ಬಾಗಲಕೋಟೆ : ನಗರದಲ್ಲಿ ಮನೆ ಹೊರಗೆ ಒಣಗಿಸಿರುವ ಬಟ್ಟೆ ಬರೆಗಳು ಕಾಣೆಯಾಗುತ್ತಿವೆ. ಅಡುಗೆ ಮನೆಯಲ್ಲಿ ತಯಾರಿಸಿಟ್ಟ ತಿಂಡಿ ಊಟಗಳು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಖಾಲಿಯಾಗುತ್ತಿವೆ. ಈ ಘಟನೆ ಪೊಲೀಸರಿಗೆ ತಲೆ ನೋವಾಗಿತ್ತು. ಜಿಲ್ಲೆಯ ಬನಹಟ್ಟಿ – ರಬಕವಿ ತಾಲೂಕಿನ ಜಗದಾಳ ಗ್ರಾಮದ ಬೀರಪ್ಪ (೨೨ ವರ್ಷ) ಕಳೆದ ಸುಮಾರು ದಿನಗಳಿಂದ 20ದಿನಗಳಿಂದ ನಗರದ ಲಕ್ಷ್ಮೀನಗರ, ಸಾಯಿ, ಕಾಡಸಿದ್ದೇಶ್ವರ ನಗರಗಳಲ್ಲಿ ರಾತ್ರಿ ಹೊತ್ತು ಮಾತ್ರ ಸಂಚರಿಸಿ ಬಟ್ಟೆ ಬರೆ ಹಾಗು ಅಡಿಗೆಗಳನ್ನ ಕಳ್ಳತನ ಮಾಡುತ್ತಿದ್ದಾನೆ. ಆದರೆ ಮನೆಯಲ್ಲಿರುವ ಯಾವುದೇ ಬೆಲೆಬಾಳುವ ವಸ್ತುಗಳನ್ನು ಕದಿಯದ ವಿಚಿತ್ರ ಕಾರ್ಯಕ್ಕೆ ನಗರದ ಜನತೆ ಬೆಚ್ಚಿ ಬಿದ್ದಿದ್ದಾರೆ.