ತುಮಕೂರು : ಹೆಂಡತಿ ಮಕ್ಕಳೊಂದಿಗೆ ಕೆರೆಗೆ ಈಜು ಕಲಿಯಲು ಹೋದ ವ್ಯಕ್ತಿ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಸಾರಿಗೆಹಳ್ಳಿ ಕೆರೆಯಲ್ಲಿ ನಡೆದಿದೆ.
ತುರುವೇಕೆರೆ ತಾಲ್ಲೂಕಿನ .ಎಂ.ಬೇವಿನಹಳ್ಳಿ ನಿವಾಸಿ ಯೋಗಾನಂದ (45) ಮೃತ ದುದೈವಿ. ಎಂದಿನಂತೆ ಈಜು ಕಲಿಯಲು ಕುಟುಂಬ ಸಹಿತ ಕೆರೆ ಬಳಿ ಬಂದಿದ್ದರು. ಟೂಬ್ ಸಮೇತ ನೀರಿಗೆ ಇಳಿದಾಗ ಟ್ಯೂಬ್ ಕಳಚಿ ನೀರಿನಲ್ಲಿ ಮುಳುಗಿ ಯೋಗಾನಂದ್ (45) ಮೃತಪಟ್ಟಿದ್ದಾರೆ.
ಈ ಕೆರೆಗೆ ಈಜಲು ಬರುವ ಎಲ್ಲಾ ವಯೋಮಾನದ ಹೆಂಗಸರು, ಮಕ್ಕಳು ಕಲಿಯಲು ಟ್ಯೂಬ್ ಗಳ ಸಮೇತ ಮುಂಜಾನೆಯೆ ಇಲ್ಲಿ ಬರ್ತಾರೆ. ಈಜು ಕಲಿಯಲು ಬರುವ ಜನರಿಗೆ ಸ್ಥಳೀಯ ಈಜು ಪಟು ದಂಡಿನಶಿವರ ತಿಮ್ಮೇಗೌಡ ಮಾರ್ಗದರ್ಶನದಲ್ಲಿ ಈಜು ಕಲಿಯಲು ಬರುತ್ತಾರೆ.
ಆದರೆ ಎರಡು ದಿನಗಳಿಂದ ದಂಡಿನಶಿವರ ತಿಮ್ಮೇಗೌಡ ಅನಾರೋಗ್ಯ ನಿಮಿತ್ತ ಬಂದಿಲ್ಲ. ಅಲ್ಲದೆ ಯಾರೂ ಸ್ವಯಂ ಈಜು ಕಲಿಯಲು ಬಾರದಂತೆ ಎಚ್ಚರಿಸಿದ್ದಾರೆ. ಆದರೂ ತರಬೇತುದಾರರಿಲ್ಲದೆ ಈಜಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ.
ಸ್ಥಳಕ್ಕೆ ದಂಡಿನಶಿವರ ಪೋಲೀಸ್ ಹಾಗು ಅಗ್ನಿಶಾಮಕ ಸಿಬ್ಬಂದಿ ಬಂದು ಮೃತ ದೇಹವನ್ನು ಹೊರತೆಗೆದಿದ್ದಾರೆ.