ಆನೇಕಲ್ (Anekal): ಬೆಂಗಳೂರು ಹೊರವಲಯದ ಆನೇಕಲ್ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಡೆಯಲಿರುವ ಹುಸ್ಕೂರು ಮದ್ದೂರಮ್ಮ ಜಾತ್ರೆ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ನೆರೆಯ ಆಂಧ್ರ, ತಮಿಳುನಾಡಿನಿಂದಲೂ ಸಾಕಷ್ಟು ಪ್ರಮಾಣದಲ್ಲಿ ಭಕ್ತರು ಬಂದು ಈ ಜಾತ್ರೆಯಲ್ಲಿ ಪಾಲ್ಗೊಂಡು ಮದ್ದೂರಮ್ಮ ದೇವಿಯ ಆರಾಧನೆ ಮಾಡಿ ಪುನೀತರಾಗುತ್ತಾರೆ.
ಈ ಜಾತ್ರೆಯ ಸಮಯದಲ್ಲಿ ಸಿದ್ಧಪಡಿಸುವ ಅತಿ ಎತ್ತರದ ತೇರು ನಾಡಿನಲ್ಲಿಡೆ ಪ್ರಸಿದ್ಧಿ ಮತ್ತು ಕುತೂಹಲವನ್ನು ಮೂಡಿಸುತ್ತದೆ ಈ ಬಾರಿ ಜಾತ್ರೆಯಲ್ಲಿ 120 ಅಡಿ ಉದ್ದದ ತೇರನ್ನು ನಿರ್ಮಿಸಲಾಗಿತ್ತು.
ತೇರಿನೊಳಗೆ ಮದ್ದೂರಮ್ಮ ದೇವಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಆನೇಕಲ್ ತಾಲೂಕಿನ ಹೀಲಲಿಗೆ ಗ್ರಾಮದಿಂದ ಹುಸ್ಕೂರು ಕಡೆಗೆ ತರಲಾಗುತ್ತಿತ್ತು. ಎತ್ತುಗಳು ಮತ್ತು ಟ್ರ್ಯಾಕ್ಟರ್ ಗಳ ನೆರವಿನಿಂದ ಭಕ್ತರ ಜಯ ಘೋಷ ಮಂಗಳವಾದ್ಯಗಳ ನಡುವೆ ಅದ್ದೂರಿಯಾಗಿ ಸಾಗಿ ಬರುತ್ತಿದ್ದ ತೇರು ಕಮ್ಮಸಂದ್ರ ಸಮೀಪದ ಹೈಪರ್ ಮಾರ್ಕೆಟ್ ತಿರುವಿನಲ್ಲಿ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ ಈ ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ಯಾವುದೇ ರೀತಿಯ ನೋವುಗಳು ಆಗಿಲ್ಲ ಇದನ್ನು ದೇವಿಯ ಪವಾಡ ಎಂದು ಬಣ್ಣಿಸಿದ ಭಕ್ತರು ವಿಶೇಷ ಪೂಜೆ ಸಲ್ಲಿಸಿ ಪುನೀತರಾಗುತ್ತಿದ್ದಾರೆ.


1 Comment
AccessBridge: AccessBridge Pharmacy – AccessBridge Pharmacy