Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಮೋದಿಗೂ ಅದಾನಿಗೂ ಲವ್ವು – ಬೀದಿಗಿಳಿದ ಹತ್ತಿಪ್ಪತ್ತು ಹುಡುಗರ ಡವ್ವು
    Bengaluru

    ಮೋದಿಗೂ ಅದಾನಿಗೂ ಲವ್ವು – ಬೀದಿಗಿಳಿದ ಹತ್ತಿಪ್ಪತ್ತು ಹುಡುಗರ ಡವ್ವು

    vartha chakraBy vartha chakraFebruary 14, 2023Updated:February 14, 20235 Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ವಿಶ್ವದಾದ್ಯಂತ ಪ್ರೇಮಿಗಳ ದಿನಾಚರಣೆ ಎಂದು ಪ್ರೀತಿ ವ್ಯಕ್ತ ಪಡಿಸುತ್ತಿರುವ ಇಂದು, ಫೆಬ್ರವರಿ 14ರಂದು, ರಾಜಧಾನಿ ಬೆಂಗಳೂರಿನ MG ರಸ್ತೆ, ಬ್ರಿಗೇಡ್ ರಸ್ತೆ (Brigade road) ಯಲ್ಲಿ ಮಟ ಮಟ ಮಧ್ಯಾಹ್ನ ಒಂದಿಪ್ಪತ್ತು ಜನ ಯುವಕರ ಗುಂಪು ಮೋದಿ ಹಾಗೂ ಅದಾನಿ ಅವರ ಚಿತ್ರಗಳಿರುವ ಫಲಕಗಳನ್ನು ಹಿಡಿದು ಗಮನ ಸೆಳೆಯಲು ಬೆವರಿಳಿಸಿದರು. ಯುವಕ ಯುವತಿಯರು ಪರಸ್ಪರ ಪ್ರೀತಿ ವ್ಯಕ್ತಪಡಿಸುವುದು ಇಂದಿನ ವಿಶೇಷ. ಹಾಗೆಯೇ ಸಿಂಗಲ್ ಇದ್ದೋ, ಡಬಲ್ ಇದ್ದೋ ತಮ್ಮ ಎಕ್ಸ್ ಅನ್ನು ಮರೆಯಲಾರದವರು ಅವರನ್ನು ಜ್ಞಾಪಿಸಿಕೊಳ್ಳುತ್ತಾ ಖುಷಿಯಿಂದ ಅಥವ ಬೇಸರದಿಂದ ದಿನ ಕಳೆಯುವುದು ವಾಡಿಕೆ.

    ಆದರೆ ಯಾರದೋ ಇಬ್ಬರ ಪ್ರೀತಿಯನ್ನು ಮೂರನೇಯವರಾದ ಅವರ ವಿರೋಧಿಗಳು ಸಂಭ್ರಮಿಸುತ್ತ, ಬಿಸಿಲಿನ ಬೇಗೆಯಲ್ಲಿ ಶಾಂತವಾಗಿ, ಕೈಯಲ್ಲಿ ರೆಡ್ ರೋಸ್ ಹಿಡಿದು, ಸೈಲೆಂಟ್ ಆಗಿ ಹೆಜ್ಜೆ ಹಾಕುವುದನ್ನು ಕಂಡ ಕೆಲವರಿಗೆ ಆಶ್ಚರ್ಯಕ್ಕಿಂತ ಅನುಕಂಪ ಬಂದಿದ್ದೆ ಹೆಚ್ಚು ಎನ್ನುವುದು ಅಲ್ಲಿ ಹಾದುಹೋಗುತ್ತಿದ್ದ ಪಾದಚಾರಿಗಳ ಹಾಗು ಸ್ಥಳೀಯರ ಅಲ್ಪಆಸಕ್ತಿ, ಅಷ್ಟೇ ಸೈಲೆಂಟ್ ಆಗಿ ವ್ಯಕ್ತಪಡಿಸಿದಂತಿತ್ತು.

    ಕರ್ನಾಟಕ ಯುವ ಕಾಂಗ್ರೆಸ್ ನ ಅಧ್ಯಕ್ಷ ಮೊಹಮ್ಮದ್ ನಳಪಾಡ್ (Mohammed Nalapad) ಅವರ ಮುಂದಾಳತ್ವದಲ್ಲಿ ನಡೆದ Modi – Adani ಪ್ರೇಮಾಚರಣೆ ಹಲವು ಪ್ರಶ್ನೆಗಳ ಆಗರವಾಗಿದ್ದ ಹಾಗಿತ್ತು. ನಳಪಾಡ್ ಅವರ Modi – Adani ನಂಟಿನ ಬಗೆಗಿನ ಹೇಳಿಕೆಗಳು, ಮೋದಿ ಮಾರ್ತಾರೆ, ಅದಾನಿ ಕೊಂಡುಕೊಳ್ತಾರೆ ಅನ್ನುವ ಆರೋಪಗಳು, ಅವರಿಬ್ಬರ ಪ್ರೀತಿಯಿಂದ ದೇಶದ ಸಂಪತ್ತು, ಜನಸಾಮಾನ್ಯರ ಹಣ ಸಂಪೂರ್ಣ ನಷ್ಟ ಆಗಿದೆ ಎನ್ನುವ ವಿಚಾರ ಅಭಿವ್ಯಕ್ತಿ ಸ್ವಾತಂತ್ರ್ಯದ ಒಂದು ಅಪಕ್ವ ಪ್ರಯೋಗದ ಬಡಪಾಯಿ ಪ್ರದರ್ಶನ ಇದ್ದಂತಿತ್ತು ಎನ್ನುವುದು ಅಲ್ಲಿ ಕಂಡ ಬೆರಳೆಣಿಕೆಯ ಜನರು ಇವರ ಪ್ರದರ್ಶನದ ಬಗ್ಗೆ ಗಾಳಿಯಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯ.

    ಪ್ರೀತಿ ಪ್ರೇಮದ ಗುಂಗಿನಲ್ಲೇ ಇರುವ ಯುವಕರಿಗೆ ನಿಜವಾದ ರಾಜಕಾರಣ, ನಾಯಕತ್ವ ಕಾಣುವುದು ಯಾವಾಗ, ಕಷ್ಟಗಳ ಮೇಲೆ ಕಷ್ಟಗಳು ಜನಸಾಮಾನ್ಯರನ್ನು ಕಂಗೆಡಿಸಿರುವಾಗ ಒಂದು ರಾಷ್ಟ್ರೀಯ ಪಕ್ಷ ಎಂದು ಹೇಳಿಕೊಳ್ಳುವ, Congress ನ ರಾಜ್ಯ ಮಟ್ಟದ ಸ್ಥಾನ ಅಲಂಕರಿಸುವ ಪದಾಧಿಕಾರಿಯೊಬ್ಬರು ತಮ್ಮ ಬೆರಳೆಣಿಕೆಯ ಹಿಂಬಾಲಕರೊಂದಿಗೆ ಉತ್ತಮ ಪಾದಚಾರಿ ಮಾರ್ಗ ಇರುವ, ಪ್ರೀತಿಯ ಸಂದೇಶವನ್ನು ಸಾರಿದ ಮಹಾತ್ಮ ಗಾಂಧಿ ಅವರ ಹೆಸರಿನ ರಸ್ತೆಯ ಮೇಲೆ ನಡೆದದ್ದು ಆ ಪಕ್ಷದ ಹಿರಿಯ ನಾಯಕರ ಗಮನಕ್ಕೂ ಬಂತೋ ಇಲ್ಲವೋ ಎಂದೆನಿಸಿದ್ದು ಉತ್ಪ್ರೇಕ್ಷೆಯಲ್ಲ ಎನ್ನುವಂತಿತ್ತು.

    ಒಟ್ಟಿನಲ್ಲಿ ದ್ವೇಷ ಮಾಡಿ ಮಾಡಿ, ದ್ವೇಷಿಸಿದವರನ್ನು ಏನೂ ಮಾಡಲಾಗದಾದಾಗ, ದ್ವೇಷಿಸಿದವರ ಮೇಲೆಯೇ ಪ್ರೀತಿ ಹುಟ್ಟುತ್ತದೆ ಎನ್ನುವ ಮಾತನ್ನು ಕೇಳಿ, ನೋಡಿ, ಪ್ರೀತಿ ಉಕ್ಕಿ ಹರಿಯುವಾಗ ಕೈಯಲ್ಲಿ ಗುಲಾಬಿ ಇದ್ದರೂ ದೂರದ ಕಮಲದ ಮೇಲಿನ ಸೆಳೆತದಿಂದ ಕೆಸರೆರಚಲು ಬಿಳಿ ಬಟ್ಟೆ ತೊಟ್ಟು ಹೋಗುವುದು ಎಷ್ಟು ಸಮಂಜಸ ಎಂದು ಇದನ್ನು ನೋಡಿದ ಜನಸಾಮಾನ್ಯರ ಮನಸ್ಸಿನಲ್ಲಿ ಮೂಡಿದ್ದಂತೂ ನಿಜ ಎನ್ನಬಹುದು. ನರೇಂದ್ರನ ಹಿಂಸೆಗೆ ಮೊಹಮ್ಮದನ ಆವೇಶಕ್ಕೆ ಸಂತ ವ್ಯಾಲಂಟೈನ್ ನೂ ಸಹ ಕಾಲಕ್ಕೆ ತಕ್ಕ ಹಾಗೆ ಹೊಸದೊಂದು ಬಾಣವನ್ನು ಪ್ರಯೋಗಿಸಿದಂತಿತ್ತು ಇಂದಿನ ವಾತಾವರಣ ಎನ್ನುವುದು ಬ್ರಿಗೇಡ್ ರಸ್ತೆಯ ಕೆಲವು ಜಾಣರು ಆಡಿಕೊಂಡಂಥ ಮಾತು ಸತ್ಯವೇ ಎಂದು ಯೋಚಿಸಬೇಕೇ ಅಥವಾ ಪ್ರೀತಿಯ ನಶೆ ರಾತ್ರಿ ಬೆಳಗಾಗುವುದರೊಳಗೆ ಇಳಿಯುತ್ತದೆ ಎಂದು ತಿಳಿಯಬೇಕೆ ಎಂದು ಯೋಚಿಸಬೇಕು.

    Verbattle
    Verbattle
    Verbattle
    Brigade road Congress ED Gautam Adani m m g road modi Modi - Adani Mohammed Nalapad narendra modi road valentines day ಅದಾನಿ ಕಾಂಗ್ರೆಸ್ Business
    Share. Facebook Twitter Pinterest LinkedIn Tumblr Email WhatsApp
    Previous Article225 ಊರುಗಳಲ್ಲಿ Zomato ಸೇವೆ ಸ್ಥಗಿತ
    Next Article Congressನತ್ತ ಮುಖಮಾಡಿದ BJP ಶಾಸಕಿ
    vartha chakra
    • Website

    Related Posts

    ಆಕಾಶದ ಅಧಿಪತಿ ದಸ್ಸೋಲ್ ರಫಾಲೆ: ಯುಪಿಎ ಟೆಂಡರ್‌ನಿಂದ ಎನ್‌ಡಿಎ ಮೆಗಾ ಡೀಲ್‌ ವರೆಗೆ..!

    February 14, 2026

    ಡ್ರಾಪ್‌ಔಟ್‌ನಿಂದ ದೈತ್ಯ ಉದ್ಯಮಿಯವರೆಗೆ: ಅದಾನಿ ಸಾಮ್ರಾಜ್ಯದ ಯಶೋಗಾಥೆ!

    February 14, 2026

    ಶಾಸಕರೇ ಬಾಯಿ ಮುಚ್ಚಿಕೊಂಡಿರಿ.

    February 13, 2026

    5 Comments

    1. king_peEi on February 11, 2026 1:51 pm

      If you’re looking for an exciting challenge, try playing king thimbles game today!
      Important considerations include the size, material, and comfort level.

      Reply
    2. kamera_kspi on February 12, 2026 5:19 pm

      Если вы хотите повысить безопасность и удобство маневрирования, рекомендуем купить камеру заднего вида на грузовик.
      Выбор камеры заднего вида зависит от множества параметров, включая качество изображения и наличие дополнительных функций.

      Reply
    3. kamera_dsOi on February 12, 2026 5:20 pm

      Для обеспечения максимальной безопасности на дороге рекомендуем приобрести купить камеру заднего вида для грузового автомобиля.
      Все больше транспортных компаний устанавливают камеры заднего вида на свои грузовики для повышения безопасности.

      Reply
    4. Vmqrsl on February 13, 2026 3:24 am

      betmgm Oklahoma betmgm РћРќ betmgm ND

      Reply
    5. pas88 login on February 13, 2026 4:50 pm

      pas88 slot

      Reply

    Leave A Reply Cancel Reply

    Verbattle
    Categories
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಮಹಾಶಿವರಾತ್ರಿ ವಿಶೇಷ: ‘ಶಿವ’ ಎಂದರೆ ಶೂನ್ಯವೂ ಹೌದು, ಅನಂತವೂ ಹೌದು!

    ಸತ್ತವಳು ಎದ್ದು ಬಂದಾಗ!

    ಕಪ್ಪೆ ವಿಷದಿಂದ ಪ್ರತಿಪಕ್ಷ ನಾಯಕನ ಹತ್ಯೆ!

    ಬೆಂಗಳೂರಿನಲ್ಲಿ ಬಡ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಜಾಗ ಮಂಜೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • LeonardReawn on ಅವಿವಾಹಿತರಿಗೆ ಹೋಟೆಲ್ ರೂಂ ಇಲ್ಲ
    • Williamkendy on ಧರ್ಮಸ್ಥಳ ಪ್ರಕರಣಕ್ಕೆ ಹಠಾತ್ ತಿರುವು.
    • alpha66_qtKr on ಕೈಲಾಸವಾಸಿಯಾದ ‘ಕಲೈವಾಣಿ’
    Latest Kannada News

    ಮಹಾಶಿವರಾತ್ರಿ ವಿಶೇಷ: ‘ಶಿವ’ ಎಂದರೆ ಶೂನ್ಯವೂ ಹೌದು, ಅನಂತವೂ ಹೌದು!

    February 15, 2026

    ಸತ್ತವಳು ಎದ್ದು ಬಂದಾಗ!

    February 15, 2026

    ಕಪ್ಪೆ ವಿಷದಿಂದ ಪ್ರತಿಪಕ್ಷ ನಾಯಕನ ಹತ್ಯೆ!

    February 15, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.