ಮಾಲೂರು : ಎತ್ತಿನಹೊಳೆ ಯೋಜನೆಯು 9 ವರ್ಷಗಳ ಹಿಂದೆಯೇ ಚಾಲನೆ ನೀಡಿಲಾಗಿದ್ದು ಕಾಮಗಾರಿಯ ಹೆಸರಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸರಕಾರಗಳು ಹಣವನ್ನು ಲೂಟಿ ಮಾಡಲಾಗುತ್ತಿದೆಯೆಂದು ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಆರೋಪಿಸಿದರು.
ಮಾಲೂರು ಪಟ್ಟಣದ ವೈಟ್ ಗಾರ್ಡನ್ ನ ಜಲಧಾರೆ ಕಾರ್ಯಕ್ರಮ ಉದ್ಘಾಟಿಸಿ ಮಾತನನಾಡಿದ ಅವರು ಡಿಪಿಆರ್ ನಲ್ಲಿ 8 ಸಾವಿರ ಕೋಟಿ ರೂ ಗಳಿಂದ 25 ಸಾವಿರ ಕೋಟಿ ರೂಗಳ ಏರಿಕೆ ಮಾಡಿದ್ದು ಕಾಮಗಾರಿಯು ಇನ್ನೂ ಸಹ ಪ್ರಾರಂಭದ ಹಂತದಲ್ಲೇ ಇದ್ದು ಪ್ರಸ್ತುತ ಕೋಲಾರ ಹಾಗು ಚಿಕ್ಕಬಳ್ಳಾಪುರ ಜಿಲ್ಲೆಯ ಜನರು ರಾಸಾಯನಿಕ ನೀರು ಕುಡಿಯುತ್ತಿದ್ದಾರೆಂದರಲ್ಲದೇ
ಬಿಜೆಪಿ ಮತ್ತು ಕಾಂಗ್ರೆಸ್ ಎರಡು ರಾಷ್ಟ್ರೀಯ ಪಕ್ಷಗಳು ನದಿಗಳ ಜೋಡಣೆಯಲ್ಲಿ ವಿಫಲರಾಗಿದ್ದಾರೆಂದರು.
ಸ್ಥಳೀಯವಾಗಿ ಪ್ರಾದೇಶಿಕ ಪಕ್ಷಕ್ಕೆ ಬಹುಮತ ಬಂದು ಅಧಿಕಾರಕ್ಕೆ ಬಂದ್ರೆ ಪ್ರತಿ ಮನೆಗೂ ನಾವು ಶುದ್ದ ನೀರು ಕೊಡ್ತೇವೆ. ಕೊಟ್ಟ ಮಾತು ಉಳಿಸಿಕೊಳ್ಳದೆ ಇದ್ರೆ ನಮ್ಮ ಪಕ್ಷವನ್ನು ವಿಸರ್ಜನೆ ಮಾಡ್ತೇನೆ ಎಂದರು