(UT Khader)ಮಂಗಳೂರು – ಕಾಂಗ್ರೆಸ್ ಶಾಸಕಾಂಗದ ಉಪನಾಯಕ ಯುಟಿ ಖಾದರ್ ಮತ್ತೊಮ್ಮೆ ಶಾಸನಸಭೆ ಪ್ರವೇಶಿಸುವ ತವಕದಲ್ಲಿದ್ದಾರೆ.
ಸುಶಿಕ್ಷಿತರ ನಾಡು ಎಂದೆ ಕರೆಯಲಾಗುವ ಕರಾವಳಿಯ ಮಂಗಳೂರಿನಿಂದ ಸತತವಾಗಿ ಆಯ್ಕೆಯಾಗುವ ಖಾದರ್ ಈ ಬಾರಿ ಆಯ್ಕೆಯಾಗುವ ಮೂಲಕ ಹೊಸ ದಾಖಲೆ ಸೃಷ್ಟಿಸುವ ಉತ್ಸಾಹದಲ್ಲಿದ್ದಾರೆ. (UT Khader)
ಈ ಹಿಂದೆ ಉಲ್ಲಾಳ ಎಂದು ಕರೆಯಲಾಗುತ್ತಿದ್ದ ಈ ಕ್ಷೇತ್ರ ಕೇರಳದ ಗಡಿ ಭಾಗದಲ್ಲಿದೆ. ಈ ಕ್ಷೇತ್ರದಲ್ಲಿ ಎಲ್ಲಾ ಸಮುದಾಯಗಳ ಜನತೆ ಇದ್ದರೂ ಮುಸ್ಲಿಂ ಸಮುದಾಯಕ್ಕೆ ಸೇರಿದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಕಳೆದ ನಾಲ್ಕು ಚುನಾವಣೆಗಳಲ್ಲಿ ಯು.ಟಿ.ಖಾದರ್ (UT Khader) ಅವರನ್ನು ಆಯ್ಕೆ ಮಾಡಿರುವ ಈ ಕ್ಷೇತ್ರದಿಂದ ಈ ಬಾರಿ ಎಸ್ ಡಿ ಪಿ ಐ ಕಣಕ್ಕಿಳಿದಿದ್ದು ಖಾದರ್ ಅವರಿಗೆ ತಿರುಗೇಟು ನೀಡುವ ತಂತ್ರ ರೂಪಿಸಿದೆ.

ಕಳೆದ ಹಲವು ಚುನಾವಣೆಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು, ಆದರೆ ಈ ಬಾರಿ ಎಸ್ಡಿಪಿಐ ಅಭ್ಯರ್ಥಿ ಕಣದಲ್ಲಿ ಇರುವುದರಿಂದ ಸ್ಪರ್ಧಾ ಕಣಕ್ಕೆ ಮತ್ತಷ್ಟು ರಂಗೇರಿದೆ. ಆದರೆ, ಈ ಬಾರಿಯೂ ಖಾದರ್ ಮತ್ತಷ್ಟು ಹುಮ್ಮಸ್ಸಿನಿಂದ ಕಣಕ್ಕಿಳಿದಿದ್ದು, ಎರಡನೇ ಸ್ಥಾನಕ್ಕಾಗಿ ಬಿಜೆಪಿ ಮತ್ತು ಎಸ್ಡಿಪಿಐ ನಡುವೆ ಪೈಪೋಟಿ ಏರ್ಪಟ್ಟಿದೆ ಎಂದು ಹಲವು ಸಮೀಕ್ಷೆಗಳ ವರದಿಗಳು ತಿಳಿಸಿವೆ. (UT Khader)
ಖಾದರ್ ಆಡಳಿತ ಪಕ್ಷದಲ್ಲಿರಲಿ ಅಥವಾ, ವಿರೋಧ ಪಕ್ಷದಲ್ಲಿರಲಿ, ಕ್ಷೇತ್ರಕ್ಕೆ ಅಭಿವೃದ್ಧಿ ತರುವ ವ್ಯಕ್ತಿ ಎಂದು ಮತದಾರರಲ್ಲಿ ಜನಪ್ರಿಯರಾಗಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಕ್ಷೇತ್ರದಲ್ಲಿ ರಸ್ತೆ ಸೇತುವೆ ಆಸ್ಪತ್ರೆ ಒಳಚರಂಡಿ ವೆಂಟೆಡ್ ಡ್ಯಾಮ್ ಸೇರಿದಂತೆ ಹಲವಾರು ಕಾಮಗಾರಿಗಳು ಎದ್ದು ಕಾಣುತ್ತಿದ್ದು ಅವುಗಳು ಖಾದರ್ ಅವರನ್ನು ಗೆಲುವಿನ ದಡ ದಾಟಿಸಲಿವೆ ಎಂದು ಅಭಿಪ್ರಾಯ ಕೇಳಿಬಂದಿದೆ. (UT Khader)
Also read.
(UT Khader)

