Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಚೀನಾ ನಂಬಿ ಕೆಟ್ಟ ಪಾಪಿ ಪಾಕಿಸ್ತಾನ..!
    ಅಂತಾರಾಷ್ಟ್ರೀಯ

    ಚೀನಾ ನಂಬಿ ಕೆಟ್ಟ ಪಾಪಿ ಪಾಕಿಸ್ತಾನ..!

    vartha chakraBy vartha chakraMay 9, 202523 Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಆಪರೇಷನ್ ಸಿಂಧೂರಕ್ಕೆ ಪ್ರತೀಕಾರ ತೆಗೆದುಕೊಳ್ಳಲು ಮುಂದಾದ ಪಾಕ್​​ ಇದೀಗ ಹೈರಾಣಾಗಿದೆ. ಶತ್ರುಕಡೆಯಿಂದ ನುಗ್ಗಿ ಬಂದ ಮಿಸೈಲ್​ಗಳನ್ನ ಭಾರತ ಭಸ್ಮ ಮಾಡಿದೆ. ಪಾಕಿಸ್ತಾನದ ಚೀನಾ ನಿರ್ಮಿತ ಎಚ್‌ಕ್ಯು 16 ಅನ್ನು ಉಡೀಸ್ ಮಾಡಿದೆ. ಪಾಕ್​​ನ 15 ನಗರಗಳ ಮೇಲೆ ಇಂಡಿಯನ್ ಡ್ರೋನ್ ಎರಗಿವೆ. ಬೆಚ್ಚಿಬಿದ್ದಿರೋ ಪಾಕಿಸ್ತಾನ ಸಿಯಾಲ್‌ಕೋಟ್, ಕರಾಚಿ ಲಾಹೋರ್ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದೆ. ಯಾಕಾದ್ರೂ ಪಹಲ್ಗಾಂ ತಂಟೆಗೆ ಹೋದ್ನೋ ಅಂತಾ ಗೋಳಾಡ್ತಿದೆ.
    ಪಹಲ್ಗಾಂ ಉಗ್ರರ ದಾಳಿಗೆ ಕೆರಳಿರೋ ಭಾರತ ಪ್ರತೀಕಾರದ ರಣಕಹಳೆ ಊದಿದೆ. ಪಾಕ್​​​ಗೆ ನುಗ್ಗಿ ಉಗ್ರರನ್ನ ಸದೆಬಡೀತಿದೆ. ಬಿಲದಲ್ಲಿ ಅಡಗಿದ್ದ ಪಾಕ್ ಬೆಂಬಲಿತ ಉಗ್ರರು ಇದೀಗ ಅಯ್ಯಯ್ಯೋ ಅಂತಾ ಹೊರ ಬರದೇ ಅಡಗಿಕುಳಿತುಕೊಳ್ತಿದ್ದಾರೆ. ಎಲ್ಲಿ ಹೊರಗೆ ಬಂದ್ರೆ ಮೋದಿ ಬ್ರಹ್ಮಾಸ್ತ್ರಕ್ಕೆ ಬಲಿಯಾಗಿಬಿಡ್ತಿವೋ ಅನ್ನೋ ಆತಂಕ ಕಾಡ್ತಿದೆ ಉಗ್ರರಿಗೆ. ಇದೆಲ್ಲದ್ರ ಮಧ್ಯೆ ಭಾರತ ಆಪರೇಷನ್ ಸಿಂಧೂರವನ್ನ ಎರಡನೇ ದಿನಕ್ಕೂ ಮುಂದುವರೆಸಿದಂತೆ ಕಾಣುತ್ತೆ.ಯಾಕಂದ್ರೆ ಈಗಾಗ್ಲೇ ಪಾಕ್​​ನ 15 ನಗರಗಳ ಮೇಲೆ ಇಂಡಿಯನ್ ಡ್ರೋನ್ ಎರಗಿ ಬೂದಿಮಾಡಿದೆ.
    ಪಾಕ್‌ನ 15 ನಗರಗಳ ಮೇಲೆ ಭಾರತದ ಡ್ರೋನ್​ಗಳು ಭೀಕರ ದಾಳಿ ನಡೆಸಿದೆ. ಅಷ್ಟೇ ಅಲ್ದೇ, ಪಾಕಿಸ್ತಾನದ ಚೀನಾ ನಿರ್ಮಿತ ಎಚ್‌ಕ್ಯು 16 ಅನ್ನು ಉಡೀಸ್ ಮಾಡಲಾಗಿದೆ. ಎಡಿಎಸ್‌ 16 ಸಿಸ್ಟಮ್‌ ಸಂಪೂರ್ಣ ಧ್ವಂಸವಾಗಿದೆ. ಡ್ರೋನ್ ದಾಳಿಗಳಲ್ಲಿ ನಾಲ್ವರು ಪಾಕಿಸ್ತಾನಿ ಸೈನಿಕರು ಗಾಯಗೊಂಡಿದ್ದಾರೆನ್ನಲಾಗಿದೆ. ಹಾಗೆಯೇ ಲಾಹೋರ್‌ನಲ್ಲಿ, ವಾಲ್ಟನ್ ಏರ್​ಪೋರ್ಟ್​​​​ ಬಳಿ ಸ್ಫೋಟ ಶಬ್ದ ಕೇಳಿಬಂದಿದೆ. ರಾವಲ್ಪಿಂಡಿ ಕ್ರಿಕೆಟ್‌ ಸ್ಟೇಡಿಯಂ, ಸೇನಾ ಮುಖ್ಯ ಕಚೇರಿ ಮೇಲೆ ಭಾರತದ ಸೇನೆ ಟಾರ್ಗೆಟ್‌ ನಡೆಸಿರೋದು ಗೊತ್ತಾಗಿದೆ.
    ಸದ್ಯ ಬೆಚ್ಚಿಬಿದ್ದಿರೋ ಪಾಕಿಸ್ತಾನ ಸಿಯಾಲ್‌ಕೋಟ್, ಕರಾಚಿ ಮತ್ತು ಲಾಹೋರ್ ವಿಮಾನ ನಿಲ್ದಾಣಗಳಲ್ಲಿ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಸದ್ಯಕ್ಕಂತೂ ಯಾವುದೇ ಸಾವುನೋವು ಸಂಭವಿಸಿಲ್ಲ. ನಾಗರಿಕ ಮೂಲಸೌಕರ್ಯಕ್ಕೆ ಹಾನಿಯಾಗಿಲ್ಲ ಅಂತ್ಲೇ ಹೇಳಲಾಗ್ತಿದೆ. ಭಾರತ ಏನಿದ್ರು ಮುಖ್ಯವಾಗಿ ಉಗ್ರ ಬೆಂಬಲಿತ ಶಕ್ತಿಗಳ ಮೇಲೆಯೇ ತನ್ನ ಗುರಿ ಇಟ್ಟಿರೋದು ಪಕ್ಕಾ ಆಗಿದೆ.
    ಮಾಡೋದೆಲ್ಲಾ ಮಾಡಿ ಇದೀಗ ಭಾರತದ ದಾಳಿಗೆ ಪಾಕಿಸ್ತಾನ ತತ್ತರಿಸಿದೆ. ಅಲ್ಲಿನ ಸಂಸದರು ಪಾಕ್ ಸಂಸತ್ತಿನಲ್ಲಿ ಮಾತನಾಡುವಾಗ್ಲೇ ಕಣ್ಣೀರು ಹಾಕ್ತಿದ್ದಾರೆ. ಅಯ್ಯೋ ನಮ್ಮನ್ನ ಭಾರತದಿಂದ ದಯವಿಟ್ಟು ಕಾಪಾಡಿ ಅಂತಾ ಅಂಗಲಾಚುತ್ತಿದ್ದಾರೆ. ನಿವೃತ್ತ ಮೇಜರ್ ತಾಹಿರ್ ಇಕ್ಬಾಲ್ ಕಣ್ಣೀರು ಹಾಕಿರೋದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಕೆಣಕಿದ ಭಾರತದಿಂದ ಪ್ರತೀಕಾರದ ಸ್ಯಾಂಪಲ್​ಗೆ ಪಾಕ್​​​ ಪತರುಗುಟ್ಟಿಹೋಗಿದೆ.

    ಉಗ್ರ ವೈರಲ್ ಸಂಸತ್
    Share. Facebook Twitter Pinterest LinkedIn Tumblr Email WhatsApp
    Previous Articleವಿಮಾನ ಹತ್ತಲು ಮೂರು ಗಂಟೆ ಮೊದಲು ಹೋಗಿ
    Next Article ಮಾಜಿ ಮಂತ್ರಿ ಮೊಮ್ಮಗ ಕತೆ ಕಟ್ಟಿದ
    vartha chakra
    • Website

    Related Posts

    ಕಾಫ್ ಸಿರಪ್ ಬಗ್ಗೆ ಎಚ್ಚರಿಕೆ ಇರಲಿ.

    October 7, 2025

    ಹೈಕಮಾಂಡ್ ಮುಂದೆ ಶಿವಕುಮಾರ್ ಗರಂ.

    October 4, 2025

    ಜಾತಿ ಸಮೀಕ್ಷೆಯಲ್ಲಿ ಡಿಸಿಎಂ ಕೊಟ್ಟ ವಿವರ ಗೊತ್ತಾ.

    October 4, 2025

    Leave A Reply Cancel Reply

    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಜಾತಿ ಸಮೀಕ್ಷೆ ಅವಧಿ ವಿಸ್ತರಣೆ.

    ಕಾಫ್ ಸಿರಪ್ ಬಗ್ಗೆ ಎಚ್ಚರಿಕೆ ಇರಲಿ.

    ಫೆಬ್ರುವರಿಯಲ್ಲಿ ರಶ್ಮಿಕಾ ಮದುವೆ.

    ಹೈಕಮಾಂಡ್ ಮುಂದೆ ಶಿವಕುಮಾರ್ ಗರಂ.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • togel389 on ಡಿ ಬಾಸ್ ದರ್ಶನ್ ಬಿಡುಗಡೆ ಯಾವಾಗ ಗೊತ್ತಾ.
    • bandar casino online on ಯಡಿಯೂರಪ್ಪ ಅವರನ್ನು ಅನುಕರಿಸುವ ವಿಜಯೇಂದ್ರ | Yediyurappa
    • купить шишки on ಟೊಮ್ಯಾಟೋ ಸಾಲಕ್ಕಾಗಿ ಲ್ಯಾಪ್ ಟಾಪ್ ಕದ್ದ.
    Latest Kannada News

    ಜಾತಿ ಸಮೀಕ್ಷೆ ಅವಧಿ ವಿಸ್ತರಣೆ.

    October 7, 2025

    ಕಾಫ್ ಸಿರಪ್ ಬಗ್ಗೆ ಎಚ್ಚರಿಕೆ ಇರಲಿ.

    October 7, 2025

    ಫೆಬ್ರುವರಿಯಲ್ಲಿ ರಶ್ಮಿಕಾ ಮದುವೆ.

    October 4, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಮತ್ತೊಮ್ಮೆ ಮೋದಿ ವಿಜಯ? #varthachakra #bihar #election #result #nda #modi #winner #announce #latestnews
    Subscribe