ಬೆಂಗಳೂರು – ಇತ್ತೀಚೆಗೆ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ ವೈಎಸ್ ವಿ ದತ್ತ ,ಮನೋಹರ ತಹಶೀಲ್ದಾರ್ ಸೇರಿದಂತೆ ಹಲವರಿಗೆ ಟಿಕೆಟ್ ಘೋಷಿಸಿರುವ ಜೆಡಿಎಸ್ ವಿಧಾನಸಭಾ ಚುನಾವಣೆಗೆ 50 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ ಕುಮಾರಸ್ವಾಮಿ ಅವರು ಪ್ರಕಟಿಸಿದರು.
ತೀವ್ರ ಕುತೂಹಲ ಕೆರಳಿಸಿದ್ದ ಹಾಸನ ವಿಧಾನಸಭಾ ಕ್ಷೇತ್ರದಿಂದ ಮಾಜಿ ಶಾಸಕ ದಿವಂಗತ ಎಚ್ಎಸ್ ಪ್ರಕಾಶ್ ಅವರ ಪುತ್ರ ಎಚ್.ಪಿ ಸ್ವರೂಪ್ ಅವರನ್ನು ಕಣಕ್ಕಿಳಿಸಲಾಗುತ್ತಿದ್ದು, ಶಾಸಕ ಎಚ್.ಡಿ ರೇವಣ್ಣ ಪತ್ನಿ ಭವಾನಿಗೆ ನಿರಾಶೆಯಾಗಿದೆ.
ಸಿವಿಲ್ ನ್ಯಾಯಾಧೀಶ ಹುದ್ದೆ ತ್ಯಜಿಸಿ ಜೆಡಿಎಸ್ ಸೇರಿದ್ದ ಸುಭಾಶ್ಚಂದ್ರ ರಾಠೋಡ್ ಅವರಿಗೆ ಚಿತ್ತಾಪುರ ಟಿಕೆಟ್ ಸಿಕ್ಕಿದೆ. ಸವದತ್ತಿಯಲ್ಲಿ ಸೌರಬ್ ಚೋಪ್ರಾ,ಕುಡುಚಿ ಕ್ಷೇತ್ರ – ಆನಂದ್ ಮಾಳಗಿ,
ರಾಯಭಾಗ – ಪ್ರದೀಪ್ ಮಾಳಗಿ,ಅಥಣಿ – ಶಿಶಿಕಾಂತ್ ಪಡಸಲಗಿ,ಹುಬ್ಬಳ್ಳಿ ಧಾರವಾಡ ಪೂರ್ವ – ವೀರಭದ್ರಪ್ಪ ಹಾಲರವಿ,ಕಲಬುರಗಿ ಉತ್ತರ – ನಾಸೀರ್ ಉಸ್ತಾದ್, ಬಳ್ಳಾರಿ – ಅಲ್ಲಾಭಕ್ಷ್ ಅಲಿಯಾಸ್ ಮುನ್ನ, ಹಗರಿಬೊಮನಹಳ್ಳಿ – ಪರಮೇಶ್ವರಪ್ಪ, ಹರಪ್ಪನಹಳ್ಳಿ – ನೂರ್ ಅಹಮದ್
ಹಳಿಯಾಳ – ಎಸ್.ಎಲ್. ಘೋಟ್ನೇಕರ್,
ಭಟ್ಕಳ – ನಾಗೇಂದ್ರ ನಾಯಕ್,ಶಿರಸಿ-ಸಿದ್ದಾಪುರ – ಉಪೇಂದ್ರ ಪೈ, ಯಲ್ಲಾಪುರ – ನಾಗೇಶ್ ನಾಯಕ್
ಚಿತ್ತಾಪುರ – ನಿವೃತ್ತ ನ್ಯಾಯಾಧೀಶ ಸುಭಾಷ್ ಚಂದ್ರ ರಾಥೋಡ್,ಮಂಗಳೂರು ದಕ್ಷಿಣ – ಸಮತಿ ಹೆಗಡೆ
ಜೇವರ್ಗಿ – ದೊಡ್ಡಪ್ಪಗೌಡ ಪಾಟೀಲ್
ಕಾರವಾರ – ಚೈತ್ರಾ ಕೋಟೇಕಾರ್
ಕಡೂರು – ವೈಎಸ್ವಿ ದತ್ತ
ಸಿರಗುಪ್ಪ – ಪರಮೇಶ್ವರ್ ನಾಯಕ್
ಕಂಪ್ಲಿ – ರಾಜು ನಾಯಕ್
ಕೊಳ್ಳೇಗಾಲ – ಪುಟ್ಟಸ್ವಾಮಿ
ಗುಂಡ್ಲುಪೇಟೆ – ಕಡಬೂರು ಮಂಜುನಾಥ್ ಅವರಿಗೆ ಟಿಕೆಟ್ ನೀಡಲಾಗಿದೆ.
ಹಾಸನದಲ್ಲಿ ಸಂಭ್ರಮ:
ಟಿಕೆಟ್ ಹಂಚಿಕೆಯ ಪಟ್ಟಿ ಹೊರಬರುತ್ತಿದ್ದಂತೆ ಜೆಡಿಎಸ್ ನ ಭದ್ರಕೋಟೆ ಹಾಸನದಲ್ಲಿ ಸಂಭ್ರಮ ಗರಿಗದರಿತು ಟಿಕೆಟ್ ಸಿಕ್ಕ ಸಂಭ್ರಮದಲ್ಲಿ ಸ್ವರೂಪ್ ಅವರ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಟಿಕೆಟ್ ಸಿಕ್ಕಿರುವ ಬಗ್ಗೆ ಸ್ವರೂಪ್ ಸಂತಸ ವ್ಯಕ್ತಪಡಿಸಿದ್ದಾರೆ.
‘ರೇವಣ್ಣ ಸಾಹೇಬ್ರು, ಭವಾನಿ ಮೇಡಂ ಎಲ್ಲರ ಸಹಕಾರದಿಂದ ಚುನಾವಣೆ ಗೆಲ್ಲುವ ವಿಶ್ವಾಸವಿದೆ. ನಿರೀಕ್ಷೆಯಂತೆಯೇ ಟಿಕೆಟ್ ಸಿಕ್ಕಿದೆ: ಇದರಿಂದ ಸಂತೋಷವಾಗಿದೆ. ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ನೂರಕ್ಕೆ ನೂರರಷ್ಟು ಗೆಲ್ಲಲಿದೆ. ದೇವೇಗೌಡರು, ರೇವಣ್ಣ ಸಾಹೇಬ್ರು, ಕುಮಾರಣ್ಣ ಅವರಿಗೆ ಋಣಿಯಾಗಿರುವೆ’ ಎಂದು ಸ್ವರೂಪ್ ಹೇಳಿದರು.
