Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಇದು ತುಮಕೂರು ಜಿಲ್ಲಾ ಕಾರಾಗೃಹದ ಕರ್ಮಕಾಂಡ!!
    ಸುದ್ದಿ

    ಇದು ತುಮಕೂರು ಜಿಲ್ಲಾ ಕಾರಾಗೃಹದ ಕರ್ಮಕಾಂಡ!!

    vartha chakraBy vartha chakraJune 10, 2022Updated:June 10, 2022No Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle


    ತುಮಕೂರು ಜಿಲ್ಲಾ ಕಾರಾಗೃಹ. ತುಮಕೂರಿನಿಂದ ಏಳೆಂಟು ಕಿಲೋಮೀಟರ್ ದೂರ ಹೋದ್ರೆ, ಸಿಗೋದು ಅಣ್ಣೇನಹಳ್ಳಿ. ಇದೇ ಅಣ್ಣೇನಹಳ್ಳಿ ಊರ ಹೊರಗೆ ಸುಮಾರು 20 ಎಕರೆ ವಿಸ್ತೀರ್ಣದಲ್ಲಿ ಚಾಚಿಕೊಂಡಿರೋದು ತುಮಕೂರು ಜಿಲ್ಲಾ ಕಾರಾಗೃಹ. 15 ಅಡಿ ಎತ್ತರದ ಗೋಡೆ ಒಳಗಿನ ಸ್ಥಿತಿ ಹೇಗಿದೆಯೋ ಏನೋ? ಆದ್ರೆ ಜೈಲು ಹೊರಗಿನ ಸ್ಥಿತಿ ಮಾತ್ರ ಶೋಚನೀಯ.
    ಜೈಲಿನ ಮೊದಲ ಆರು ಅಡಿ ಗೋಡೆ ಒಳಗೆ ಎಂಟ್ರಿ ಹಾಕಿದ್ರೆ, ಅಲ್ಲಿ ನಮಗೆ ಜೈಲಿನ ಮೇನ್ ಗೇಟ್ ಕಾಣಿಸುತ್ತದೆ. ಆರೋಪಿಗಳನ್ನ ಕರೆದುಕೊಂಡು ಬರೋದು, ಒಳಗೆ ಕರೆದುಕೊಂಡು ಹೋಗೋದು ಎಲ್ಲವೂ ಇದೇ ದ್ವಾರದಿಂದಲೇ. ಇನ್ನು ಒಳಗಿರುವ ಬಂಧಿತ ಆರೋಪಿಗಳನ್ನ ನೋಡೋಕೆ ಅಂತ ದೂರದೂರುಗಳಿಂದ ಬರೋರು ಕೂಡ ಕಾಂಪೌಂಡಿನೊಳಗೆ ಕೂತು ಕಾಯಬೇಕು. ತಮ್ಮ ಸರದಿ ಬರೋವರೆಗೂ ಕುಳಿತುಕೊಳ್ಳೋಣ ಅಂದ್ರೆ ಇರೋದು ಎರಡು ಕಲ್ಲು ಬೆಂಚು. ಜೈಲಿನ ಒಳಗಿರೋ ಖೈದಿಗಳ ಸಂಖ್ಯೆ ಭರ್ತಿ 432.
    ಕನಿಷ್ಟ ದಿನವೊಂದಕ್ಕೆ ನೂರು ಜನ ಆರೋಪಿಗಳನ್ನ ನೋಡೋಕೆ ಮೂನ್ನೂರು ಮಂದಿ ಜೈಲಿಗೆ ವಿಸಿಟ್ ಹಾಕ್ತಾರೆ. ಈ ರೀತಿ ಬರೋರಿಗೆ ಕುಳಿತುಕೊಳ್ಳಲು ಖುರ್ಚಿ ಇರಲಿ, ಕುಡಿಯೋಕೆ ನೀರು ಕೂಡ ಗತಿ ಇಲ್ಲ. ಆವರಣದಲ್ಲಿ ಒಂದು ನೀರಿನ ಟ್ಯಾಂಕ್ ಇದೆ, ಅದರಲ್ಲಿರುವ ನಲ್ಲಿಗಳು ಬಂದ್ ಆಗಿವೆ. ಇನ್ನು ಟ್ಯಾಂಕಿನೊಳಗೆ ನೀರು ಇದೆಯೋ ಇಲ್ವೋ ಗೊತ್ತಿಲ್ಲ. ತೊಳೆದು ವರ್ಷ ಕಳೆದಿರೋದಂತು ಸತ್ಯ. ಇನ್ನು ಶೌಚಾಲಯದ ಕಥೆಯನ್ನಂತೂ ಹೇಳುವಂತೆಯೂ ಇಲ್ಲ ಕಣ್ಣಾರೆ ನೋಡುವಂತೆಯೂ ಇಲ್ಲ. ಅಷ್ಟರ ಮಟ್ಟಿಗೆ ಗಬ್ಬೆದ್ದು ನಾರುತ್ತಿದೆ ಜೈಲಿನ ಆವರಣದಲ್ಲಿರುವ ಸಾರ್ವಜನಿಕ ಶೌಚಾಲಯ.
    ಈ ಫೋಟೋಗಳನ್ನ ನೀಟಾಗಿ ನೋಡಿ. ಇದು ಜೈಲಿಗೆ ಎಂಟ್ರಿ ಹಾಕೋಕೆ ಬರುವ ಸಾರ್ವಜನಿಕರು ಬಳಸುವ ಶೌಚಾಲಯ. ನಾಯಿಗಳು ಹಂದಿಗಳು ವಾಸಿಸುವ ತಾಣದಂತಿದೆ. ಇದರೊಳಗೆ ಕಾಲಿಟ್ರೆ ಗಬ್ಬು ವಾಸನೆ, ಜೊತೆಗೆ ಹಳೆ ಕಬ್ಬಿಣ, ಪ್ಲಾಸ್ಟಿಕ್, ಪೇಪರ್ಗಳದ್ದೇ ಸಾಮ್ರಾಜ್ಯ. ಜೈಲಿನಲ್ಲಿರೋರನ್ನ ನೋಡೋಕೆ ಬರುವ ಪುರುಷರಾದ್ರೆ ಎಲ್ಲೋ ಮೈದಾನದಲ್ಲೋ ಪೊದೆಯ ಮರೆಯಲ್ಲೋ ಮೂತ್ರ ವಿಸರ್ಜನೆ ಮಾಡಿ ಬಿಡ್ತಾರೆ. ಆದ್ರೆ ಗಂಡನನ್ನ, ಅಪ್ಪನನ್ನ, ಅಣ್ಣನನ್ನ, ತಮ್ಮನನ್ನ, ಮಗನನ್ನ ನೋಡೋಕೆ ಬರೋ ಹೆಣ್ಣು ಮಕ್ಕಳ ಪಾಡೇನು?
    ಇನ್ನು ಈ ಬಗ್ಗೆ ಜೈಲು ಅಧೀಕ್ಷಕಿಯಾಗಿರುವ ಶಾಂತಮ್ಮರನ್ನ ವಿಚಾರಿಸಿದ್ರೆ, ನಮ್ಮ ಜೈಲಿನಲ್ಲಿ ಎಲ್ಲವೂ ಕ್ಲೀನ್ ಕ್ಲೀನ್ ಅಂತಾರೆ. ಸ್ವತಃ ತಾನೊಬ್ಬಳು ಹೆಣ್ಣು ಮಗಳಾಗಿ ಮತ್ತೋರ್ವ ಹೆಣ್ಣು ಮಗಳ ಕಷ್ಟದ ಅರಿವಿಲ್ಲ ಅಂದ್ರೆ, ಏನ್ ಹೇಳೋದು ಹೇಳಿ. ಇನ್ನು ಅಲ್ಲಿ ಖೈದಿಗಳನ್ನ ನೋಡೋಕೆ ಬರೋರ ಬಳಿ ಸಿಬ್ಬಂದಿಗಳು ಲಂಚ ಪೀಕ್ತಾರೆ ಎನ್ನುವ ಆರೋಪ ಕೂಡ ಕೇಳಿ ಬಂದಿದೆ. ನಾಲ್ಕು ಸೇಬು ಹಣ್ಣುಗಳನ್ನೋ ಇಲ್ಲವೇ ನಾಲ್ಕು ಬಿರಿಯಾನಿಯನ್ನೋ ಕೈದಿಗೆ ಕೊಡಿ ಅಂತ ಕಳಿಸಿಕೊಟ್ರೆ, ಒಳಗೆ ತಲುಪೋದು ಒಂದೋ ಎರಡೋ ಅಷ್ಟೆ ಅಂತಾರೆ ಹೆಸರು ಹೇಳಲು ಇಚ್ಚಿಸದ ಸಾರ್ವಜನಿಕ.
    ಒಟ್ನಲ್ಲಿ ಇದು ತುಮಕೂರು ಜಿಲ್ಲಾ ಕಾರಾಗೃಹದ ಕರ್ಮಕಾಂಡ. ಬಗೆದಷ್ಟೂ ಭಯಾನಕವಾಗಿದೆ. ಖೈದಿಗಳಿಗಷ್ಟೆ ಅಲ್ಲ, ಅಲ್ಲಿ ನೋಡೋಕೆ ಬರುವವರಿಗೂ ಈ ಜೈಲು ಅಕ್ಷರಶಃ ನರಕವಾಗಿದೆ. ಇನ್ನಾದ್ರೂ ಸಂಬಧಪಟ್ಟವರು ಜೈಲಿನ ಅವ್ಯವಸ್ಥೆಯನ್ನ ಸರಿ ಪಡಿಸ್ತಾರಾ ಕಾದು ನೋಡಬೇಕಿದೆ.

    Verbattle
    Verbattle
    Verbattle
    ಅಪರಾಧ ಸುದ್ದಿ
    Share. Facebook Twitter Pinterest LinkedIn Tumblr Email WhatsApp
    Previous Article‘ಸಾಮ್ರಾಟ್ ಪೃಥ್ವಿರಾಜ್‌’ಗೆ ಪ್ರೇಕ್ಷಕರ ಕೊರತೆ: ಹಲವೆಡೆ ಚಿತ್ರಪ್ರದರ್ಶನ ರದ್ದು
    Next Article ಜಾತ್ಯತೀತ ತತ್ವ ಉಳಿಸಲು ಜೆಡಿಎಸ್ ನಮಗೆ ಬೆಂಬಲ ನೀಡಬೇಕು: ಡಿ.ಕೆ. ಶಿವಕುಮಾರ್ ಮನವಿ
    vartha chakra
    • Website

    Related Posts

    ಸತ್ತವಳು ಎದ್ದು ಬಂದಾಗ!

    February 15, 2026

    ಕಪ್ಪೆ ವಿಷದಿಂದ ಪ್ರತಿಪಕ್ಷ ನಾಯಕನ ಹತ್ಯೆ!

    February 15, 2026

    ಬೆಂಗಳೂರಿನಲ್ಲಿ ಬಡ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಜಾಗ ಮಂಜೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    February 14, 2026

    Comments are closed.

    Verbattle
    Categories
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಮಹಾಶಿವರಾತ್ರಿ ವಿಶೇಷ: ‘ಶಿವ’ ಎಂದರೆ ಶೂನ್ಯವೂ ಹೌದು, ಅನಂತವೂ ಹೌದು!

    ಸತ್ತವಳು ಎದ್ದು ಬಂದಾಗ!

    ಕಪ್ಪೆ ವಿಷದಿಂದ ಪ್ರತಿಪಕ್ಷ ನಾಯಕನ ಹತ್ಯೆ!

    ಬೆಂಗಳೂರಿನಲ್ಲಿ ಬಡ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಜಾಗ ಮಂಜೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • RichardJal on ಧರ್ಮಸ್ಥಳ ಪ್ರಕರಣಕ್ಕೆ ಹಠಾತ್ ತಿರುವು.
    • RobertberMa on ಧರ್ಮಸ್ಥಳ ಪ್ರಕರಣಕ್ಕೆ ಹಠಾತ್ ತಿರುವು.
    • jaluzi s elektroprivodom_dbpr on ಅವಿವಾಹಿತರಿಗೆ ಹೋಟೆಲ್ ರೂಂ ಇಲ್ಲ
    Latest Kannada News

    ಮಹಾಶಿವರಾತ್ರಿ ವಿಶೇಷ: ‘ಶಿವ’ ಎಂದರೆ ಶೂನ್ಯವೂ ಹೌದು, ಅನಂತವೂ ಹೌದು!

    February 15, 2026

    ಸತ್ತವಳು ಎದ್ದು ಬಂದಾಗ!

    February 15, 2026

    ಕಪ್ಪೆ ವಿಷದಿಂದ ಪ್ರತಿಪಕ್ಷ ನಾಯಕನ ಹತ್ಯೆ!

    February 15, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.