ಬೆಂಗಳೂರು, ಸೆ.20 – ಜಾಲಹಳ್ಳಿಯ ವಾಯುಪಡೆ (ಏರ್ ಫೋರ್ಸ್- Air Force) ಕಾಂಪೌಂಡ್ನಲ್ಲಿ ಬೆಲೆ ಬಾಳುವ ಶ್ರೀಗಂಧದ ಮರವನ್ನು ದುಷ್ಕರ್ಮಿಗಳು ಕತ್ತರಿಸಿಕೊಂಡು ಪರಾರಿಯಾಗಿದ್ದಾರೆ.
ಶ್ರೀಗಂಧದ ಮರ ಕಳ್ಳತನ ಬಗ್ಗೆ ಏರ್ ಫೋರ್ಸ್ ಅಧಿಕಾರಿ ಭಾಸ್ಕರ್ ಘೋಶ್ ಪೊಲೀಸ್ ಠಾಣೆಗೆ ದೂರು ನೀಡಿ ಕಾಂಪೌಂಡ್ ನಲ್ಲಿ ಹಲವು ವರ್ಷಗಳಿಂದ ಬೆಳೆದಿದ್ದ ಶ್ರೀಗಂಧದ ಮರವನ್ನು ಮಧ್ಯರಾತ್ರಿ ದುಷ್ಕರ್ಮಿಗಳು ಕಳವು ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಕಳವಿನ ಸಂಬಂಧ ಅರಣ್ಯ ಕಾಯ್ದೆ 1963 ರೀತ್ಯಾ, 86,IPC 1860-379 ಅಡಿಯಲ್ಲಿ ಗಂಗಮ್ಮ ಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.