ಅಹೋರಾತ್ರ ಮತ್ತು ಚರಣ್ ವಿರುದ್ಧ ಫಿಲಂ ಚೇಂಬರ್ ಅಧ್ಯಕ್ಷರಾದ ಬಾ ಮಾ ಹರೀಶ್ ಅವರು ಸೈಬರ್ ಕ್ರೈಮ್ ಅಧಿಕಾರಿಗೆ ದೂರು ನೀಡಿದ್ದಾರೆ.
ಕಿಚ್ಚ ಸುದೀಪ್ ವಿರುದ್ಧ ಅವಹೇಳನಾಕಾರಿ ಪದಗಳನ್ನು ಬಳಸಿದ್ದ ಅಹೋರಾತ್ರ ಹಾಗು ಚರಣ್ ಎಂಬುವವರ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪೊಲೀಸರಿಗೆ ದೂರು ನೀಡಿದೆ. ಸುದೀಪ್ ವಿರುದ್ಧ ಚರಣ್ ಬಳಕೆ ಮಾಡಿದ್ದ ಶಬ್ದ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಇನ್ನು ಕಳೆದ ಕೆಲವು ವರ್ಷಗಳಿಂದ ಕಿಚ್ಚ ಸುದೀಪ್ ವಿರುದ್ಧ ಅಹೋರಾತ್ರ ತಿರುಗಿಬಿದ್ದಿದ್ದರು. ಸುದೀಪ್ ರಮ್ಮಿ ಹಾಜೀರಾತು ನೀಡಿದ್ದಕ್ಕೆ ಆಕ್ರೋಶಗೊಂಡಿದ್ದ ಅಹೋರಾತ್ರ ಜನರು ರಮ್ಮಿ ಆಡಿ ಮನೆ ಮಟ ಕಳೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು. ಆ ಬಳಿಕ ಸುದೀಪ್ ಅಭಿಮಾನಿಗಳು ಅಹೋರಾತ್ರ ಮನೆಗೆ ಹೋಗಿ ಗಲಾಟೆ ಮಾಡಿದ್ದರು. ಅದರ ವಿರುದ್ಧವೇ ಈಗ ವಾಣಿಜ್ಯ ಮಂಡಳಿ ದೂರು ದಾಖಲಿಸಿದೆ.