ಸಾವು ಯಾರ ರೀತಿ ಆದರೂ ಸಂಭವಿಸಿಬಹುದು. ಜಸ್ಟ್ ಎಡವಿದರೂ ಸಾಯ್ತಾರೆ ಅನ್ನೋ ಮಾತಿಗೆ ಪುಷ್ಠಿ ನೀಡುವಂತೆ ಮೈಸೂರಲ್ಲಿ ಇವತ್ತು ಬೆಳ್ ಬೆಳಗ್ಗೆ ಘಟನೆಯೊಂದು ನಡೆದಿದೆ.
ಜಸ್ಟ್ ಎಡವಿ ಬಿದ್ದಿದ್ದಕ್ಕೆ ವ್ಯಕ್ತಿ ಸತ್ತು ಹೋಗಿದ್ದಾನೆ. ಮೈಸೂರಿನ ವಿವೇಕಾನಂದ ವೃತ್ತದ ಬಳಿ ಘಟನೆ ಜರುಗಿದ್ದು, ಗಾರೆ ಕೆಲಸ ಮಾಡುವ ರಮೇಶ್ ಎಂಬಾತನೇ ಸಾವನ್ನಪ್ಪಿರುವ ದುರ್ದೈವಿ. ಮೈಸೂರಿನ ಅಶೋಕಪುರಂ 10ನೇ ಕ್ರಾಸ್ ನಿವಾಸಿಯಾಗಿರುವ ರಮೇಶ್, ವಿವೇಕಾನಂದ ನಗರದಲ್ಲಿರುವ ಮಗನ ಮನೆಗೆ ಬೆಳಗಿನ ಉಪಹಾರಕ್ಕೆ ರವೆ ತೆಗೆದುಕೊಂಡು ಹೋಗುವಾಗ ಘಟನೆ ಜರುಗಿದೆ.
ತಲೆಗೆ ತೀವ್ರ ಪೆಟ್ಟಾಗಿದ್ದು, ರಕ್ತಸ್ರಾವ ಉಂಟಾಗಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಸದ್ಯ ಸ್ಥಳಕ್ಕೆ ಪೊಲೀಸರು ಆಗಮಿಸಿ ಘಟನೆಯ ಮತ್ತಷ್ಟು ವಿವರ ಕಲೆ ಹಾಕುತ್ತಿದ್ದಾರೆ.
ಜಸ್ಟ್ ಎಡವಿ ಬಿದ್ದಿದ್ದಕ್ಕೆ ಹಾರಿ ಹೋಯ್ತು ಪ್ರಾಣ ಪಕ್ಷಿ
Previous Articleಆ. 7 ರಂದು ಮೈಸೂರಿಗೆ ಗಜಪಡೆ ಆಗಮನ
Next Article ಫಾಝಿಲ್ ಕೊಲೆ 21ಮಂದಿಗೆ ಪೊಲೀಸ್ ಡ್ರಿಲ್