ಆಮ್ ಆದ್ಮಿ ಪಕ್ಷದ ತವರು ರಾಷ್ಟ್ರ ರಾಜಧಾನಿ ದೆಹಲಿಯ ವಿಧಾನಸಭೆ Electionಯಲ್ಲಿ ಹೀನಾಯ ಸೋಲಿನ ನಂತರ ತನ್ನ ರಾಜಕೀಯ ಭವಿಷ್ಯದ ಬಗ್ಗೆ ಅನಿಶ್ಚಿತತೆ ಎದುರಿಸುತ್ತಿದ್ದ ಎಎಪಿ ಪಂಜಾಬ್ನ ಲುಧಿಯಾನ ಪಶ್ಚಿಮ ಮತ್ತು ಗುಜರಾತ್ನ ವಿಸಾವದರ್ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಗಳಲ್ಲಿ ಭಾರಿ ಗೆಲುವು ದಾಖಲಿಸಿದೆ.
ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್ ನಲ್ಲಿ ಪ್ರಾಬಲ್ಯ ಸಾಧಿಸಲು ಹವಣಿಸುತ್ತಿದ್ದ ಆಪ್ ಈ ಉಪ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸುವ ಮೂಲಕ ರಾಜಕೀಯ ಪಂಡಿತರ ಎಲ್ಲ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿದೆ ಅಷ್ಟೇ ಅಲ್ಲ ಗುಜರಾತ್ ನಲ್ಲಿ ತನಗೆ ಉತ್ತಮ ಭವಿಷ್ಯ ಇದೆ ಎಂಬ ಸಂದೇಶವನ್ನು ರವಾನಿಸಿದೆ.
ಕಾಂಗ್ರೆಸ್ ಅನ್ನು ದೀರ್ಘಕಾಲದಿಂದ ಕೈ ಹಿಡಿದಿದ್ದ ಗುಜರಾತ್ ನ ಸೌರಾಷ್ಟ್ರ ಪ್ರಾಂತ್ಯದ ವಿಸಾವದರ್, ಕ್ಷೇತ್ರ ಈಗ ಆಪ್ ನ ಪಾಲಾಗಿದೆ ಉಪಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ನಾಯಕ ಗೋಪಾಲ್ ಇಟಾಲಿಯಾ ಅವರನ್ನು ಆಯ್ಕೆ ಮಾಡುವ ಮೂಲಕ ಅಚ್ಚರಿಯ ತೀರ್ಪು ನೀಡಿದೆ. ಈ ಫಲಿತಾಂಶವು ಹಳೆಯ ನಿಷ್ಠೆಗಳ ಕುಸಿತ ಮತ್ತು ಹೊಸ ರಾಜಕೀಯ ಆಕಾಂಕ್ಷೆಗಳ ಹೊರಹೊಮ್ಮುವಿಕೆಯನ್ನು ಒಳಗೊಂಡಿದೆ.
ಜುನಾಗಢ ಜಿಲ್ಲೆಯ ಈ ಕೃಷಿ ಪ್ರದೇಶದಲ್ಲಿ ಒಂದು ಕಾಲದಲ್ಲಿ ಪ್ರಬಲ ಪ್ರಭಾವ ಹೊಂದಿದ್ದ ಕಾಂಗ್ರೆಸ್, ಕೇವಲ 5,501 ಮತಗಳೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿದೆ.
ಎಎಪಿಯ ಮಾಜಿ ರಾಜ್ಯಾಧ್ಯಕ್ಷ ಗೋಪಾಲ್ ಇಟಾಲಿಯಾ ವಿಸಾವದರ್ನಲ್ಲಿ ಬಿಜೆಪಿಯ ಮಾಜಿ ಜಿಲ್ಲಾ ಅಧ್ಯಕ್ಷ ಕಿರಿತ್ ಪಟೇಲ್ ಅವರನ್ನು ಸೋಲಿಸುವ ಮೂಲಕ ದೈತ್ಯ ಸಂಹಾರಿಯಾಗಿ ಹೊರಹೊಮ್ಮಿದ್ದಾರೆ. 75,942 ಮತಗಳನ್ನು ಪಡೆದ ಇಟಾಲಿಯಾ, ಬಿಜೆಪಿಯ ಭದ್ರಕೋಟೆಯಾಗಿದ್ದ ರಾಜ್ಯದಲ್ಲಿ 17,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ವಿಶೇಷವೆಂದರೆ 2007ರಿಂದ ಬಿಜೆಪಿ ಈ ಸ್ಥಾನವನ್ನು ಗೆದ್ದಿಲ್ಲ. ಆ ದಾಖಲೆ ಮುರಿಯುವ ಪ್ರಯತ್ನ ಈ ಬಾರಿಯೂ ವಿಫಲಗೊಂಡಿದೆ. ಇಲ್ಲಿ ಈ ಮೊದಲು ಎಎಪಿ ನಾಯಕ ಭೂಪೇಂದ್ರ ಭಯಾನಿ ಶಾಸಕರಾಗಿದ್ದರು, ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರಿಂದ 2023ರಿಂದ ಈ ಸ್ಥಾನ ಖಾಲಿಯಾಗಿತ್ತು.
Previous ArticleE.D. ವಿಚಾರಣೆ ಎದುರಿಸಿದ ಡಿ.ಕೆ. ಸುರೇಶ್
Next Article ಸುಂದರಿ ಜಾಲಕ್ಕೆ ಬಲಿಯಾದ ಇರಾನ್.