Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಮಾನವೀಯತೆ ಮೆರೆದ ‘ಕೋಟಿಗೊಬ್ಬ’ ಖ್ಯಾತಿಯ ಇರ್ಫಾನ್
    ಸಿನೆಮ

    ಮಾನವೀಯತೆ ಮೆರೆದ ‘ಕೋಟಿಗೊಬ್ಬ’ ಖ್ಯಾತಿಯ ಇರ್ಫಾನ್

    vartha chakraBy vartha chakraಜನವರಿ 30, 2023Updated:ಮಾರ್ಚ್ 20, 20235 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು
    ರಾಜಕಾರಣಿಗಳು, ಅದರಲ್ಲೂ ಅಧಿಕಾರಸ್ಥ ರಾಜಕಾರಣಿಗಳು, ಪ್ರಯಾಣಿಸುವ ಮಾರ್ಗ ಮಧ್ಯೆ ರಸ್ತೆ ಅವಘಡದಲ್ಲಿ ಯಾರಾದರೂ ಸಿಲುಕಿದರೆ ಅವರ ನೆರವಿಗೆ ಧಾವಿಸುವ ಮೂಲಕ ಮಾನವೀಯತೆ ಮೆರೆದು ಪ್ರಚಾರದೊಂದಿಗೆ ಜನರ ಮೆಚ್ಚುಗೆ ಗಳಿಸುತ್ತಿದ್ದಾರೆ. ಇಂತಹ ನೆರವಿಗೆ ಸಾಕಷ್ಟು ಪ್ರಚಾರ ಪಡೆದುಕೊಂಡರೂ ಜನತೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಅವರ ಸಕಾಲಿಕ ನೆರವು ಮತ್ತು ಮಾನವೀಯತೆಯನ್ನು ಕೊಂಡಾಡುತ್ತಾರೆ.

    ಆದರೆ ಇಲ್ಲೊಬ್ಬ ಸೆಲೆಬ್ರಿಟಿ ನಟ ತಾನು ಮಾಡಿದ ಸಹಾಯಕ್ಕೆ ಯಾವುದೇ ಪ್ರಚಾರ ಬಯಸದೆ, ಸಹಾಯ ಮಾಡಿ ಸದ್ದಿಲ್ಲದೆ ಹೋಗಿದ್ದಾರೆ. ವಾರಾಂತ್ಯದಲ್ಲಿ ಬೆಂಗಳೂರಿನಿಂದ ಹೊರ ಹೋದವರು ಭಾನುವಾರ ಸಂಜೆಯ ವೇಳೆಗೆ ಮತ್ತೆ ಬೆಂಗಳೂರಿಗೆ ವಾಪಾಸಾಗುವುದು ವಾಡಿಕೆ. ಹೀಗಾಗಿ ಹೊರ ಊರುಗಳಿಂದ ವಾಪಸ್ ಬರುವ ವೇಳೆ ನಗರ ಪ್ರವೇಶಿಸುವ ಎಲ್ಲಾ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಇರುತ್ತದೆ. ಭಾನುವಾರ ಸಂಜೆ ನೆಲಮಂಗಲದ ಮೇಲ್ಸೇತುವೆಯಲ್ಲಿ ಇಂತಹದೇ ದಟ್ಟಣೆ ಇತ್ತು. ಇದರಲ್ಲಿ ನಾರಾಯಣ್ ಎಂಬುವ ಹಿರಿಯ ನಾಗರಿಕರು ತಮ್ಮ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದ ಕಾರು ಕೆಟ್ಟು ನಿಂತಿತ್ತು. ಕಿರಿದಾದ ರಸ್ತೆಯಲ್ಲಿ ಕಾರು ಕೆಟ್ಟು‌ ನಿಂತ ಪರಿಣಾಮ ಕಿರಿದಾದ ಮೇಲ್ಸೇತುವೆಯಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ಕೆಳಗೆ ಹೇಗೆ ಹೋಗಬೇಕೆಂದು ಗೊತ್ತಾಗದೆ ನಾರಾಯಣ್ ತಮ್ಮ ಕುಟುಂಬ ಸದಸ್ಯರೊಂದಿಗೆ ರಸ್ತೆ ಪಕ್ಕದಲ್ಲಿ ನಿಂತರೆ, ಇತರೆ ವಾಹನಗಳ ಸವಾರರು ಏನೆಂದು ಸೌಜನ್ಯಕ್ಕೂ ವಿಚಾರಿಸದೆ ಅವರನ್ನು ಮತ್ತು ನಿಂತಿರುವ ಕಾರನ್ನು ಕಂಡು ಎಲ್ಲರೂ ಕೆಂಗಣ್ಣು ಬೀರಿ ಹೋಗುತ್ತಿದ್ದರು.

    ಈ ವೇಳೆ ಕೋಟಿಗೊಬ್ಬ ಸಿನಿಮಾದ ನಟ ಇರ್ಫಾನ್ ತನ್ನ ಸ್ನೇಹಿತರೊಂದಿಗೆ ಅದೇ ರಸ್ತೆಯಲ್ಲಿ ಹೋಗುತ್ತಿದ್ದರು. ತಕ್ಷಣ ತಮ್ಮ ಹೋಂಡಾ ಸಿಟಿ ಕಾರನ್ನು ನಿಲ್ಲಿಸಿದ ಅವರು ರಸ್ತೆಯಲ್ಲಿ ಆತಂಕದಲ್ಲಿ ನಿಂತಿದ್ದ ನಾರಾಯಣ್ ಅವರನ್ನು ವಿಚಾರಿಸಿ ಕೆಟ್ಟು ನಿಂತ ಕಾರಿನ ಪರಿಶೀಲನೆ ಮಾಡಿದರು. ಆ ಕಾರಿನ ಕ್ಲಚ್ ಪ್ಲೇಟ್ ತುಂಡಾಗಿತ್ತು. ಇದನ್ನು ಕಂಡ ಅವರು ಅದೇ ರಸ್ತೆಯಲ್ಲಿ ಹೋಗುವ ವಾಹನಗಳನ್ನು ನಿಲ್ಲಿಸಿ, ಲಗೇಜ್ ಆಟೋದವರಿಂದ ಹಗ್ಗ ಪಡೆದು ತಮ್ಮ ಕಾರಿಗೆ ಕಟ್ಟಿ ಎಳೆದುಕೊಂಡು ಹೋಗಲು ಪ್ರಯತ್ನಿಸಿದ್ದಾರೆ. ಆದರೆ ಆ ಹಗ್ಗ ಕೂಡ ತುಂಡಾಗಿದೆ. ಆದರೂ ಧೃತಿಗೆಡದ ನಟ ಇರ್ಫಾನ್ ಕಾರನ್ನು ಸುಮಾರು ಒಂದೂವರೆ ಕಿಲೋಮೀಟರ್ ತಳ್ಳಿಕೊಂಡು ಬಂದು ಕಾರನ್ನು ಮೇಲ್ಸೇತುವೆಯಿಂದ ಕೆಳಗಿಳಿಸಿ, ನಂತರ ಆ ಕುಟುಂಬವನ್ನು ಬೇರೊಂದು ವಾಹನದಲ್ಲಿ ಮನೆಗೆ ಕಳುಹಿಸಿ ನಂತರ ತಮ್ಮ ಹಾದಿಯಲ್ಲಿ ಸಾಗಿದ್ದಾರೆ. ನಟನ ನೆರವನ್ನು ನಾರಾಯಣ್ ಕುಟುಂಬ ಕೊಂಡಾಡಿ ಧನ್ಯವಾದ ಅರ್ಪಿಸಿದೆ.

    Bangalore Irfan sandalwood actors ಕಾರು ಸಿನಿಮ
    Share. Facebook Twitter Pinterest LinkedIn Tumblr Email WhatsApp
    Previous ArticleNCC ಸಮಾವೇಶದಲ್ಲಿ ಗುಡುಗಿದ ಪ್ರಧಾನಿ
    Next Article ರಾಜ್ಯದಲ್ಲಿ ಮತ್ತೆ CD Politics
    vartha chakra
    • Website

    Related Posts

    ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತಕ್ಕೆ ಅಸಲಿ ಕಾರಣ ಇಲ್ಲಿದೆ.

    ಜೂನ್ 6, 2025

    ಕಮಲ್ ಹಾಸನ್ ಗೆ ಹೈಕೋರ್ಟ್ ತಪರಾಕಿ.

    ಜೂನ್ 3, 2025

    ಥಿಯೇಟರ್ ಸುಡುವ ಎಚ್ಚರಿಕೆ ಮಧ್ಯೆಯೂ ‘ಥಗ್ ಲೈಫ್’ ಪ್ರದರ್ಶನಕ್ಕೆ ಮುಂದಾದ ಕರ್ನಾಟಕದ ಚಿತ್ರಮಂದಿರಗಳು !

    ಮೇ 31, 2025

    5 ಪ್ರತಿಕ್ರಿಯೆಗಳು

    1. l0tv2 on ಜೂನ್ 6, 2025 5:52 ಫೂರ್ವಾಹ್ನ

      buy generic clomiphene pill where can i get cheap clomiphene order cheap clomiphene without prescription how to get clomiphene without prescription clomid for men where to get generic clomiphene no prescription cost clomid without a prescription

      Reply
    2. cialis 20mg tadalafil on ಜೂನ್ 9, 2025 10:50 ಅಪರಾಹ್ನ

      More delight pieces like this would create the web better.

      Reply
    3. allergy to flagyl on ಜೂನ್ 11, 2025 5:06 ಅಪರಾಹ್ನ

      Greetings! Jolly productive suggestion within this article! It’s the crumb changes which wish make the largest changes. Thanks a lot quest of sharing!

      Reply
    4. z7vtm on ಜೂನ್ 19, 2025 4:01 ಫೂರ್ವಾಹ್ನ

      brand inderal 10mg – order methotrexate pill methotrexate 5mg tablet

      Reply
    5. ssq4q on ಜೂನ್ 22, 2025 12:57 ಫೂರ್ವಾಹ್ನ

      cheap amoxicillin pill – combivent 100mcg over the counter combivent 100mcg us

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    E.D. ವಿಚಾರಣೆ ಎದುರಿಸಿದ ಡಿ.ಕೆ. ಸುರೇಶ್

    ಅಮಿತ್ ಶಾ ನಡೆಗೆ ಬೆದರಿದ ವಿಜಯೇಂದ್ರ.

    ಕೆ ಇ ಎ ಪ್ರಯೋಗಿಸಿದ ಬ್ರಹ್ಮಾಸ್ತ್ರ.

    ಸರ್ಕಾರದಲ್ಲಿ ಕಮೀಷನ್ ಹಾವಳಿ.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • EdwardNor ರಲ್ಲಿ ಹಾಲು ಕದೀತಾರೆ ಹುಷಾರ್
    • Stephenanync ರಲ್ಲಿ ಸರ್ಕಾರಕ್ಕೆ ಮುಜುಗರ ತಂದ ಬಿ.ಆರ್.ಪಾಟೀಲ್ ಲೆಟರ್ ಬಾಂಬ್ | BR Patil
    • Stephenanync ರಲ್ಲಿ ಕೇಂದ್ರ ಮಂತ್ರಿ ಸೋಮಣ್ಣ ಮಗನ ವಿರುದ್ಧ FIR.
    Latest Kannada News

    E.D. ವಿಚಾರಣೆ ಎದುರಿಸಿದ ಡಿ.ಕೆ. ಸುರೇಶ್

    ಜೂನ್ 23, 2025

    ಅಮಿತ್ ಶಾ ನಡೆಗೆ ಬೆದರಿದ ವಿಜಯೇಂದ್ರ.

    ಜೂನ್ 20, 2025

    ಕೆ ಇ ಎ ಪ್ರಯೋಗಿಸಿದ ಬ್ರಹ್ಮಾಸ್ತ್ರ.

    ಜೂನ್ 20, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಮೋದಿಯನ್ನೇ ಕಾಪಿ ಮಾಡಿದ್ರಾ ಟ್ರಂಪ್ #narendramodi #donaldtrump #viralvideo #facts #iran #israel #war
    Subscribe