ಭಾರತದ ನೆರೆಯ ರಾಷ್ಟ್ರ ಬಾಂಗ್ಲಾದೇಶ ಭಾರತಕ್ಕೆ ಅತ್ಯಾಪ್ತ ರಾಷ್ಟ್ರವಾಗಿ ಕಂಡುಬಂದಂಥ ರಾಷ್ಟ್ರ. ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಿ, ಪಾಕಿಸ್ತಾನವನ್ನು ಭಾರತ ಇಬ್ಭಾಗ ಮಾಡಿದ ನಂತರ ಪೂರ್ವ ಪಾಕಿಸ್ತಾನ ಬಾಂಗ್ಲಾದೇಶವಾಗಿ ಸ್ಥಾಪಿತವಾಯಿತು. ಅಂದಿನಿಂದ ಇಂದಿನವರೆಗೆ ಬಾಂಗ್ಲಾದೇಶ, ಭಾರತಕ್ಕೆ ನಿಷ್ಟವಾಗಿ ಆಪ್ತವಾಗಿಯೇ ಉಳಿದಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಮುನಿಸು ಮತ್ತು ಸಮರಗಳಲ್ಲಿಯೂ ಕೂಡ ಬಾಂಗ್ಲಾದೇಶ ಪಾಕಿಸ್ತಾನದ ಪರ ನಿಲ್ಲದೆ ಭಾರತಕ್ಕೆ ನೈತಿಕ ಬೆಂಬಲವನ್ನು ನೀಡುತ್ತಾ ಬಂದಿದೆ. ಆರಂಭದಿಂದಲೂ ಬಾಂಗ್ಲಾದೇಶದಲ್ಲಿ ಅನೇಕ ಬಾರಿ ಸರ್ಕಾರಗಳು ಬದಲಾದರೂ ಕೂಡ ಬಾಂಗ್ಲಾದೇಶ ಮತ್ತು ಭಾರತದ ನಡುವಿನ ಸಂಬಂಧ ಆತ್ಮೀಯವಾಗಿಯೇ ಇತ್ತು. ಆದರೆ ಕಳೆದ ವರ್ಷ ಬಾಂಗ್ಲಾದೇಶದಲ್ಲಿ ನಡೆದ ಜನಾಂದೋಲನದ ಸಮಯದಲ್ಲಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಭಾರತಕ್ಕೆ ಪಲಾಯನ ಮಾಡಿದರು. ಭಾರತ ಅವರಿಗೆ ಆಶ್ರಯ ನೀಡಿತು. ಆನಂತರ ಬಾಂಗ್ಲಾದೇಶದ ಮುಖ್ಯಸ್ಥರನ್ನಾಗಿ ಮೊಹಮ್ಮದ್ ಯೂನಸ್ ಅವರು ನೇಮಿಸಲ್ಪಟ್ಟರು. ಯೂನಸ್ ಅವರ ಸರ್ಕಾರ ಭಾರತದೊಂದಿಗೆ ಒಳ್ಳೆಯ ಸಂಬಂಧವನ್ನು ನಿರ್ಲಕ್ಷಿಸುತ್ತದೆ ಎಂದು ಹೇಳಿದರು. ಆದರೆ ಶೇಖ್ ಹಸೀನಾ ಅವರನ್ನು ಬಾಂಗ್ಲಾದೇಶಕ್ಕೆ ಕಳಿಸಿ, ಅವರ ವಿರುದ್ಧ ಕಾನೂನುಕ್ರಮ ಕೈಗೊಳ್ಳಬೇಕಿದೆ ಎಂದು ಭಾರತದ ಮೇಲೆ ಬಾಂಗ್ಲಾದೇಶ ಒತ್ತಡವನ್ನು ಹೇರುತ್ತಾ ಬಂದಿತ್ತು. ಆದರೆ ಈ ಮಧ್ಯೆ ಬಾಂಗ್ಲಾದೇಶದಲ್ಲಿ ಮುಸಲ್ಮಾನ ಬಲಪಂಥೀಯ ಸಂಘಟನೆಗಳು ಅತ್ಯಂತ ಹೆಚ್ಚು ಪ್ರಭಾವವನ್ನು ಬೀರತೊಡಗಿದ್ದು. ಬಾಂಗ್ಲಾದೇಶವನ್ನು ಸಂಪೂರ್ಣವಾಗಿ ಇಸ್ಲಾಮೀಕರಣಗೊಳಿಸಿ. ಇಸ್ಲಾಮಿಕ್ ರೀತಿಯಲ್ಲಿ ಬಾಂಗ್ಲಾದೇಶವನ್ನು ನಡೆಸುವ ಪ್ರಯತ್ನಗಳು ಆರಂಭವಾಗಿವೆ. ಈ ನಿಟ್ಟಿನಲ್ಲಿ ತನ್ನ ಐತಿಹಾಸಿಕ ಮೂಲವಾದ ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧ ವೃದ್ಧಿಗೊಳಿಸಲು ಬಾಂಗ್ಲಾದೇಶ ಹೆಣಗಾಡುತ್ತಿದೆ.
ಭಾರತದೊಂದಿಗಿನ ಸಂಬಂಧಕ್ಕಿಂತ ಪಾಕಿಸ್ತಾನದೊಂದಿಗೆ ಸಂಬಂಧವೇ ಮುಖ್ಯ ಎನ್ನುವ ರೀತಿಯಲ್ಲಿ ಬಾಂಗ್ಲಾದೇಶ ವರ್ತಿಸುತ್ತಿದೆ. ಹಾಗೆಯೇ ಬಾಂಗ್ಲಾದೇಶದ ಅನೇಕ ರಾಜಕೀಯ ನಾಯಕರು ಕೂಡ ಭಾರತದ ವಿರುದ್ಧ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಭಾರತದ ಪೂರ್ವ ಪ್ರಾಂತ್ಯದ ಸಪ್ತ ಸಹೋದರಿ ರಾಜ್ಯಗಳನ್ನು ಭಾರತದಿಂದ ಬೇರ್ಪಡಿಸುವ ಪ್ರಚೋದನಕಾರಿ ಹೇಳಿಕೆಗಳನ್ನು ಬಾಂಗ್ಲಾದೇಶದ ಕೆಲವು ನಾಯಕರು ನೀಡಿದ್ದಾರೆ. ಇತ್ತೀಚೆಗೆ ಆರಂಭವಾಗಿ ಬಹಳ ಜೋರಾಗಿ ನಡೆಯುತ್ತಿರುವ ದಂಗೆ ಮತ್ತು ಗಲಭೆಗಳಲ್ಲಿ ಬಾಂಗ್ಲಾದೇಶದ ಹಿಂದೂಗಳನ್ನು ಹಿಂಸಿಸಲಾಗುತ್ತಿದೆ. ಮಾತ್ರವಲ್ಲದೆ ಭಾರತದ ಮೇಲೆ ಶೇಖ್ ಹಸೀನಾರ ವಿಚಾರದಲ್ಲಿ ದೊಡ್ಡ ರೀತಿಯಲ್ಲಿ ಒತ್ತಡ ಹೇರುವ ಪ್ರಕ್ರಿಯೆಯೂ ಆರಂಭವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧ ವಿಷಮ ಸ್ಥಿತಿಯನ್ನು ತಲುಪಿದೆ. ಈಗ ಇದಕ್ಕೆ ಪರಿಹಾರ ಹೇಗೆ ಎನ್ನುವುದು ಭಾರತಕ್ಕೆ ತಲೆನೋವಾಗಿದೆ. ಇದನ್ನು ಹೀಗೇ ಬಿಡಲು ಸಾಧ್ಯವಿಲ್ಲ. ಒಂದು ಕಡೆ ಪಾಕಿಸ್ತಾನ, ಇನ್ನೊಂದು ಕಡೆ ಸತತವಾಗಿ ಚೇಷ್ಟೆ ಮಾಡುವ ಚೀನ. ದಕ್ಷಿಣದಲ್ಲಿ ಅಡ್ಡಗೋಡೆಯ ಮೇಲೆ ಕುಳಿತಂತೆ ವ್ಯವಹರಿಸುವ ಶ್ರೀಲಂಕಾ ಮತ್ತು ಈಗ ಹೊಸದಾಗಿ ಹುಟ್ಟಿಕೊಂಡಿರುವ ವೈರಿ, ಬಾಂಗ್ಲಾದೇಶ. ಹೀಗೆ ಆದರೆ ಹೇಗೆ ನಿಭಾಯಿಸುವುದು ಎಂದು ಸರ್ಕಾರ ಯೋಚಿಸಬೇಕಾಗಿದೆ. ಭಾರತಕ್ಕೆ ಸಧ್ಯಕ್ಕೆ ತನ್ನ ವಿದೇಶಾಂಗ ನೀತಿ ದೊಡ್ಡ ತಲೆನೋವಾಗಿದೆ. ಹೊಸ ಹೊಸ ಸವಾಲುಗಳು ಎದುರಾಗುವುದು ಈಗಂತು ಒಳ್ಳೆಯದಲ್ಲ. ಕೇಂದ್ರ ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಭಾರತದ ಅಂತಾರಾಷ್ಟ್ರೀಯ ಆಸಕ್ತಿಗಳನ್ನು ಕಾಪಾಡಿಕೊಂಡು ದೇಶವನ್ನು ಹಿಯರ್ ಹೊರೆಯೊಂದಿಗೆ ಸಂಬಂಧ ಉತ್ತಮ ಪಡಿಸಿಕೊಂಡು ರಕ್ಷಿಸಬೇಕಾಗಿದೆ.


17 ಪ್ರತಿಕ್ರಿಯೆಗಳು
canadian pharmacy price checker: SteadyMeds – SteadyMeds pharmacy
SteadyMeds: canadian pharmacy 24h com – SteadyMeds
AccessBridge Pharmacy: progreso, mexico pharmacy online – AccessBridge
AccessBridge Pharmacy: AccessBridge – AccessBridge Pharmacy
AccessBridge Pharmacy: AccessBridge Pharmacy – AccessBridge Pharmacy
AccessBridge: AccessBridge – AccessBridge Pharmacy
best online canadian pharmacy: SteadyMeds – SteadyMeds
SteadyMeds: my canadian pharmacy review – canadian drug prices
online pharmacy no prescription: FormuLine Pharmacy – secure medical online pharmacy
mexico pharmacy list: mexican pharmacies – AccessBridge Pharmacy
buying from canadian pharmacies: SteadyMeds – canada pharmacy reviews
ed meds cheap: cheap erection pills – pharmacy online
legitimate online pharmacy: Pharm Rate – online pharmacy no prescription
Pharm Rate: Pharm Rate – Pharm Rate
where to buy ed pills: Ed Meds Coupon – no rx needed pharmacy
Pet Canada Direct: Pet Canada Direct – Pet Canada Direct
pet meds for dogs: Pet Canada Direct – Pet Canada Direct