ಬೆಂಗಳೂರು,ಮೇ.20– ದಿಡೀರ್ ಬೆಳವಣಿಗೆಯೊಂದರಲ್ಲಿ ಬಿಜೆಪಿ ಹೈಕಮಾಂಡ್ ತಕ್ಷಣವೇ ದೆಹಲಿಗೆ ಬರುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸೂಚಿಸಿದೆ. ಮಳೆ ಪೀಡಿತ ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ ಪರಿಶೀಲನೆ ನಡೆಸುತ್ತಿದ್ದ ಸಿಎಂ ಹೈಕಮಾಂಡ್ ಕರೆಯ ಮೇರೆಗೆ ಪರಿಶೀಲನೆ ಅರ್ಧಕ್ಕೆ ನಿಲ್ಲಿಸಿ ದೆಹಲಿಗೆ ದೌಡಾಯಿಸಿದರು.
ಕಳೆದ ರಾತ್ರಿ ಸಿ.ಎಂ.ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಅವರ ನಿವಾದಲ್ಲಿ ಕಂದಾಯ ಸಚಿವ ಅಶೋಕ್ ಅವರೊಂದಿಗೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಸಭೆ ನಡೆಸಿದ್ದರು.ಸಿ.ಎಂ ಆಪ್ತ ಸಚಿವ ಡಾ.ಸುಧಾಕರ್ ದೆಹಲಿಯಲ್ಲಿ ಬೀಡು ಬಿಟ್ಟಿದ್ದು ಈಗ ಸಿಎಂ ಕೂಡಾ ತೆರಳಿರುವುದು ಕುತೂಹಲ ಮೂಡಿಸಿದೆ
ಮುಖ್ಯಮಂತ್ರಿಗಳ ದಿಢೀರ್ ದೆಹಲಿ ಯಾತ್ರೆ ಸಂಪುಟ ಪುನಾರಚನೆಯೋ ಅಥವ ರಾಜ್ಯಸಭಾ, ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಪಕ್ಷದ ಚರ್ಚೆಯೋ ಅಥವಾ ಬೇರೆ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆಯೇ ಎಂಬ ಬಗ್ಗೆ ಕುತೂಹಲ ಕೆರಳಿಸಿದೆ.
Previous Articleಡ್ರಗ್ಸ್ ಮಾರಾಟ -ಇಬ್ಬರ ಸೆರೆ
Next Article ಮುಂಬೈನಲ್ಲಿ ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ