ತುಮಕೂರು : ನೀರಿಗಾಗಿ ಹೋಗಿ ಇಬ್ಬರು ವಿದ್ಯಾರ್ಥಿಗಳು ಕೈ ಮುರಿದುಕೊಂಡಿದ್ದು ಒಬ್ಬ ವಿದ್ಯಾರ್ಥಿಯ ಹಲ್ಲು ಉದುರಿರುವ ಘಟನೆ ಗಂಗಸಾಗರ ಗ್ರಾಮದ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಬೆಳಕಿಗೆ ಬಂದಿದೆ.
ಹೊಸದುರ್ಗ ಗ್ರಾಮದ 7ನೇ ತರಗತಿ ವಿದ್ಯಾರ್ಥಿ ಮಣಿಕಂಠ ನೀರಿಗಾಗಿ ಹೋಗಿ ಜಾರಿ ಬಿದ್ದು ಕೈಮುರಿದು ಕೊಂಡಿದ್ದು ಪೋಷಕರಿಗೆ ಮಾಹಿತಿ ನೀಡದೇ ನಿರ್ಲಕ್ಷ್ಯ ವಹಿಸಿದ ಪ್ರಾಂಶುಪಾಲ ರಾಜ್ ಕುಮಾರ್.
ಕಳೆದ ವಾರವೂ ಕೂಡ ಆರ್.ಡಿ.ರೋಪ್ಪ ಗ್ರಾಮದ ವಿದ್ಯಾರ್ಥಿ ನೀರಿಗಾಗಿ ಹೋಗಿ ಕೈ ಮುರಿದಿದ್ದು, ಚಿಕ್ಕಹಳ್ಳಿ ಗ್ರಾಮದ ವಿದ್ಯಾರ್ಥಿ ನೀರಿಗೆ ಬಿದ್ದು ಹಲ್ಲು ಉದುರಿರುವ ಘಟನೆ ಕೂಡ ನಡೆದಿದೆ.
ಇಷ್ಟೆಲ್ಲ ಮಕ್ಕಳು ನೀರಿಗಾಗಿ ಪರದಾಡುತ್ತಿದ್ದರೂ, ನೀರಿನ ಸಮಸ್ಯೆ ಬಗೆರಿಸದ ನಿಲಯಪಾಲಕರು, ಪ್ರಾಂಶುಪಾಲರು, ವಸತಿ ಶಾಲೆಯ ಸಮಸ್ಯೆ ಪೋಷಕರಿಗೆ ಹೇಳದಂತೆ ಹೆದರಿಸುತ್ತಾರೆಂಬುದು ತಿಳಿದು ಬಂದಿದೆ.
ಇನ್ನೊಂದೆಡೆ ಮಕ್ಕಳಿಗೆ ಗುಣಮಟ್ಟದ ತಿಂಡಿ ಉಟ ನೀಡುವುದಿಲ್ಲ, ಹಾಲು ಕೂಡ ಕಳಪೆ ವಿತರಣೆ ವಸತಿ ನಿಲಯದಲ್ಲಿ ನೂರಾರು ಸಮಸ್ಯೆ ಮಕ್ಕಳ ಬದುಕು ಅಂತಂತ್ರ.