದರು ಇದೇ ತಿಂಗಳು 3ನೇ ತಾರೀಕು ರಾತ್ರಿ ಕೆಲಸ ನಿಮಿತ್ತ ತೆರಳಿದ್ದ ಶಂಕರ್, ಪತ್ನಿಗೆ ಬೆಳಗ್ಗೆ ಬರುವುದಾಗಿ ಹೇಳಿ ಹೋಗಿದ್ದ. ಆದರೆ ತಡರಾತ್ರಿಯೇ ಮನೆಗೆ ಬಂದಿದ್ದಾನೆ. ಈ ವೇಳೆ ಪತ್ನಿ ಕಳ್ಳಾಟ ಬಯಲಾಗಿದೆ.
ಈ ವೇಳೆ ಪತ್ನಿ ತನ್ನ ಪ್ರಿಯಕರನ ಜೊತೆ ಚಕ್ಕಂದವಾಡುತ್ತಿದ್ದುದು ಆತನಿಗೆ ಕಂಡುಬಂದಿದೆ. ಮಹಿಳೆ ರೆಡ್ ಹ್ಯಾಂಡ್ ಆಗಿ ಪ್ರಿಯಕರನ ಜೊತೆ ಸಿಕ್ಕಿಬಿದ್ದಿದ್ದಾಳೆ. ಇದನ್ನು ಕಂಡು ಆಕ್ರೋಶಗೊಂಡ ಶಂಕರ್ ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾನೆ. ಪತ್ನಿಯ ಸಹವಾಸ ಬೇಡ ಎಂದು ಆಕೆಯನ್ನು ಪ್ರಿಯಕರನ ಜೊತೆಯೇ ಕಳುಹಿಸಿದ್ದಾನೆ. ಆದರೆ ಪತ್ನಿ ಮಾನಸ ಮಾತ್ರ ಪದೇ ಪದೆ ಮನೆಗೆ ಬಂದು ಗಂಡ ಶಂಕರ್ಗೆ ಹಿಂಸೆ ನೀಡುತ್ತಿದ್ದಳು.
ನಿನ್ನೆ ರಾತ್ರಿ ಸಹ ಮನೆಗೆ ಬಂದು ಗಲಾಟೆ ಮಾಡಿದ್ದಾಳೆ. ಇದರಿಂದ ಕೋಪಗೊಂಡ ಶಂಕರ್ ಆಕೆಯ ತಲೆ ಕಡಿದು ಪೊಲೀಸ್ ಠಾಣೆಗೆ ತಂದಿದ್ದಾನೆ. ದೂರು ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿಯನ್ನು ಬಂಧಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.