Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ದರ್ಶನ್ ಬಂದರೂ ಜನ ಬರಲಿಲ್ಲ | Darshan | DBoss
    ರಾಜ್ಯ

    ದರ್ಶನ್ ಬಂದರೂ ಜನ ಬರಲಿಲ್ಲ | Darshan | DBoss

    vartha chakraBy vartha chakraಏಪ್ರಿಲ್ 20, 2023Updated:ಮೇ 9, 2023ಯಾವುದೇ ಟಿಪ್ಪಣಿಗಳಿಲ್ಲ2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು – ಸಿನಿಮಾ ರಂಗಕ್ಕೂ, ರಾಜಕಾರಣಕ್ಕೂ ಅವಿನಾಭಾವ ಸಂಬಂಧ ಸಂಬಂಧ. ಸಿನಿಮಾ ರಂಗದಲ್ಲಿ ಮಿಂಚಿದವರು ರಾಜಕಾರಣದಲ್ಲೂ ಒಂದು ಕೈ ನೋಡುವುದು ಇತ್ತೀಚೆಗೆ ಸಂಪ್ರದಾಯವಾಗಿದೆ.
    ಸಿನಿಮಾ ರಂಗದಲ್ಲಿನ ಜನಪ್ರಿಯತೆಯನ್ನು ರಾಜಕಾರಣದಲ್ಲಿ ಓರೆಗೆ ಹಚ್ಚುವ ಪ್ರಯತ್ನಗಳು ಕಾಲದಿಂದ ಕಾಲಕ್ಕೆ ನಡೆಯುತ್ತಲೇ ಬಂದಿದೆ.

    ಕೆಲವು ರಾಜಕಾರಣಿಗಳಂತು ಸೂಪರ್ ಸ್ಟಾರ್ ಗಳನ್ನು ,ಜನಪ್ರಿಯ ತಾರೆಯರನ್ನು ತಮ್ಮ ಪರವಾಗಿ ಪ್ರಚಾರಕ್ಕೆ ಕರೆತರುವ ಮೂಲಕ,ಜನರನ್ನು ಆಕರ್ಷಿಸುವುದು ಇತ್ತೀಚೆಗೆ ಒಂದು ಫ್ಯಾಶನ್ ರೀತಿಯಲ್ಲಿ ಆಗಿಬಿಟ್ಟಿದೆ.
    ಸಿನಿ ತಾರೆಯರಂತೂ ಈ ಕೆಲಸಕ್ಕೆ ಯಾವುದೇ ಪಕ್ಷಭೇದವಿಲ್ಲದೆ ತೊಡಗಿಕೊಳ್ಳುತ್ತಿದ್ದಾರೆ. ಇಲ್ಲಿ ಸಿನಿಮಾ ತಾರೆಯರಿಗೆ ಪ್ರಮುಖವಾಗುವುದು ಆ ಅಭ್ಯರ್ಥಿಯೊಂದಿಗೆ ತಮ್ಮ ಸ್ನೇಹ, ವಿಶ್ವಾಸ ಮತ್ತು ಹಣ. ಇದರ ಮೂಲಕ ತಾವು ಯಾರ ಪರ, ಎಲ್ಲಿ, ಎಷ್ಟು ಗಂಟೆ ಪ್ರಚಾರ ಮಾಡಬೇಕು ಎಂಬುದನ್ನು ನಿರ್ಧರಿಸಿಕೊಳ್ಳುತ್ತಾರೆ.

    Dboss
    ಕೆಲವು ಕಡೆಗಳಲ್ಲಂತೂ ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕೆ ಬರುವ ಸಿನಿಮಾ ತಾರೆಯರನ್ನು ನೋಡಲು ಅವರ ಅಭಿಮಾನಿಗಳು ಭಾರಿ ಪ್ರಮಾಣದಲ್ಲಿ ಸೇರುತ್ತಾರೆ ಇದರಿಂದ ಕೆಲ ಪ್ರಮಾಣದ ಮತ ತಮಗೆ ಸಿಗಬಹುದು ಎನ್ನುವುದು ಅಭ್ಯರ್ಥಿಗಳ ಲೆಕ್ಕಾಚಾರ.
    ಇದೇ ಲೆಕ್ಕಾಚಾರದಲ್ಲಿ ಶಕ್ತಿ ಪ್ರದರ್ಶನ ನಡೆಸಲು ಹೋದ ಕಾಂಗ್ರೆಸ್ಸಿನ ಅಭ್ಯರ್ಥಿಯೊಬ್ಬರ ಪರಿಸ್ಥಿತಿ ಯಾರಿಗೂ ಹೇಳಿಕೊಳ್ಳಲಾಗದಂತಾಗಿದೆ.
    ಬೆಂಗಳೂರಿನ ಅತ್ಯಂತ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾದ ಯಲಹಂಕ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕೇಶವ ರಾಜಣ್ಣ ನಾಮಪತ್ರ ಸಲ್ಲಿಸುವ ವೇಳೆ ಕನ್ನಡದ ಸೂಪರ್ ಸ್ಟಾರ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಕರೆ ತಂದಿದ್ದರು.

    ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ದರ್ಶನ್ ಅವರ ಅಭಿಮಾನಿಗಳ ಸಂಖ್ಯೆ ದೊಡ್ಡದಿದೆ. ಹಾಗೆ ಅವರ ಸಮುದಾಯಕ್ಕೆ ಸೇರಿದವರ ಮತಗಳ ಪ್ರಮಾಣವೂ ಹೆಚ್ಚಿನ ಪ್ರಮಾಣದಲ್ಲಿದೆ. ಇದೆಲ್ಲವನ್ನು ಲೆಕ್ಕದಲ್ಲಿಟ್ಟು ಕೇಶವರಾಜಣ್ಣ ಅಬ್ಬರದ ಪ್ರಚಾರ ಮಾಡಿ ಭಾರಿ ವೆಚ್ಚದೊಂದಿಗೆ ನಟ ದರ್ಶನ್ ಅವರನ್ನು ಕರೆ ತಂದಿದ್ದರು.
    ನಾಮಪತ್ರ ಸಲ್ಲಿಕೆಗೂ ಮುನ್ನ ಯಲಹಂಕದ ಪ್ರಮುಖ ಬೀದಿಗಳಲ್ಲಿ ದರ್ಶನ್ ಅವರೊಂದಿಗೆ ರೋಡ್ ಶೋ ನಡೆಸಿದರು. ಆದರೆ, ಈ ರೋಡ್ ಶೋನಲ್ಲಿ ಕೆಲವೇ 100 ರಷ್ಟು ಮಂದಿ ಮಾತ್ರ ಪಾಲ್ಗೊಂಡರೆ, ರಸ್ತೆಯ ಇಕ್ಕೆಲಗಳಲ್ಲಿ ಬೆರಣಿಕೆಯಷ್ಟು ಮಾತ್ರ ಜನ ಸೇರಿದ್ದರು. ಇದಕ್ಕೆ ನಿಜವಾದ ಕಾರಣ ಏನು ಎಂದು ಗೊತ್ತಾಗಿಲ್ಲ. ಆದರೆ, ಜನಸಾಮಾನ್ಯರ ವಲಯದಲ್ಲಿ ಇದು ಅಭ್ಯರ್ಥಿಯ ಜನಪ್ರಿಯತೆ, ದರ್ಶನ್ ಅವರ ಬಗೆಗಿನ ಅಭಿಮಾನ, ಇಲ್ಲವೇ ನಿಗಿನಿಗೆ ಕೆಂಡದಂತೆ ಸುಡುತ್ತಿರುವ ಬಿಸಿಲಿನ ಕಾರಣಕ್ಕೂ ಇರಬಹುದು ಎನ್ನುತ್ತಾರೆ. ಆದರೆ, ಒಂದೊಂದು ಸತ್ಯ. ಜನಪ್ರಿಯ ತಾರೆಯೊಬ್ಬರ ಪಾಲ್ಗೊಳ್ಳುವಿಕೆಯ ಮೂಲಕ ಮೆಗಾ ಶೋ ಆಗಬೇಕಾಗಿದ್ದ ಕಾರ್ಯಕ್ರಮವೊಂದು ಪ್ಲಾಪ್ ಶೋ ಆಯಿತು..

    darshan dboss Elections 2023 Karnataka ಕಾಂಗ್ರೆಸ್ ಸಿನಿಮ
    Share. Facebook Twitter Pinterest LinkedIn Tumblr Email WhatsApp
    Previous ArticleCheque Bounce ವೀರ ಇವರು!
    Next Article IT ದಾಳಿಯಲ್ಲಿ‌ ಸಿಕ್ಕಿದವು Voter ID | KGF Babu
    vartha chakra
    • Website

    Related Posts

    ಥಿಯೇಟರ್ ಸುಡುವ ಎಚ್ಚರಿಕೆ ಮಧ್ಯೆಯೂ ‘ಥಗ್ ಲೈಫ್’ ಪ್ರದರ್ಶನಕ್ಕೆ ಮುಂದಾದ ಕರ್ನಾಟಕದ ಚಿತ್ರಮಂದಿರಗಳು !

    ಮೇ 31, 2025

    HMT ಭೂಮಿ ಕಬಳಿಸಲು ಕುಮ್ಮಕ್ಕು ನೀಡಿದ ಅಧಿಕಾರಿಗಳು !

    ಮೇ 30, 2025

    Honey trap ಪ್ರಕರಣ ಏನಾಯ್ತು ಗೊತ್ತಾ ?

    ಮೇ 30, 2025

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ವಿಮಾನ ನಿಲ್ದಾಣದಲ್ಲಿ ಮತ್ತೊಂದು ಸೌಲಭ್ಯ.

    ವಿರಾಟ್ ಕೊಹ್ಲಿ ರೆಸ್ಟೋರೆಂಟ್ ವಿರುದ್ಧ ಎಫ್ಐಆರ್.

    ಮಹೇಶ್ ಜೋಶಿ ಗೆ ತಪರಾಕಿ

    ಥಿಯೇಟರ್ ಸುಡುವ ಎಚ್ಚರಿಕೆ ಮಧ್ಯೆಯೂ ‘ಥಗ್ ಲೈಫ್’ ಪ್ರದರ್ಶನಕ್ಕೆ ಮುಂದಾದ ಕರ್ನಾಟಕದ ಚಿತ್ರಮಂದಿರಗಳು !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • dove acquistare augmentin generico senza ricetta medica ರಲ್ಲಿ ಕುಂಭಮೇಳದಲ್ಲಿ ಕಿನ್ನರ ಕಲರವ
    • xleet. ರಲ್ಲಿ ಜೈಲಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ನಾನಾ ಸಮಸ್ಯೆ.
    • blackpassion ರಲ್ಲಿ ಜೈಲಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ನಾನಾ ಸಮಸ್ಯೆ.
    Latest Kannada News

    ವಿಮಾನ ನಿಲ್ದಾಣದಲ್ಲಿ ಮತ್ತೊಂದು ಸೌಲಭ್ಯ.

    ಜೂನ್ 2, 2025

    ವಿರಾಟ್ ಕೊಹ್ಲಿ ರೆಸ್ಟೋರೆಂಟ್ ವಿರುದ್ಧ ಎಫ್ಐಆರ್.

    ಜೂನ್ 2, 2025

    ಮಹೇಶ್ ಜೋಶಿ ಗೆ ತಪರಾಕಿ

    ಜೂನ್ 2, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    Auto ಚಾಲಕನ ಮೇಲೆ ದರ್ಪ ತೋರಿದ ಮಹಿಳೆ ಕ್ಷಮೆ ಯಾಚಿಸಿದರು.
    Subscribe