Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಬಣ್ಣದ ಮಾತಿಗೆ ಮರುಳಾಗಿ ಕಾರು ಕಳೆದುಕೊಂಡ
    Viral

    ಬಣ್ಣದ ಮಾತಿಗೆ ಮರುಳಾಗಿ ಕಾರು ಕಳೆದುಕೊಂಡ

    vartha chakraBy vartha chakraMay 15, 202526 Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಮೇ.14-
    ಮಹಿಳೆಯೊಬ್ಬರ ಬಣ್ಣದ ಮಾತು ಕೇಳಿ ಇಂಗು ತಿಂದ ಮಂಗನಂತಾದ ಕಥೆ ಇದು. ಬೆಂಗಳೂರು ನಗರ ಹಾಗೂ ಮೈಸೂರಿನಲ್ಲಿ  ಸುತ್ತಾಡಲು ಕಾರು ಬೇಕಿದೆ ಎಂದು ಹೇಳಿ ಬಾಡಿಗೆಗಾಗಿ ಬುಕ್ ಮಾಡಿದ್ದ ಕಾರು ಸಮೇತ ಮಹಿಳೆಯೊಬ್ಬರು ಪರಾರಿಯಾಗಿದ್ದಾಳೆ
    ಈ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ಬೆಂಗಳೂರಿನ ಎಚ್​ಎಂಟಿ ಲೇಔಟ್ ನಿವಾಸಿ ಅನಂತಕುಮಾರ್ ವೃತ್ತಿಯಲ್ಲಿ ಕಾಲು ಚಾಲಕರಾಗಿದ್ದಾರೆ.ಈತನ ಭಾವ ಶಂಕರ್ ನಾಯಕ್ ಹೆಸರಿನಲ್ಲಿದ್ದ ಹುಂಡೈ ಎಕ್ಸೆಂಟ್ ಕಾರನ್ನು 8 ವರ್ಷಗಳಿಂದ ಓಡಿಸುತ್ತಿದ್ದಾರೆ.
    ಇವರು ಕಳೆದ 15 ದಿನಗಳ ಹಿಂದೆ ಬಾಡಿಗೆ ನಿಮಿತ್ತ ಕಾರವಾರಕ್ಕೆ ಹೋಗಿದ್ದರು. ಅಲ್ಲಿ ಇವರಿಗೆ ಮಹಿಳೆಯೊಬ್ಬರ ಪರಿಚಯವಾಗಿದೆ. ಆಕೆ ತಾನು ಆಗಿಂದಾಗ್ಗೆ ಬೆಂಗಳೂರು ಹಾಗೂ ಮೈಸೂರಿಗೆ ಬರುತ್ತೇನೆ ಈ ಬಾರಿ ಬಂದಾಗ ನಿಮ್ಮ ಕಾರನ್ನು ಬಾಡಿಗೆಗೆ ಪಡೆದುಕೊಳ್ಳುತ್ತೇನೆ ಎಂದು ಹೇಳಿ ನಂಬಿಸಿದ್ದಾರೆ.
    ಇದಾದ ನಂತರ ಆ ಮಹಿಳೆ ಕಾರಿನ ಚಾಲಕ ಅನಂತ ಜೊತೆ ಹಲವು ಬಾರಿ ವಾಟ್ಸಾಪ್ ನಲ್ಲಿ ಚಾಟ್ ಮಾಡಿದ್ದಾರೆ. ಹೀಗಾಗಿ ಇಬ್ಬರ ನಡುವೆ ಒಂದು ರೀತಿ ಆತ್ಮೀಯತೆ ಏರ್ಪಟ್ಟಿದೆ. ಈ ಮಹಿಳೆ ಮೇ 6ರ ರಾತ್ರಿ ವಾಟ್ಸ್​ಆ್ಯಪ್​ ಕರೆ ಮಾಡಿ ತಾನು ಬೆಂಗಳೂರಿಗೆ ಬಂದಿರುವುದಾಗಿ ಹೇಳಿದ್ದಾಳೆ. ಆಗ ಅನಂತ್ ತಾನು ಕೆಲಸದ ನಿಮಿತ್ತ ಹುಬ್ಬಳ್ಳಿ ಗೆ ಬಂದಿದ್ದೇನೆ ನಾಳೆ, ಮೇ 7ರ ಬೆಳಗ್ಗೆ 11 ಗಂಟೆಗೆ ಬೆಂಗಳೂರಿಗೆ ಬರುವುದಾಗಿ ಹೇಳಿದ್ದರು.
    ಇದಾದ ನಂತರ ನಿಗದಿತ ಸಮಯಕ್ಕೆ ಮಾರನೇ ದಿನ ಬಂದು ತಾನು ಪೀಣ್ಯ 8ನೇ ಮೈಲಿ ಸಿಗ್ನಲ್ ಬಳಿ ಬಂದಿರುವುದಾಗಿ ಮಹಿಳೆಗೆ ಚಾಲಕ ವಿಷಯ ಮುಟ್ಟಿಸಿದ್ದ. ನಗರಕ್ಕೆ ಬಂದಿರುವುದಾಗಿ ಅರಿತ ಅಪರಿಚಿತ ಮಹಿಳೆ, ತಾನು ರೆಡಿಯಾಗಬೇಕು. ಹೀಗಾಗಿ ಲಾಡ್ಜ್ ವೊಂದರಲ್ಲಿ ರೂಮ್ ಬುಕ್ ಮಾಡುವಂತೆ ತಿಳಿಸಿ ದಾಖಲಾತಿಗಳನ್ನು ನನ್ನ ವಾಟ್ಸ್​ಆ್ಯಪ್​ ನಂಬರ್ ಗೆ ಕಳುಹಿಸಿದ್ದಳು.ಅದರಂತೆ ಸಿಡೇದಹಳ್ಳಿ ಬಳಿಯ ಪಿ.ವಿ. ರೆಸಿಡೆನ್ಸಿಯಲ್ಲಿ ರೂಮ್ ಬುಕ್ ಮಾಡಿದ್ದೆ ಎಂದು ಚಾಲಕ ದೂರಿನಲ್ಲಿ ತಿಳಿಸಿದ್ದಾನೆ.
    ಬುಕ್ ಮಾಡಿದ್ದ ರೂಮಿಗೆ ಬಂದ ಮಹಿಳೆಯು ರೆಡಿಯಾಗುವಾಗ ಸ್ಥಳಕ್ಕೆ ಬಂದ ಚಾಲಕನಿಗೆ ತಾನು ಬ್ಯೂಟಿಪಾರ್ಲರ್ ಗೆ ಹೋಗಬೇಕಿದೆ. ಹೀಗಾಗಿ ನೀವೂ ರೆಡಿಯಾಗುವಂತೆ ಸೂಚಿಸಿದ್ದಳು. ಇದನ್ನು ನಂಬಿದ ಚಾಲಕ ತನ್ನ ಬಳಿಯಿದ್ದ ಮೊಬೈಲ್ ಗೆ ಚಾರ್ಜ್ ಹಾಕಿ ಕಾರಿನ ಕೀಯನ್ನು ಟೇಬಲ್ ಮೇಲಿಟ್ಟು ಶೌಚಗೃಹಕ್ಕೆ ಹೋಗಿದ್ದರು. ಈ ವೇಳೆ ಮಹಿಳೆಯು ಹೊರಗಿನಿಂದ ಶೌಚಗೃಹದ ಬಾಗಿಲಿನ ಚಿಲಕ ಹಾಕಿ ಮೊಬೈಲ್ ಹಾಗೂ ಕಾರಿನ ಕೀ ಸಮೇತ ಪರಾರಿಯಾಗಿದ್ದಾಳೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
    ಹೊರಗೆ ಚಿಲಕ ಹಾಕಿರುವುದನ್ನು ಅರಿತು ಕಿಟಕಿ ಮೂಲಕ ಹೊರಗಿದ್ದವರನ್ನ ಕರೆಯಿಸಿಕೊಂಡು ಬಾಗಿಲಿನ ಚಿಲಕ ತೆಗೆಸಿಕೊಂಡ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ಧಾರೆ

    ಕಾರು Bengaluru ಮೈ ಹುಬ್ಬಳ್ಳಿ
    Share. Facebook Twitter Pinterest LinkedIn Tumblr Email WhatsApp
    Previous Articleವಿದ್ಯುತ್ ಸಂಬಂಧ ದೂರು ಸಲ್ಲಿಸಲು ಡಿಜಿಟಲ್ ಪೋರ್ಟಲ್
    Next Article ಮಂತ್ರಿಗಳು ರಾಜಿನಾಮೆ ಕೊಡಬೇಕಂತೆ.
    vartha chakra
    • Website

    Related Posts

    ಎಚ್ಚೆತ್ತ ರಾಜ್ಯ ಸರ್ಕಾರ

    December 12, 2025

    ಟ್ರೆಂಡ್ ಆಗ್ತಿದೆಯಾ ಮದುವೆಗೆ ಮುಂಚೆ ಪ್ರೆಗ್ನೆಂಟ್?

    December 12, 2025

    ಮರಣದ ಕಾರಣ ಹೇಳುವುದು ಕಡ್ಡಾಯ

    December 9, 2025

    Leave A Reply Cancel Reply

    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಎಚ್ಚೆತ್ತ ರಾಜ್ಯ ಸರ್ಕಾರ

    ಟ್ರೆಂಡ್ ಆಗ್ತಿದೆಯಾ ಮದುವೆಗೆ ಮುಂಚೆ ಪ್ರೆಗ್ನೆಂಟ್?

    ಚನ್ನರಾಜ ಹಟ್ಟಿಹೊಳಿ ಹಾಕಿದ ಪೋಸ್ಟ್ ನಲ್ಲಿ ಏನಿದೆ ಗೊತ್ತಾ?

    ಜಗತ್ತಿನ ಅತಿ ದೊಡ್ಡ ರಾಷ್ಟ್ರಧ್ವಜ ಅನಾವರಣ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Randysnach on ಸೋತ ಕಾಂಗ್ರೆಸ್ ನಾಯಕರಿಗೆ ಪಾಠ.
    • fen daison_tkOt on ಮಗನನ್ನು ಕೊಂದ ತಾಯಿ ಮಾನಸಿಕ ರೋಗಿ ಅಲ್ಲ| Suchana Seth
    • Thomasnoids on ಸಿಎಂ ವಿರುದ್ಧ ರಾಜ್ಯಪಾಲರ ಸಮರ.
    Latest Kannada News

    ಎಚ್ಚೆತ್ತ ರಾಜ್ಯ ಸರ್ಕಾರ

    December 12, 2025

    ಟ್ರೆಂಡ್ ಆಗ್ತಿದೆಯಾ ಮದುವೆಗೆ ಮುಂಚೆ ಪ್ರೆಗ್ನೆಂಟ್?

    December 12, 2025

    ಚನ್ನರಾಜ ಹಟ್ಟಿಹೊಳಿ ಹಾಕಿದ ಪೋಸ್ಟ್ ನಲ್ಲಿ ಏನಿದೆ ಗೊತ್ತಾ?

    December 12, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸಿಎಂ ವಿಮಾನಯಾನ ಬಳಕೆಗೆ 47 ಕೋಟಿ ಖರ್ಚು #varthachakra #siddaramaiah #helicopter #airtravel #costs #news
    Subscribe