ಬೆಂಗಳೂರು,ನ.22-
ಇತ್ತೀಚೆಗೆ ತಮ್ಮ ಮೊನಚಾದ ಹೇಳಿಕೆಗಳು ಹಾಗೂ ರಾಜಕೀಯ ನಿಲುವುಗಳಿಂದ ಸದಾ ಸುದ್ದಿಯಲ್ಲಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಇದೀಗ ನ್ಯಾಯಮೂರ್ತಿ ಮೈಕೆಲ್ ಡಿ ಕುನ್ಹಾ ಅವರ ಕ್ಷಮೆ ಯಾಚಿಸಿದ್ದಾರೆ.
ನ್ಯಾಯಮೂರ್ತಿ ಮೈಕೆಲ್ ಡಿ ಕುನ್ಹಾ ಅವರು
ಹೈಕೋರ್ಟ್ ನಲ್ಲಿ ಇದ್ದಾಗ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ವಿರುದ್ಧದ ಪ್ರಕರಣ ಸೇರಿದಂತೆ ಹಲವು ಪ್ರಮುಖ ಪ್ರಕರಣಗಳ ವಿಚಾರಣೆ ನಡೆಸಿ ನೀಡಿದ ತೀರ್ಪು ಗಳು ದೇಶದ ಗಮನ ಸೆಳೆದಿವೆ.
ನ್ಯಾಯಮೂರ್ತಿಯಾಗಿ ಇವರ ಕಾರ್ಯ ವೈಖರಿ ಮತ್ತು ತೀರ್ಮಾನಗಳು ನ್ಯಾಯದಾನ ವ್ಯವಸ್ಥೆಯಲ್ಲಿ ಚಾರಿತ್ರಿಕ ಎಂದು ವಿಶ್ಲೇಷಿಸಲಾಗಿದೆ.
ಈ ಹಿಂದೆ ರಾಜ್ಯದಲ್ಲಿ ಕಾಣಿಸಿಕೊಂಡ ಮಾರಣಾಂತಿಕ
ಕೋವಿಡ್ ಸಾಂಕ್ರಾಮಿಕ ನಿಯಂತ್ರಿಸಲು ಮಾಡಲಾದ ಖರೀದಿ ಪ್ರಕ್ರಿಯೆಯಲ್ಲಿ ಭಾರಿ ಪ್ರಮಾಣದ ಅಕ್ರಮ ನಡೆದಿದೆ ಎಂಬ ಆರೋಪಗಳು ಮತ್ತು ಕೆಲವು ವರದಿಗಳ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ನ್ಯಾಯಮೂರ್ತಿ ಕುನ್ಹಾ ಅವರ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಲಾಗಿತ್ತು.
ಆಯೋಗ ಮಧ್ಯಂತರ ವರದಿ ನೀಡಿದೆ.ಇದರಲ್ಲಿ ಅಂದು ನಡೆದ ಖರೀದಿ ಪ್ರಕ್ರಿಯೆಯಲ್ಲಿ ಭಾರಿ ಪ್ರಮಾಣದ ಅಕ್ರಮ ನಡೆದಿದೆ ಎಂದು ತಿಳಿಸಿದೆ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಬಿ ಶ್ರೀರಾಮುಲು ಅವರ ನಿರ್ದೇಶನದ ಮೇರೆಗೆ ಈ ಅಕ್ರಮ ನಡೆದಿದೆ ಎಂದು ವರದಿಯಲ್ಲಿ ತಿಳಿಸಿದ್ದು ರಾಜ ರಾಜಕಾರಣದಲ್ಲಿ ಕೋಲಾಹಲ ಎಬ್ಬಿಸಿದೆ.
ಈ ವರದಿ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಕೇಂದ್ರ ಮಂತ್ರಿ ಪ್ರಹ್ಲಾದ ಜೋಶಿ ನ್ಯಾಯಮೂರ್ತಿ ಕುನ್ಹಾ ಅವರ ಬಗ್ಗೆ ಮಾಡಿದ ಟೀಕೆ ಸಾಕಷ್ಟು ವಿವಾದವನ್ನು ಸೃಷ್ಟಿಸಿತು ನ್ಯಾಯಮೂರ್ತಿಯೊಬ್ಬರ ಬಗ್ಗೆ ಕೇಂದ್ರ ಮಂತ್ರಿ ಮಾಡಿದ ಟೀಕೆ ಅನುಚಿತವಾದ ಕ್ರಮ ಎಂಬ ಆಕ್ರೋಶ ವ್ಯಕ್ತವಾಗಿದ್ದು ಈ ಬಗ್ಗೆ ರಾಜ್ಯ ಸರ್ಕಾರ ಕಾನೂನು ಸಮರಕ್ಕೆ ಮುಂದಾಗಿತ್ತು.
ಇದರ ಬೆನ್ನಲ್ಲೇ ತಾವು ಮಾಡುವ ಟೀಕೆ ಆಲೋಚಿತವಾಗಿದೆ ಎಂದು ಅರ್ಥೈಸಿಕೊಂಡಿರುವ ಪ್ರಹ್ಲಾದ್ ಜೋಶಿ ಅವರು ನ್ಯಾಯಮೂರ್ತಿ ಕುನ್ಹಾ ಅವರಿಗೆ ಪತ್ರ ಬರೆದಿದ್ದು ತಾವು ಮಾಡಿದ ಟೀಕೆಗಾಗಿ ವಿಷಾದ ವ್ಯಕ್ತಪಡಿಸಿ ಕ್ಷಮೆಯಾಸಿಸಿದ್ದಾರೆ.
Previous Articleನಟ ದರ್ಶನ್ ಮಾನಸಿಕವಾಗಿ ಸಿದ್ದರಾಗಿಲ್ಲವಂತೆ.
Next Article ಆಸ್ಟ್ರೇಲಿಯಾ ಸರ್ಕಾರದ ದಿಟ್ಟ ನಿರ್ಧಾರ
3 Comments
can you get generic clomid for sale cost of generic clomiphene prices clomiphene buy cost of generic clomiphene online can i buy cheap clomid no prescription buying clomid without prescription buying generic clomid price
I’ll certainly bring back to review more.
Greetings! Very useful recommendation within this article! It’s the petty changes which liking obtain the largest changes. Thanks a portion quest of sharing!