Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಕ್ಲಿನಿಕಲ್ ಟ್ರಯಲ್: 18 ರೋಗಿಗಳು ಕ್ಯಾನ್ಸರ್‌ನಿಂದ ಪೂರ್ಣ ಗುಣಮುಖ
    ಸುದ್ದಿ

    ಕ್ಲಿನಿಕಲ್ ಟ್ರಯಲ್: 18 ರೋಗಿಗಳು ಕ್ಯಾನ್ಸರ್‌ನಿಂದ ಪೂರ್ಣ ಗುಣಮುಖ

    vartha chakraBy vartha chakraJune 8, 2022Updated:June 8, 2022No Comments1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ನ್ಯೂಯಾರ್ಕ್: ಅತಿ ಸಣ್ಣ ಕ್ಲಿನಿಕಲ್ ಟ್ರಯಲ್ ಒಂದರಲ್ಲಿ ಭಾಗವಹಿಸಿದ್ದ ಗುದನಾಳದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 18 ರೋಗಿಗಳು ಕ್ಯಾನ್ಸರ್ ಮುಕ್ತರಾಗಿದ್ದಾರೆ. ಪ್ರಾಯೋಗಿಕ ಔಷಧದಿಂದಲೇ ಕ್ಯಾನ್ಸರ್ ರೋಗಿಗಳು ಪೂರ್ಣ ಗುಣಮುಖರಾಗಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಈ ರೋಗಿಗಳು ಸುಮಾರು ಆರು ತಿಂಗಳು ಕಾಲ ಡೋಸ್ಟರ್‍ಲಿಮಾಬ್ ಎಂಬ ಔಷಧವನ್ನು ಸೇವಿಸಿದ್ದು ಅಂತ್ಯದಲ್ಲಿ ಅವರ ದೇಹದಲ್ಲಿದ್ದ ಕ್ಯಾನ್ಸರ್ ಗೆಡ್ಡೆ ಮಾಯವಾಗಿದೆ.
    ಮಾನವ ದೇಹದಲ್ಲಿರುವ ರೋಗ ಪ್ರತಿಕಾಯಗಳಿಗೆ ಪರ್ಯಾಯವಾಗಿರುವ ಲ್ಯಾಬ್ ಉತ್ಪಾದಿತ ಮಾಲಿಕ್ಯೂಲ್‍ಗಳನ್ನು ಈ ಔಷಧ ಹೊಂದಿದೆ. ಎಲ್ಲಾ ರೋಗಿಗಳಿಗೂ ಅದೇ ಔಷಧ ನೀಡಲಾಗಿದ್ದು ಅಂತಿಮವಾಗಿ ಅವರ ತಪಾಸಣೆ ನಡೆಸಿದಾಗ ಎಂಡೋಸ್ಕೋಪಿ, ಪೊಸಿಟ್ರಾನ್ ಎಮಿಶನ್ ಟೊಮೋಗ್ರಾಫಿ ಅಥವಾ ಪೆಟ್ ಸ್ಕ್ಯಾನ್ ಮತ್ತು ಎಂಆರ್‌ಐ ಸ್ಕ್ಯಾನ್‍ ಮಾಡಿದಾಗಲೂ ಕ್ಯಾನ್ಸರ್ ಲಕ್ಷಣಗಳು‌ ಗೋಚರಿಸಿಲ್ಲ.
    ಕ್ಯಾನ್ಸರ್ ಇತಿಹಾಸದಲ್ಲಿಯೇ ಇಂತಹ ಒಂದು ಬೆಳವಣಿಗೆ ಇದೇ ಮೊದಲ ಬಾರಿ ಆಗಿದೆ ಎಂದು ನ್ಯೂಯಾರ್ಕ್‌ನ ಮೆಮೋರಿಯಲ್ ಸ್ಲೋವನ್ ಕೆಟರಿಂಗ್ ಕ್ಯಾನ್ಸರ್ ಸೆಂಟರ್‌ನ ಡಾ ಲೂಯಿಸ್ ಎ ಡಯಾಝ್ ಜೆ ಹೇಳಿದ್ದಾರೆ.
    ಈ ಕ್ಲಿನಿಕಲ್ ಟ್ರಯಲ್‍ನಲ್ಲಿ ಭಾಗವಹಿಸಿದ್ದ ರೋಗಿಗಳೆಲ್ಲರೂ ಈ ಹಿಂದೆ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯಲೆಂದು ಕಿಮೋಥೆರಪಿ, ರೇಡಿಯೇಷನ್‌ಸಹಿತ ಶಸ್ತ್ರಕ್ರಿಯೆಗೂ ಒಳಗಾಗಿದ್ದರು. ಇದೀಗ ಎಲ್ಲರೂ ಕ್ಯಾನ್ಸರ್ ಮುಕ್ತರಾಗಿರುವುದರು ಅಚ್ಚರಿ ಮೂಡಿಸಿದೆಯಲ್ಲದೆ ವೈದ್ಯಕೀಯ ಜಗತ್ತಿನಲ್ಲಿ ಸಂಚಲನ ಸೃಷ್ಟಿಸಿದೆ. ಈ ಪ್ರಾಯೋಗಿಕ ಔಷಧಿಯಿಂದ ಯಾವುದೇ ರೋಗಿ ಕೂಡ ಹೆಚ್ಚು ಅಡ್ಡ ಪರಿಣಾಮ ಎದುರಿಸಿಲ್ಲ ಎಂದು ತಜ್ಞರು ಹೇಳಿದ್ದಾರೆ.
    ಕ್ಯಾನ್ಸರ್ ಮುಕ್ತರಾಗಿದ್ದೇವೆ ಎಂದು ತಿಳಿಯುತ್ತಲೇ ಎಲ್ಲರೂ ಆನಂದಬಾಷ್ಪ ಸುರಿಸಿದ್ದಾರೆ. ಈ ಟ್ರಯಲ್ ಭಾಗವಾಗಿ ಎಲ್ಲರೂ ಪ್ರತಿ ಮೂರು ವಾರಗಳಿಗೊಮ್ಮೆ ಡೋಸ್ಟರ್‍ಲಿಮಾಬ್ ಔಷಧಿಯನ್ನು ಆರು ತಿಂಗಳ ಅವಧಿಗೆ ತೆಗೆದುಕೊಂಡಿದ್ದರು. ಎಲ್ಲರೂ ಒಂದೇ ಹಂತದ ಕ್ಯಾನ್ಸರ್ ಹೊಂದಿದ್ದರು ಹಾಗೂ ಇತರ ಅಂಗಗಳಿಗೆ ಕ್ಯಾನ್ಸರ್ ಹರಡಿರಲಿಲ್ಲ.
    ಈ ಕ್ಲಿನಿಕಲ್ ಟ್ರಯಲ್ ಆಶಾಭಾವನೆ ಮೂಡಿಸಿದೆಯಾದರೂ ದೊಡ್ಡ ಮಟ್ಟದಲ್ಲಿ ಇಂತಹ ಪ್ರಯೋಗ ನಡೆದರೆ ಅದರ ಸಫಲತೆಯನ್ನು ಅಂದಾಜಿಸಬಹುದು ಎಂದು ಕ್ಯಾನ್ಸರ್ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

    Verbattle
    Verbattle
    Verbattle
    medical
    Share. Facebook Twitter Pinterest LinkedIn Tumblr Email WhatsApp
    Previous Articleಫಿಲ್ಮ್‌ಫೇರ್ ಮ್ಯಾಗಜೀನ್‌ನ ಮುಖಪುಟವನ್ನು ಅಲಂಕರಿಸಿದ ರಶ್ಮಿಕಾ ಮಂದಣ್ಣ
    Next Article ಪಾಕ್‌ನಲ್ಲಿ ವಿದ್ಯುತ್ ಬಿಕ್ಕಟ್ಟು: ಮದುವೆಗೆ ನಿರ್ಬಂಧ, ವಾರದಲ್ಲಿ ಐದೇ ದಿನ‌ ಕೆಲಸ
    vartha chakra
    • Website

    Related Posts

    ಭೈರತಿ ಬಸವರಾಜ್ ಬಂಧನಕ್ಕೆ ಬಲೆ

    February 12, 2026

    ಹಿರಿಯ ಪತ್ರಕರ್ತ ಪಿ. ರಾಮಯ್ಯ ನಿಧನ: ಮಾಧ್ಯಮ ಲೋಕಕ್ಕೆ ತುಂಬಲಾರದ ನಷ್ಟ

    February 11, 2026

    ಸಚಿವ ಬೈರತಿ ಸುರೇಶ್ ಕಚೇರಿಯಲ್ಲಿ ಕಳ್ಳತನ.

    February 10, 2026

    Comments are closed.

    Verbattle
    Categories
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಭೈರತಿ ಬಸವರಾಜ್ ಬಂಧನಕ್ಕೆ ಬಲೆ

    ಕೇವಲ ಗಾಳಿ ಕುಡಿಯಲು ದೆಹಲಿಗೆ ಬಂದಿಲ್ಲ: ಹೈಕಮಾಂಡ್ ಭೇಟಿ ಬಳಿಕ ಡಿಕೆಶಿ ಗರಂ!

    ನುಡಿದಂತೆ ನಡೆದ 1000 ದಿನ: ಕನ್ನಡಿಗರ ‘ಕೈ’ಹಿಡಿದ ಕಾಂಗ್ರೆಸ್ ಸರ್ಕಾರ!

    ಡೆಡ್ಲಿ ಡೀಲ್: ಅಮೆರಿಕಾದ ಮುಂದೆ ಮಂಡಿ ಊರಲಿದೆಯೇ ಭಾರತ..?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • casino cz_uuEl on Rohit – Virat ಬಗ್ಗೆ Chetan Sharma ಹೇಳಿದ್ದೇನು?
    • 1win_quSi on ತಿಮರೋಡಿ ಗೆ ಖೆಡ್ಡಾ
    • Glennhof on ಪ್ರಹ್ಲಾದ್ ಜೋಷಿ ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಸವಾಲು
    Latest Kannada News

    ಭೈರತಿ ಬಸವರಾಜ್ ಬಂಧನಕ್ಕೆ ಬಲೆ

    February 12, 2026

    ಕೇವಲ ಗಾಳಿ ಕುಡಿಯಲು ದೆಹಲಿಗೆ ಬಂದಿಲ್ಲ: ಹೈಕಮಾಂಡ್ ಭೇಟಿ ಬಳಿಕ ಡಿಕೆಶಿ ಗರಂ!

    February 12, 2026

    ನುಡಿದಂತೆ ನಡೆದ 1000 ದಿನ: ಕನ್ನಡಿಗರ ‘ಕೈ’ಹಿಡಿದ ಕಾಂಗ್ರೆಸ್ ಸರ್ಕಾರ!

    February 11, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.