ಒಡಿಶಾದಲ್ಲಿ ಸಂಭವಿಸಿದ ರೈಲು ದುರಂತಕ್ಕೆ ನಿಜವಾದ ಕಾರಣವೇನು ಎಂದು ಇನ್ನೂ ತಿಳಿದುಬಂದಿಲ್ಲ. ರೈಲುಗಳು ಡಿಕ್ಕಿಯಾಗುವುದನ್ನು ತಪ್ಪಿಸಲೆಂದೇ ಇರುವ ಕವಚ್ ತಂತ್ರಜ್ಞಾನ ಈ ಮಾರ್ಗದಲ್ಲಿ ಲಭ್ಯವಿರಲಿಲ್ಲ ಎಂದು ವರದಿಯಾಗಿದೆ. ಯಾವುದಾದರು ಒಂದು ರೈಲು ಸಿಗ್ನಲ್ ಜಂಪ್ ಮಾಡಿದರೆ ಈ ಕವಚ್ ತಂತ್ರಜ್ಞಾನ ಆ ಮಾರ್ಗದ ಎಲ್ಲರಿಗೂ ಸೂಚನೆ ನೀಡುತ್ತದೆ ಮತ್ತು ಆ ರೈಲಿನ ನಿಯಂತ್ರಣ ತನ್ನದಾಗಿಸಿಕೊಂಡು ಆ ರೈಲಿನ ಚಲನೆಯನ್ನು ಕೂಡ ಮಾರ್ಪಾಡುಮಾಡಿಬಿಡುತ್ತದೆ. ಸಿಗ್ನಲ್ ಜಂಪ್ ಮುಂತಾದ ಕಾರಣಗಳಿಂದಲೇ ರೈಲು ಅವಘಢಗಳಾಗುವುದರಿಂದ ಈ ತಂತ್ರಜ್ಞಾನ ಅನೇಕ ಸಂದರ್ಭಗಳಲ್ಲಿ ಬಹಳ ಉಪಯೋಗಕ್ಕೆ ಬಂದಿದೆ. ಕೊರಮಂಡಲ್ ಎಕ್ಸ್ಪ್ರೆಸ್ ರೈಲು ನಿಂತಿದ್ದ ಗೂಡ್ಸ್ ಗಾಡಿಗೆ ಹಿಂದಿನಿಂದ ಗುದ್ದಿದ ಪರಿಣಾಮ ಈ ಎಕ್ಸ್ಪ್ರೆಸ್ ರೈಲಿನ ಬೋಗಿಗಳು ಚೆಲ್ಲಾಪಿಲ್ಲಿಯಾಗಿ ಕೆಲವು ಬೋಗಿಗಳು ಇನ್ನೊಂದು ಟ್ರ್ಯಾಕ್ ಮೇಲೆ ಬಿದ್ದವು. ಆ ಟ್ರ್ಯಾಕ್ ನಲ್ಲಿ ಬರುತ್ತಿದ್ದ ಬೆಂಗಳೂರು ಹೌರಾ ಎಕ್ಸ್ಪ್ರೆಸ್ ಗಾಡಿ ಆ ಬಿದ್ದಿದ್ದ ಬೋಗಿಗಳಿಗೆ ಡಿಕ್ಕಿ ಹೊಡೆದು ಈ ಭೀಕರ ದುರಂತ ಸಂಭವಿಸಿದೆ. ಆದರೆ ಯಾವ ಕಾರಣದಿಂದ ಕೋರಮಂಡಲ್ ಎಕ್ಸ್ಪ್ರೆಸ್ ರೈಲು ನಿಂತಿದ್ದ ಗೂಡ್ಸ್ ಗಾಡಿಗೆ ಗುದ್ದಿದೆ ಮತ್ತು ಆ ಘಟನೆಯನ್ನು ಹೇಗೆ ತಡೆಯಬಹುದಿತ್ತು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಈಗ ಎಲ್ಲಾ ಮೃತ ದೇಹಗಳನ್ನು ಹೊರತೆಗೆದು ರೈಲು ಪಟ್ಟಿಗಳನ್ನು ಸರಿಪಡಿಸುವ ಕಾರ್ಯ ನಡೆಯುತ್ತಿರುವುದರಿಂದ ಈ ಕೆಲಸ ಮುಗಿದ ಮೇಲೆ ವಿಸ್ತೃತವಾದ ತನಿಖೆ ನಡೆದು ಸರಿಯಾದ ಮಾಹಿತಿ ಹೊರಬರಲಿದೆ ಎಂದು ಹೇಳಾಲಾಗಿದೆ.
Previous Articleಹತ್ಯೆ ಪ್ರಕರಣ ಬೇಧಿಸಿದ ಕಿಂಗ್ ಕೊಹ್ಲಿ
Next Article ರಾಜ್ಯ ಸರ್ಕಾರದ ವಿರುದ್ಧ BJP ಬೀದಿ ಹೋರಾಟ
5 Comments
average cost of clomid cost clomid prices where to get generic clomid price cost of cheap clomid online buy cheap clomiphene where to get generic clomid price clomid cost uk
The thoroughness in this section is noteworthy.
I couldn’t weather commenting. Profoundly written!
buy inderal 20mg online – purchase methotrexate online buy methotrexate generic
zithromax 500mg sale – order generic tindamax 500mg brand bystolic