Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » Accident city ಬೆಂಗಳೂರು-ಪ್ರತಿನಿತ್ಯ ಮೂವರು ಬಲಿ
    ಅಪರಾಧ

    Accident city ಬೆಂಗಳೂರು-ಪ್ರತಿನಿತ್ಯ ಮೂವರು ಬಲಿ

    vartha chakraBy vartha chakraJune 18, 2023Updated:June 18, 2023No Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು,ಜೂ.18 – ನಗರದಲ್ಲಿ ಕಳೆದ ಮೂರು ವರ್ಷ ಸಂಭವಿಸಿದ ಅಪಘಾತದಲ್ಲಿ ದಿನಕ್ಕೆ ಸರಾಸರಿ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ.
    ನಗರದಲ್ಲಿ ಪ್ರತಿನಿತ್ಯ 2000 ವಾಹನಗಳು ಹೊಸದಾಗಿ ರಸ್ತೆಗೆ ಇಳಿಯುತ್ತಿದ್ದು, ಅತಿವೇಗ, ನಿರ್ಲಕ್ಷ್ಯ ಚಾಲನೆಯಿಂದ ಅಪಘಾತಗಳು ಸಂಭವಿಸುತ್ತಿವೆ. ಕಳೆದ ಎರಡು ವರ್ಷಗಳಿಗೆ ಹೋಲಿಸಿದರೇ 2023ರಲ್ಲಿ ಭೀಕರ ಅಪಘಾತದಲ್ಲಿ ಸಾವನ್ನಪ್ಪಿರುವ ಸಂಖ್ಯೆ ಹೆಚ್ಚಳವಾಗಿದೆ.
    ನಗರ ಸಂಚಾರ ಪೊಲೀಸರು ಮೂರು ವರ್ಷಗಳಲ್ಲಿ ನಗರದಲ್ಲಿ ಸಂಭವಿಸಿರುವ ಅಪಘಾತಗಳು ಹಾಗೂ ಮೃತಪಟ್ಟವರ ಅಂಕಿ- ಸಂಖ್ಯೆಗಳ ಒಳಗೊಂಡ ಕೈಪಿಡಿಯನ್ನು ಬಿಡುಗಡೆ ಮಾಡಲಾಗಿದ್ದು,ಅದರಲ್ಲಿ ಆಘಾತಕಾರಿ ಅಂಶಗಳು ಬಹಿರಂಗಗೊಂಡಿವೆ.
    ಕಳೆದ 2020 ರಲ್ಲಿ 632 ಭೀಕರ ಅಪಘಾತಗಳು ಸಂಭವಿಸಿ, 657 ಮಂದಿ ಸಾವನ್ನಪ್ಪಿದ್ದರೆ,2021 ರಲ್ಲಿ 618 ಅಪಘಾತಗಳು ಸಂಭವಿಸಿ 651 ಜನ ಮೃತ ಪಟ್ಟರೆ,2022 ರಲ್ಲಿ 752 ಅಪಘಾತಗಳು ಸಂಭವಿಸಿದ್ದು, 772ಮಂದಿ ಮೃತರಾಗಿದ್ದಾರೆ. 2021ರಕ್ಕಿಂತ 2022 ರಲ್ಲಿ 134 ಹೆಚ್ಚು ಅಪಘಾತ ಸಂಭವಿಸಿದ್ದು, ಇದರಲ್ಲಿ 121ಮಂದಿ ಸಾವನ್ನಪ್ಪಿದ್ದಾರೆ.
    2022 ರಲ್ಲಿ ಮೃತಪಟ್ಟ 772 ಜನರ ಪೈಕಿ ದ್ವಿಚಕ್ರ ವಾಹನ ಸವಾರರು 341, 247 ಪಾದಚಾರಿಗಳು, 90 ಹಿಂಬದಿ ಸವಾರರು ಸಾವನ್ನಪ್ಪಿದ್ದಾರೆ. ಇದರಲ್ಲಿ ಹೆಲ್ಮೆಟ್ ರಹಿತ ಚಾಲನೆಯಲ್ಲಿ 122 ಮಂದಿ ಹೆಲ್ಮೆಟ್ ಧರಿಸಿದ 319ಮಂದಿ ಮೃತರಾಗಿದ್ದರೆ, ಪ್ರತಿ ವರ್ಷ ಸರಾಸರಿ163 ಮಂದಿ ಸ್ವಯಂ ಚಾಲಿತ ಅಪಘಾತ (ಸೆಲ್ಫ್ ಆಕ್ಸಿಡೆಂಟ್​​)ಗೆ ಬಲಿಯಾಗಿದ್ದಾರೆ.
    ಮೂರು ವರ್ಷಗಳಲ್ಲಿ 600 ಪುರುಷರು, 94 ಮಹಿಳೆಯರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇವರಲ್ಲಿ 21 ರಿಂದ 40 ವಯಸ್ಸಿನ ಪುರುಷರು ಹಾಗೂ 31 ರಿಂದ 50 ಒಳಗಿನ ವಯಸ್ಸಿನ ಮಹಿಳೆಯರೇ ಹೆಚ್ಚಾಗಿ ಮೃತರಾಗಿರುವುದು ದುರ್ದೈವದ ಸಂಗತಿಯಾಗಿದೆ
    2022ರ ಕ್ಕಿಂತ 2020-21ರಲ್ಲಿ ಕಡಿಮೆ ಅಪಘಾತಗಳು ಸಂಭವಿಸಿದೆ. ಇದಕ್ಕೆ ಕಾರಣ ಕೊರೊನಾ ಹಿನ್ನಲೆಯಲ್ಲಿ ಲಾಕ್ ಡೌನ್​​ನಿಂದ ಅಪಘಾತಗಳು ಇಳಿಮುಖವಾಗಿತ್ತು. ಕೋರೊನಾ ವೇಳೆ ರಸ್ತೆಯಲ್ಲಿ ವಾಹನಗಳ ಸಂಖ್ಯೆ ವಿರಳವಾಗಿತ್ತು. ವರ್ಕ್ ಫ್ರಂಮ್ ಹೋಮ್, ಶಾಲೆ-ಕಾಲೇಜುಗಳಿಲ್ಲದೆ ಕಾರಣ ಅಪಘಾತ ಸಂಖ್ಯೆಯಲ್ಲಿ ಇಳಿಮುಖವಾಗಿತ್ತು.
    ಮೃತಪಟ್ಟವರ ವಿವರ:
    2022 ರಲ್ಲಿ ಅಪಘಾತದಲ್ಲಿ ನಗರದ 464, ವಿವಿಧ ಜಿಲ್ಲೆಯವರು 139, ಹೊರರಾಜ್ಯದವರು 137, ವಿದೇಶಿಗರು4, ಅಪರಿಚಿತರು 28 ಮಂದಿ ಸಾವನ್ನಪ್ಪಿದ್ದಾರೆ. 543 ಜನರು ತಲೆಗೆ ಗಾಯಗೊಂಡು ಮೃತರಾದರೆ,ರಸ್ತೆ ಗುಂಡಿಯಿಂದ 3 ಜನರು ನಿಧನರಾಗಿದ್ದಾರೆ.
    ಸಿಮೆಂಟ್ ರಸ್ತೆಗಳಲ್ಲಿ 139, ಡಾಂಬರು ರಸ್ತೆಗಳಲ್ಲಿ 608, ಮಣ್ಣಿನ ರಸ್ತೆಗಳಲ್ಲಿ 5 ಅಪಘಾತಗಳು ಸಂಭವಿಸಿವೆ. ನೇರವಾದ ರಸ್ತೆಗಳಲ್ಲಿ ಅತಿವೇಗ ಚಾಲನೆಯಿಂದ 569, ತಿರುವು ರಸ್ತೆಗಳಲ್ಲಿ 37, ಟಿ ಜಂಕ್ಷನ್​​ಗಳಲ್ಲಿ 37, ನಾಲ್ಕು ರಸ್ತೆಗಳ ಜಂಕ್ಷನ್​ಗಳಲ್ಲಿ 32, ರಸ್ತೆ ಹಂಪ್​ಗಳಲ್ಲಿ 17 ಅಪಘಾತಗಳು ಸಂಭವಿಸಿವೆ.
    108 ಪಾದಚಾರಿಗಳು ಸಾವು:
    2022 ರಲ್ಲಿ ನಿಗದಿತ ವಲ್ಲದ ಕಡೆ ರಸ್ತೆ ದಾಟುವಾಗ 108 ಪಾದಚಾರಿಗಳು, ನಿಗದಿತ ಸ್ಥಳದಲ್ಲಿ ರಸ್ತೆ ದಾಟುವಾಗ 44 ಮಂದಿ, ರಸ್ತೆ ಬದಿ ನಡೆದುಕೊಂಡು ಹೋಗುವಾಗ 62 ಜನರು ವಾಹನಗಳಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. 2020 ರಲ್ಲಿ 164 ಪಾದಚಾರಿಗಳು, 2021 ರಲ್ಲಿ 161 ಪಾದಾಚಾರಿಗಳು ಮೃತರಾಗಿದ್ದಾರೆ.

    Verbattle
    Verbattle
    Verbattle
    accident ಅಪಘಾತ ಕಾಲೇಜು ಶಾಲೆ
    Share. Facebook Twitter Pinterest LinkedIn Tumblr Email WhatsApp
    Previous Articleಡಿಕೆ ಸುರೇಶ್ ಮುಂದಿನ ಎಲೆಕ್ಷನ್ ನಲ್ಲಿ ಸ್ಪರ್ಧೆ ಮಾಡೋಲ್ಲ!
    Next Article ಕರ್ನಾಟಕ ಬಂದ್ ನ ಅಸಲಿ‌ ಕಾರಣ ಇಲ್ಲಿದೆ ನೋಡಿ!
    vartha chakra
    • Website

    Related Posts

    ಜನಾರ್ದನ ರೆಡ್ಡಿಗೆ ಬಿಕೆ ಹರಿಪ್ರಸಾದ್ ಸವಾಲು

    January 23, 2026

    ಐಜಿಪಿ ರಾಮಚಂದ್ರರಾವ್ ಗೆ ಮತ್ತೊಂದು ಸಂಕಷ್ಟ.

    January 22, 2026

    IPS ಅಧಿಕಾರಿ ತಲೆದಂಡ

    January 20, 2026

    Leave A Reply Cancel Reply

    Verbattle
    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಪ್ರಜ್ವಲ್ ರೇವಣ್ಣ ಜೈಲಿಗೆ ಕಳುಹಿಸಿದ ಪೊಲೀಸರಿಗೆ ಬಹುಮಾನ

    ಮತ್ತೆ ಬೆಂಗಳೂರಿನ ರಸ್ತೆಗಿಳಿಯಲಿವೆ ಬೈಕ್ ಟ್ಯಾಕ್ಸಿಗಳು

    ಜನಾರ್ದನ ರೆಡ್ಡಿಗೆ ಬಿಕೆ ಹರಿಪ್ರಸಾದ್ ಸವಾಲು

    ಜನರ ಆಸ್ತಿ ಕಾರ್ಪೊರೇಟ್ ಪಾಲು: ಇದು ಅಭಿವೃದ್ಧಿಯೋ ಅಥವಾ ಅಪಾಯದ ಮುನ್ಸೂಚನೆಯೋ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • RicardoCor on ಬೆಂಗಳೂರು ಅಭಿವೃದ್ಧಿಗೆ SPV ಘೋಷಣೆ
    • Daviddek on ಕಾಫ್ ಸಿರಪ್ ಬಗ್ಗೆ ಎಚ್ಚರಿಕೆ ಇರಲಿ.
    • RicardoCor on ಬ್ರೆಡ್ ನಲ್ಲಿ ಕೊಕೇನ್ ಸಾಗಾಟ
    Latest Kannada News

    ಪ್ರಜ್ವಲ್ ರೇವಣ್ಣ ಜೈಲಿಗೆ ಕಳುಹಿಸಿದ ಪೊಲೀಸರಿಗೆ ಬಹುಮಾನ

    January 23, 2026

    ಮತ್ತೆ ಬೆಂಗಳೂರಿನ ರಸ್ತೆಗಿಳಿಯಲಿವೆ ಬೈಕ್ ಟ್ಯಾಕ್ಸಿಗಳು

    January 23, 2026

    ಜನಾರ್ದನ ರೆಡ್ಡಿಗೆ ಬಿಕೆ ಹರಿಪ್ರಸಾದ್ ಸವಾಲು

    January 23, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.