ಬೆಂಗಳೂರು.
ರಾಜಧಾನಿ ಮಹಾನಗರ ಬೆಂಗಳೂರಿನಲ್ಲಿ 28 ವಿಧಾನಸಭೆ ಕ್ಷೇತ್ರಗಳಿದ್ದು 28 ಜನ ಶಾಸಕರು ಇದ್ದಾರೆ.
ಈ ಶಾಸಕರ ಕಾರ್ಯವೈಖರಿ ಮತ್ತು ಆಸ್ತಿ ಪಾಸ್ತಿಗಳ ಕುರಿತಂತೆ ಸಿವಿಕ್ ಸಂಸ್ಥೆ ಸಮೀಕ್ಷೆ ನಡೆಸಿದೆ.
ನಮ್ಮ ನೇತಾ ನಮ್ಮ ರಿವ್ಯೂ ಹೆಸರಿನಲ್ಲಿ ನಡೆದ ಈ ಸಮೀಕ್ಷೆಯಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ಕುರಿತಂತೆ ಹಲವು ಆಶ್ಚರ್ಯಕರ ಸಂಗತಿಗಳು ಬೆಳಕಿಗೆ ಬಂದಿವೆ.
ಒಂದು ವಿಶೇಷವೆಂದರೆ ನಗರದ ಎಲ್ಲಾ ಶಾಸಕರ ಆಸ್ತಿ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಾ ಸಾಗಿದೆ. ಹಾಗೆಯೇ ಶಾಸಕರ ಕ್ಷೇತ್ರ ಅಭಿವೃದ್ಧಿ ನಿಧಿ ಬಳಕೆಯಲ್ಲಿಯೂ ನಗರದ ಶಾಸಕರು ತೀವ್ರ ನಿರಾಸಕ್ತಿ ವಹಿಸಿರುವ ಸಂಗತಿ ಬೆಳಕಿಗೆ ಬಂದಿದೆ.
ಬೆಂಗಳೂರಿನ 28 ಶಾಸಕರ ಪೈಕಿ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಶಾಸಕ ಬಿಜೆಪಿಯ ಗೋಪಾಲಯ್ಯ ಮೊದಲ ಸ್ಥಾನದಲ್ಲಿದ್ದಾರೆ. ಇದು ಯಾವ ವಿಚಾರದಲ್ಲಿ ಎಂದರೆ ಅವರ ಆದಾಯದ ವಿಚಾರದಲ್ಲಿ.ಗೋಪಾಲಯ್ಯ ಅವರ ಆದಾಯವು ಶೇ.1,399 ರಷ್ಟು ಹೆಚ್ಚಳವಾಗಿದ್ದು, ನಂ.1 ಸಿರಿವಂತ ಎನಿಸಿಕೊಂಡಿದ್ದಾರೆ.
ನಂತರದ ಸ್ಥಾನದಲ್ಲಿರುವ ಮುನಿರತ್ನ ಅವರ ಆದಾಯ ಪ್ರಮಾಣವು ಶೇ.959 ರಷ್ಟು ಹೆಚ್ಚಳವಾಗಿದ್ದರೆ, ಮೂರನೇ ಸ್ಥಾನದಲ್ಲಿರುವ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ ಅವರ ಆದಾಯವು ಶೇ.318 ಹಾಗೂ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರ ಆದಾಯವು ಶೇ.104 ರಷ್ಟು ಹೆಚ್ಚಳವಾಗಿದ್ದು, ನಾಲ್ಕನೇ ಸ್ಥಾನ ಕಾಯ್ದುಕೊಂಡಿದ್ದಾರೆ.
Previous Articleಬೈಕ್ ಟ್ಯಾಕ್ಸಿ ಸೇವೆ ನಿಂತು ಹೋಯಿತು !
Next Article ಸತೀಶ್ ಜಾರಕಿಹೊಳಿ ಯಾಕೆ ಹೀಗೆ ಹೇಳಿದರು ?