Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ದುಪ್ಪಟ್ಟು ಲಾಭಕ್ಕಾಗಿ ದಿವಾಳಿಯಾದ
    Viral

    ದುಪ್ಪಟ್ಟು ಲಾಭಕ್ಕಾಗಿ ದಿವಾಳಿಯಾದ

    vartha chakraBy vartha chakraJanuary 31, 2025Updated:January 31, 20255 Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಜ.31
    -ಅಮೇರಿಕನ್ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಗಳಿಸಬಹುದು ಎಂಬ ಆಮಿಷಕ್ಕೆ ಬಲಿಯಾದ ಉದ್ಯಮಿ, ಬರೋಬ್ಬರಿ 2.2 ಕೋಟಿ ರೂ ಕಳೆದುಕೊಂಡು ಇಂಗು ತಿಂದ ಮಂಗನಂತಾಗಿದ್ದಾರೆ.
    ವಂಚಕರಿಂದ ತಾನು ಕಳೆದುಕೊಂಡಿರುವ ಹಣ ವಾಪಸ್ ಕೊಡಿಸುವಂತೆ ಕೋರಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
    ವೆಲ್ತ್ ಕ್ರಿಯೇಟರ್ ಎ111′ ಎಂಬ ಆನ್‌ಲೈನ್‌ ಕಂಪನಿಯು ಅಮೆರಿಕನ್ ಹಾಗೂ ಭಾರತದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಶೇ.200% ರಷ್ಟು ವಾಪಾಸ್ ಲಾಭ ಗಳಿಸಬಹುದು‌ ಎಂದು ಕೊಟ್ಟು ಭರವಸೆಯನ್ನು ಕೊಟ್ಟಿದ್ದನ್ನು ನಂಬಿದ
    ಎಚ್‌ಆರ್ ಬಿಆರ್‌ ಲೇಔಟ್ ನಿವಾಸಿ ಮುಖೇಶ್ ತಮ್ಮಲ್ಲಿದ್ದ ಹಣವನ್ನೆಲ್ಲ ಹೂಡಿಕೆ ಮಾಡಿ ಮೋಸ ಹೋಗಿದ್ದಾರೆ
    ಕಳೆದ ಡಿಸೆಂಬರ್ 10 ರಂದು ಮುಕೇಶ್ ಅವರು ವಾಟ್ಸಾಪ್‌ಗೆ ಒಂದು ಸಂದೇಶ ಬಂದಿದ್ದು ಅದರಲ್ಲಿ ಷೇರು ಮಾರುಕಟ್ಟೆಗೆ ಸಂಬಂಧಿಸಿದ ಗ್ರೂಪ್‌ಗೆ ಸೇರುವಂತೆ ಆಹ್ವಾನ ನೀಡಲಾಗಿತ್ತು. ಈ ಗುಂಪು ಷೇರು ಮಾರುಕಟ್ಟೆಯ‌ ವಿಶೇಷ ಒಳನೋಟಗಳು ಮತ್ತು ಹೆಚ್ಚಿನ ಲಾಭವನ್ನು ಪಡೆಯುವ ಬಗ್ಗೆ ತರಬೇತಿ ನೀಡುವುದಾಗಿ ತಿಳಿಸಿತ್ತು.
    ಸಂದೇಶದಲ್ಲಿ ಬಂದ ವಿವರಗಳನ್ನು ಓದಿಕೊಂಡ
    ಮುಕೇಶ್ ಆ ಗುಂಪಿಗೆ ಸೇರಿ, ಮೊದಲ 20 ದಿನ ಕೇವಲ ಅಬ್ಸರ್ವ್ ಮಾಡಿದ್ದರು. ಹೊರತಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.”ವೆಲ್ತ್ ಕ್ರಿಯೇಟರ್ ಎ111 ವಾಟ್ಸಾಪ್ ಗುಂಪಿನಲ್ಲಿ ಸುಮಾರು 70 ಹೂಡಿಕೆದಾರರಿದ್ದರು. ಗುಂಪಿನಲ್ಲಿ ಸಾಕಷ್ಟು ಅವರು ಲಾಭ ಗಳಿಸಿರುವ ಬಗ್ಗೆ ಮಾಹಿತಿ ಹಾಗೂ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಳ್ಳುತ್ತಿದ್ದರು ಮತ್ತು ವಿಶೇಷ Business ತರಗತಿಗಳಿಗೆ ಹಾಜರಾಗುತ್ತಿದ್ದರು.ಮೊದಲಿಗೆ, ಮುಖೇಶ್‌ಗೆ ವಾಟ್ಸಾಪ್ ಗ್ರೂಪ್ ಬಗ್ಗೆ ಸಂಶಯವಿದ್ದರೂ, ನಂತರ ಆ ಗ್ರೂಪ್‌ನಲ್ಲಿ ಇತರರು ರಿಯಲ್ ಟೈಂ ಮಾರುಕಟ್ಟೆ ಕುರಿತ ಚರ್ಚೆಗಳು, ಲಾಭ ಗಳಿಸಿರುವ ಮಾಹಿತಿಗಳು ಹಂಚಿಕೊಂಡಿದ್ದರಿಂದ ಅವರು ನಂಬುವ ಸ್ಥಿತಿ‌ ತಲುಪಿದರು.
    ಅಮೆರಿಕನ್ ಸ್ಟಾಕ್ ಮಾರ್ಕೆಟ್ ಟ್ರೇಡಿಂಗ್ ನಲ್ಲಿ ಭಾಗವಹಿಸುವ ಬಗ್ಗೆ ಮಾಹಿತಿ ಕೊಡುವ ಬಗ್ಗೆ ಆ ಗ್ರೂಪ್‌ನಲ್ಲಿ ಭರವಸೆ ಕೊಡಲಾಗಿತ್ತು.ಈ ವೇಳೆ ಅಮರ್ತ್ಯ ಸಿಂಗ್ ಎಂಬ ವ್ಯಕ್ತಿಯು ಕ್ವಾಲಿಫೈಡ್ ಸಂಸ್ಥೆಯ ಖರೀದಿದಾರ ಎಂದು ಹೇಳಿಕೊಂಡು ತರಬೇತಿಗಳನ್ನು ಕೊಡಲು ಆರಂಭಿಸಿದ. ಮಾರ್ಕೆಟ್ ಟ್ರೆಂಡ್ ಗಳ ಬಗ್ಗೆ ಟ್ರೈನಿಂಗ್ ನೀಡುತ್ತಿದ್ದ. ಆತನ ಸಲಹೆಗಳು ಕೂಡಾ ಆನ್ ಲೈನ್ ಡೇಟಾಗಳಿಗೆ ಹೋಲಿಕೆ ಆಗುತ್ತಿದ್ದವು. ಹೀಗಾಗಿ ವಂಚಕನ ಮೇಲೆ ಮುಕೇಶ್‌ಗೆ ವಿಶ್ವಾಸ ಬರಲು ಆರಂಭವಾಯಿತು. ಇದರಿಂದ ಆತನನ್ನು ನಂಬಿ, ಹೂಡಿಕೆ ಮಾಡಲು ಅಲ್ಲಿ ನೋಂದಾಯಿಸಿಕೊಂಡೆ ಎಂದು ಮುಕೇಶ್ ಹೇಳಿದ್ದಾರೆ.
    ಹೀಗಿರುವಲ್ಲಿ ಅಮರ್ತ್ಯ ಸಿಂಗ್, ವಂಚಿಸಲು ಡಿಸೆಂಬರ್ 27 ರಂದು. ಮುಖೇಶ್‌ರನ್ನು ಸಂಪರ್ಕಿಸಿ ಕಂಪನಿಯಲ್ಲಿ ಹೂಡಿಕೆ ಮೈತ್ರಿ ಇಂಟರ್ನ್‌ಶಿಪ್‌ಗೆ ಆಹ್ವಾನಿಸಿದರು, ಆ ಕಂಪನಿಯು ಸೆಬಿಯಲ್ಲಿ ನೋಂದಾಯಿತ ಸಂಸ್ಥೆ ಮತ್ತು 2009 ರಿಂದ ಅಮೆರಿಕ ಎಸ್ ಇಸಿ (ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಕಮಿಷನ್) ನಿಂದ ಪ್ರಮಾಣೀಕರಿಸಲ್ಪಟ್ಟಿದೆ ಎಂದು ಹೇಳಿದರು.
    ಈ ವೇಳೆ ಕಂಪನಿಯ ಅಧಿಕೃತ ನೋಂದಣಿ ಲಿಂಕ್ ಅನ್ನು ಸಹ ಕೊಡುತ್ತಾರೆ . ಅದರ ಬಗ್ಗೆ ಎಸ್ ಇಸಿ
    ವೆಬ್‌ಸೈಟ್‌ನಲ್ಲಿ ವಿವರಗಳನ್ನು ಪರಿಶೀಲಿಸಲು ಮುಖೇಶ್‌ಗೆ ತಿಳಿಸಿದ್ದಾರೆ.ಮುಖೇಶ್ ನೋಂದಣಿ ಮಾಡಿಕೊಂಡು ಖಾತೆಯನ್ನು ತೆರೆದಾಗ, ಡಿಜಿಟಲ್ ಪಾವತಿ ಅಪ್ಲಿಕೇಶನ್ ಮೂಲಕ ಎಮ್‌ಬಿ ಮಸಾಲೆ ಹೆಸರಿನ ಖಾತೆಗೆ 54,000 ರೂಪಾಯಿಗಳನ್ನು ಠೇವಣಿ ಇಡಲು ಹೇಳಿದರು. ಆ ಹಣ ವರ್ಚುವಲ್ ನಿಧಿಗೆ ಸೇರಿಸಿ , ಆರಂಭದಲ್ಲಿ ಸಣ್ಣ ಮಟ್ಟದ ಲಾಭ ವಾಪಾಸ್ ಕೊಡುವಂತೆ ಮಾಡಿ ನಂಬಿಕೆ ಹುಟ್ಟಿಸಿದ್ದಾರೆ.ನಂತರ, ಈ ವಂಚಕರು ಅಮೆರಿಕ ಷೇರು ಮಾರುಕಟ್ಟೆಯಲ್ಲಿ ಯಾವುದೇ ಶುಲ್ಕವಿಲ್ಲದೆ ಹೂಡಿಕೆ ಮಾಡಲು ಹಣವನ್ನು ಠೇವಣಿ ಇಡಲು ವಿವಿಧ ಬ್ಯಾಂಕ್ ಖಾತೆ ಸಂಖ್ಯೆಗಳನ್ನು ಕೊಡುತ್ತಾರೆ. ಬಳಿಕ ಮುಕೇಶ್ ಡಿಸೆಂಬರ್ 30 ರಿಂದ ಜನವರಿ 20 ರವರೆಗೆ, ಎರಡು ಬ್ಯಾಂಕ್ ಖಾತೆಗಳಿಂದ 16 ವಹಿವಾಟುಗಳಲ್ಲಿ ಸುಮಾರು 2.2 ಕೋಟಿ ರೂಪಾಯಿಗಳನ್ನು ವರ್ಗಾಯಿಸಿದ್ದಾರೆ. ಅಷ್ಟರಲ್ಲಿ ಅದು ವಂಚನೆ ಎಂದು ಗೊತ್ತಾಗಿದೆ. ಆದರೆ ಆಗಲೇ 1.3 ಕೋಟಿ ರೂ ಕಳೆದುಕೊಂಡಿದ್ದಾರೆ. ಲಾಭವನ್ನು ಕೇಳಿದಾಗ ಶುಲ್ಕದ ಹೆಸರಲ್ಲಿ ಮತ್ತಷ್ಟು ಹಣ ಕೇಳಿ ಒತ್ತಾಯಿಸಿದ್ದಾರೆ. ಇದರಿಂದ ಮುಕೇಶ್ ಜನವರಿ 25 ರಂದು ಸೈಬರ್ ಹೆಲ್ಪ್‌ಲೈನ್‌ಗೆ ಮತ್ತು ನಂತರ ಪೊಲೀಸರಿಗೆ ದೂರು ನೀಡಿದ್ದಾರೆ.ಒಟ್ಟಿನಲ್ಲಿ ಮುಕೇಶ್ ಸೈಬರ್ ಕ್ರೈಂ ವಂಚನೆ ತಿಳಿಯದೆ,ಎಲ್ಲಾ ಉಳಿತಾಯವನ್ನು ಹೂಡಿಕೆ ಮಾಡಿ, ಸ್ನೇಹಿತರಿಂದ ಹಣ ಸಾಲ ಮಾಡಿ, ಆಭರಣಗಳನ್ನು ಅಡ ಇಟ್ಟು ಸಂಪೂರ್ಣವಾಗಿ ದಿವಾಳಿಯಾಗಿದ್ದಾರೆ.

    ಆನ್ ಲೈನ್ Bengaluru ಮೈ Business ಸ್ಟಾಕ್ ಮಾರ್ಕೆಟ್
    Share. Facebook Twitter Pinterest LinkedIn Tumblr Email WhatsApp
    Previous Articleಜಯಲಲಿತಾ ಆಸ್ತಿ ಏನೆಲ್ಲಾ ಇದೆ ಗೊತ್ತಾ
    Next Article ಯೋಗಿ ಯಡವಟ್ಟು? 30 ಬಲಿ
    vartha chakra
    • Website

    Related Posts

    ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಎಂದ ಜಮೀರ್ ಅಹ್ಮದ್ ಖಾನ್.

    June 24, 2025

    ಕಾಲ್ತುಳಿತ ಘಟನೆಯ ಕಾರಣ ಪತ್ತೆ ಹಚ್ಚಿದ ಸರ್ಕಾರ !

    June 24, 2025

    ಸುಂದರಿ ಜಾಲಕ್ಕೆ ಬಲಿಯಾದ ಇರಾನ್.

    June 24, 2025

    5 Comments

    1. 8c3cx on June 4, 2025 10:25 am

      clomiphene challenge test cost of clomiphene tablets cost generic clomiphene without insurance clomiphene cost buy generic clomid pill can you buy clomiphene without insurance order generic clomid pills

      Reply
    2. buy cheap generic cialis on June 9, 2025 6:55 pm

      Thanks an eye to sharing. It’s top quality.

      Reply
    3. flagyl for diarrhea dosage on June 11, 2025 1:11 pm

      This is the kind of content I take advantage of reading.

      Reply
    4. o5hrg on June 18, 2025 11:17 pm

      inderal without prescription – buy plavix 75mg online cheap methotrexate over the counter

      Reply
    5. vvpud on June 21, 2025 8:31 pm

      where to buy amoxil without a prescription – purchase ipratropium for sale combivent 100 mcg ca

      Reply

    Leave A Reply Cancel Reply

    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಎಂದ ಜಮೀರ್ ಅಹ್ಮದ್ ಖಾನ್.

    ಕಾಲ್ತುಳಿತ ಘಟನೆಯ ಕಾರಣ ಪತ್ತೆ ಹಚ್ಚಿದ ಸರ್ಕಾರ !

    ಸುಂದರಿ ಜಾಲಕ್ಕೆ ಬಲಿಯಾದ ಇರಾನ್.

    ಗುಜರಾತ್ ನಲ್ಲಿ ಆಪ್ ಗೆದ್ದೇ ಬಿಡ್ತು.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • AlbertDuabe on ಬಿಜೆಪಿ ಭಿನ್ನಮತಕ್ಕೆ ಸುರಿದ ತುಪ್ಪ | BJP Karnataka
    • KennethSOYNC on PSI ನೇಮಕ ಅಕ್ರಮ- ಕುಮಾರಸ್ವಾಮಿ ಗೆ ಸಮನ್ಸ್
    • KennethSOYNC on ATM ಸರ್ಕಾರ ಬೇಗ ತೊಲಗಬೇಕಂತೆ | ATM Sarkara
    Latest Kannada News

    ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಎಂದ ಜಮೀರ್ ಅಹ್ಮದ್ ಖಾನ್.

    June 24, 2025

    ಕಾಲ್ತುಳಿತ ಘಟನೆಯ ಕಾರಣ ಪತ್ತೆ ಹಚ್ಚಿದ ಸರ್ಕಾರ !

    June 24, 2025

    ಸುಂದರಿ ಜಾಲಕ್ಕೆ ಬಲಿಯಾದ ಇರಾನ್.

    June 24, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಮುರುಡೇಶ್ವರಕ್ಕೆ_ ಹೋಗ್ತಿದ್ದೀರಾ ಜೀನ್ಸ್ ಹಾಕ್ಲೇಬೇಡಿ! #murudeshwar #culturedress #karnataka #rules #shiva
    Subscribe