ಬೆಂಗಳೂರು:
ವಿಧಾನಸಭೆ ಚುನಾವಣೆಯ ಮೇಲೆ ಕಣ್ಣಿಟ್ಟಿರುವ BJP ಮತ್ತೊಮ್ಮೆ ಅಧಿಕಾರಕ್ಕೆ ಬರಲು ಶತಾಯ ಗತಾಯ ಪ್ರಯತ್ನ ನಡೆಸಿದೆ. ಇದಕ್ಕಾಗಿ ರಾಜ್ಯದ ನಾಲ್ಕು ದಿಕ್ಕುಗಳಿಂದ March ಮೊದಲ ವಾರದಲ್ಲಿ ಏಕಕಾಲಕ್ಕೆ ರಥಯಾತ್ರೆ (Rath Yatra) ಕೈಗೊಳ್ಳಲು ನಿರ್ಧರಿಸಿದೆ. ಇದಕ್ಕಾಗಿ ಸಿದ್ಧತೆ ಆರಂಭವಾಗಿದ್ದು, ಯಾತ್ರೆ ನಾಲ್ಕು ತಂಡಗಳಲ್ಲಿ 20-25 ದಿನಗಳ ಕಾಲ ನಡೆಯಲಿದೆ.
ಎಲ್ಲಾ ಸಮುದಾಯದವರನ್ನು ತನ್ನತ್ತ ಸೆಳೆಯುವ ದೃಷ್ಟಿಯಿಂದ ಈ ರಥಯಾತ್ರೆಯ ರಥಗಳಿಗೆ ವಿವಿಧ ಸಮುದಾಯಗಳ ಪ್ರಮುಖರ ಹೆಸರನ್ನಿಡಲು ತೀರ್ಮಾನಿಸಿದೆ. ಒಕ್ಕಲಿಗ ಸಮುದಾಯದ ಮತಗಳನ್ನು ಸೆಳೆಯುವ ದೃಷ್ಟಿಯಿಂದ ಕೆಂಪೇಗೌಡ (Kempegowda) ರ ಹೆಸರಿನಲ್ಲಿ ರಥ ಸಿದ್ಧವಾಗುತ್ತಿದೆ. ಅದೇ ರೀತಿಯಲ್ಲಿ ಸಂಗೊಳ್ಳಿ ರಾಯಣ್ಣ (Sangolli Rayanna), ಕಿತ್ತೂರು ರಾಣಿ ಚೆನ್ನಮ್ಮ (Kittur Rani Chennamma), ಮಹರ್ಷಿ ವಾಲ್ಮೀಕಿ (Valmiki ), ನಾರಾಯಣ ಗುರು (Narayana Guru), ಮಲೆ ಮಹದೇಶ್ವರ (Male Mahadeshwara) ಮೊದಲಾದ ಹೆಸರುಗಳನ್ನು ಪರಿಶೀಲಿಸುತ್ತಿದ್ದು, ಇವುಗಳನ್ನು ರಥಗಳಿಗೆ ಹೆಸರಿಸುತ್ತಿದ್ದು, ಇವುಗಳ ನೇತೃತ್ವವನ್ನು ಆಯಾ ಸಮುದಾಯದ ಮುಖಂಡರಿಗೆ ನೀಡಲು BJP ಯ ಚಿಂತಕರ ಚಾವಡಿ ನಿರ್ಧರಿಸಿದೆ.
ಈ ರಥಯಾತ್ರೆಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai ), ನಳಿನ್ಕುಮಾರ್ ಕಟೀಲ್ (Nalinkumar Kateel), ಅರುಣ್ಸಿಂಗ್ (Arun Singh), ಬಿ.ಎಸ್.ಯಡಿಯೂರಪ್ಪ (BS Yediyurappa), ಜಗದೀಶ ಶೆಟ್ಟರ್ (Jagadish Shettar), ಕೆ.ಎಸ್.ಈಶ್ವರಪ್ಪ (K.S Eshwarappa) ಶ್ರೀರಾಮುಲು (Sreeramulu) ನೇತೃತ್ವದಲ್ಲಿ ಸಾಗಲಿವೆ
ಇವರ ಜತೆ ರಾಜ್ಯ ಮತ್ತು ಕೇಂದ್ರದ ಸಚಿವರು ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ‘ಯಾತ್ರೆಯ ವಿವರಗಳು ಎರಡು ದಿನಗಳಲ್ಲಿ ಹೊರಬೀಳಲಿವೆ. 224 ವಿಧಾನಸಭಾ ಕ್ಷೇತ್ರಗಳಿಗೂ ರಥಯಾತ್ರೆ ಪ್ರವೇಶಿಸಲಿದೆ. ಅಂತಿಮವಾಗಿ ನಾಲ್ಕು ಯಾತ್ರೆಗಳ ಮಹಾಸಂಗಮ ದಾವಣಗೆರೆಯಲ್ಲಿ ನಡೆಯಲಿದೆ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವಲ್ಲಿ ಈ ಯಾತ್ರೆಗಳು ನಿರ್ಣಾಯಕವಾಗಲಿವೆ. ಈ ಯಾತ್ರೆಯ ಮೂಲಕ ಬಿಜೆಪಿ ಪರವಾದ ಅಲೆ ಎಬ್ಬಿಸುವುದು ಬಿಜೆಪಿ ನಾಯಕರ ಉದ್ದೇಶಿಸವಾಗಿದೆ.


2 ಪ್ರತಿಕ್ರಿಯೆಗಳು
Если вы хотите повысить безопасность и удобство маневрирования, рекомендуем купить камеру заднего вида для грузового автомобиля.
Камера заднего вида на грузовик становится все более популярным устройством среди водителей большегрузных автомобилей.
Для обеспечения максимальной безопасности на дороге рекомендуем приобрести камера заднего вида для коммерческого транспорта.
Такой обзор особенно полезен при движении назад в тесных местах или на загруженных парковках.