ಬೆಂಗಳೂರು, ಮಾ.03: ಬಯಲು ಸೀಮೆ ಜಿಲ್ಲೆಗಳ ಅಂತರ್ಜಲ ಅಭಿವೃದ್ದಿಗಾಗಿ ರಾಜ್ಯ ಸರ್ಕಾರ ಮತ್ತೊಂದು ಬೃಹತ್ ಯೋಜನೆ ರೂಪಿಸಿದೆ. ಬೆಂಗಳೂರು ಗ್ರಾಮಾಂತರ ಹಾಗೂ ತುಮಕೂರಿನ 70 ಕೆರೆಗಳಿಗೆ ಸಂಸ್ಕರಿತ ನೀರು ತುಂಬಿಸುವ ಯೋಜನೆ ಇದಾಗಿದೆ.
ಮೊದಲ ಹಂತದಲ್ಲಿ 1081 ಕೋಟಿ ವೆಚ್ಚದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆ ಬೆಂಗಳೂರು ನಗರದ ಕೊಳಚೆ ನೀರು ಸಂಸ್ಕರಿಸಿ ಹರಿಯಬಿಡಲಾಗಿತ್ತು.ಇದೀಗ ಮತ್ತೊಂದು ಹಂತದಲ್ಲಿ ರೂಪಿಸಿರುವ ಯೋಜನೆಯ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ.
ಈ ಬಗ್ಗರ ಮಾಹಿತಿ ನೀಡಿರುವ ಎಂದು ಸಣ್ಣ ನೀರಾವರಿ ಸಚಿವ ಎನ್ ಎಸ್ ಭೋಸರಾಜು,
ವೃಷಾಭವತಿ ಕಣಿವೆಯ ಶುದ್ದೀಕರಿಸಿದ ನೀರನ್ನ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ವಿವಿಧ ಏತ ನೀರಾವರಿ ಯೋಜನೆಗಳ ಮೂಲಕ ನೀರನ್ನು ಕೆರೆಗಳಿಗೆ ಹರಿಸಿ ಅಂತರ್ಜಲ ಅಭಿವೃದ್ದಿಪಡಿಸುವ ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರಲಾಗಿದೆ ಎಂದು ಹೇಳಿದ್ದಾರೆ.
ಈಗಾಗಲೆ ಕೆ.ಸಿ ವ್ಯಾಲಿ ಯೋಜನೆ, ಹೆಚ್.ಎನ್. ವ್ಯಾಲಿ ಯೋಜನೆ, ಆನೇಕಲ್ ಏತ ನೀರಾವರಿ ಮತ್ತು ಇತರೆ ಯೋಜನೆಗಳಿಂದ ಸುಮಾರು 860 ಎಂ.ಎಲ್.ಡಿ ರಷ್ಟು ಪ್ರತಿನಿತ್ಯ ಯಶಸ್ವಿಯಾಗಿ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಇದರಿಂದ ಅಂತರ್ಜಲ ಮಟ್ಟ ಗಣನೀಯವಾಗಿ ಹೆಚ್ಚಿದ ಪರಿಣಾಮ, ಬೋರ್ ವೆಲ್, ಬಾವಿ ಮತ್ತು ಇತರೆ ನೀರಿನ ಮೂಲಗಳು ಪುನಶ್ಚೇತನಗೊಂಡಿವೆ.
ಈ ಭಾಗದ ರೈತಾಪಿ ವರ್ಗದವರ ಆರ್ಥಿಕ ಮಟ್ಟ ಹೆಚ್ಚಳಕ್ಕೆ ಅನುವು ಮಾಡಿಕೊಟ್ಟಿರುವುದು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆಗೊಳಪಟ್ಟಿರುತ್ತದೆ ಎಂದಿದ್ದಾರೆ ಕಳೆದ ಕೆಲ ದಶಕಗಳಿಂದ ಬಯಲುಸೀಮೆ ಪ್ರದೇಶಗಳಾದ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸತತ ಮಳೆಯ ವೈಫಲ್ಯದಿಂದಾಗಿ ನದಿಗಳು, ಕೆರೆಗಳು, ಹಳ್ಳ ಕೊಳ್ಳಗಳು ನೀರಿಲ್ಲದೆ ಬರಡಾಗಿವೆ. ಈ ಭಾಗದ ರೈತಾಪಿ ವರ್ಗದವರು ಬೇರೆ ಯಾವುದೇ ನೀರಿನ ಮೂಲಗಳು ಇಲ್ಲದೇ ಕೊಳವೆ ಬಾವಿಗಳನ್ನು ಅವಲಂಬಿಸಿರುತ್ತಾರೆ. ಆದರೆ, ಅತಿಯಾದ ಅಂತರ್ಜಲ ಬಳಕೆಯಿಂದ ಅಂತರ್ಜಲ ಮಟ್ಟವು ಅಂಕಿ ಅಂಶಗಳ ಅನ್ವಯ ಸುಮಾರು 1000-1200 ಅಡಿಗಳಷ್ಟು ಬಹುತೇಕ ಕುಸಿದಿದೆ.
ಈ ನಿಟ್ಟಿನಲ್ಲಿ ಅಂತರ್ಜಲ ವೃದ್ದಿಗಾಗಿ ಘನ ಸರ್ಕಾರವು ಬೆಂಗಳೂರು ನಗರದ ವೃಷಭಾವತಿ ವ್ಯಾಲಿ ಕಣಿವೆಯ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಸುಮಾರು 1081 ಕೋಟಿ ಮೊತ್ತದ ಮೊದಲನೇ ಹಂತದಲ್ಲಿ 70 ಕೆರೆಗಳಿಗೆ ನೀರನ್ನು ತುಂಬಿಸಲು ಯೋಜನೆಯನ್ನು ಕೈಗೆತ್ತಿಕೊಂಡಿದೆ. ಎರಡನೇ ಮತ್ತು ಮೂರನೇ ಹಂತದಲ್ಲಿ 189 ಕೆರೆಗಳನ್ನೊಳಗೊಂಡಂತೆ ಒಟ್ಟಾರೆಯಾಗಿ 259 ಕೆರೆಗಳಿಗೆ ಬೆಂಗಳೂರಿನಲ್ಲಿರುವ ರಾಜರಾಜೇಶ್ವರಿ ನಗರ ಬಿ.ಡಬ್ಲೂ.ಎಸ್.ಎಸ್.ಬಿ ನಾಯಂಡಹಳ್ಳಿ ತ್ಯಾಜ್ಯ ಸಂಸ್ಕರಣಾ ಘಟಕದಿಂದ 243 ಎಂ.ಎಲ್.ಡಿ, ಮೈಲಸಂದ್ರದ ತ್ಯಾಜ್ಯ ಸಂಸ್ಕರಣಾ ಘಟಕದಿಂದ 65 ಎಂ.ಎಲ್.ಡಿ ಒಟ್ಟಾರೆಯಾಗಿ 308 ಎಂ.ಎಲ್.ಡಿ ನೀರನ್ನ ಹರಿಸುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ ಎಂದು ವಿವರಿಸಿದ್ದಾರೆ.
ಬೆಂಗಳೂರು ನಗರದ ವೃಷಭಾವತಿ ವ್ಯಾಲಿಯಿಂದ ದ್ವೀತಿಯ ಹಂತದಲ್ಲಿ ಸಂಸ್ಕರಿಸಿದ 243 ಎಂ.ಎಲ್.ಡಿ ನೀರನ್ನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಯ 70 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಇದಾಗಿದೆ. 15.06.2023 ರಂದು ನಡೆದ 2 ಸಚಿವ ಸಂಪುಟ ಸಭೆಯಲ್ಲೇ ಇದಕ್ಕೆ ಅನುಮೋದನೆ ನೀಡಲಾಗಿತ್ತು. 36 ತಿಂಗಳ ಅವಧಿಯಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದ್ದು, 2 ಲಿಫ್ಟ್ಗಳ ಮೂಲಕ 70 ಕೆರೆಗಳಿಗೆ ನೀರು ಹರಿಸಲಾಗುತ್ತದೆ. ಸದರಿ ಯೋಜನೆಯಿಂದ ಸಂಸ್ಕರಿಸಿದ ನೀರು ಮರುಬಳಕೆಗೆ ಅನುವು ಮಾಡಿಕೊಡುವದಲ್ಲದೆ, ಅಂತರ್ಜಲ ವೃದ್ದಿ ಮೊದಲ ಉದ್ದೇಶವಾಗಿದೆ. ತ್ಯಾಜ್ಯ ಕೊಳಚೇ ನೀರು ನೇರವಾಗಿ ಕೆರೆಗಳೀಗೆ-ನದಿ-ಕೊಳಗಳೀಗೆ ಹರಿಯವುದನ್ನ ತಡೆಗಟ್ಟುವ ಮೂಲಕ ಅವುಗಳ ಮಾಲಿನ್ಯವನ್ನು ನಿಯಂತ್ರಿಸಬಹುದಾಗಿದೆ ಎಂದು ಸಚಿವ ಎನ್ ಎಸ್ ಭೋಸರಾಜು ತಿಳಿಸಿದ್ದಾರೆ.

1 ಟಿಪ್ಪಣಿ
Betano https://betanogame.org/nl/ verwelkomt winnaars. Ontvang 100% tot €500 plus gratis spins bij je eerste storting. Geniet van de soepelste casino-ervaring met topbeveiliging en snelle ondersteuning. Speel nu.