ಬೆಂಗಳೂರು,ಜ.4- ನಗರದ ಮಲ್ಲೇಶ್ವರಂನ ಬಿಜೆಪಿ ರಾಜ್ಯ ಕಚೇರಿಗೆ ಆಗಮಿಸಿದ್ದ ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಉಮೇಶ್ ಜಾಧವ್ (Umesh Jadhav) ಅವರು ಅರ್ಧ ಗಂಟೆಗಳ ಲಿಫ್ಟ್ ನಲ್ಲಿ ಸಿಲುಕಿಕೊಂಡಿದ್ದ ಘಟನೆ ನಡೆದಿದೆ.
ಲಿಫ್ಟ್ ಕೈಕೊಟ್ಟು ಅರ್ಧ ಗಂಟೆ ಸಂಸದ ಉಮೇಶ್ ಜಾಧವ್ ಹಾಗೂ ಮೂವರು ಸಿಲುಕಿ ಪರದಾಡುವಂತಾಯಿತು.
ಮಬಿಜೆಪಿ ಕಚೇರಿಗೆ ಆಗಮಿಸಿದ್ದ ಸಂಸದ ಉಮೇಶ್ ಜಾಧವ್ ಹಾಗೂ ಇತರ ಮೂವರು ಲಿಫ್ಟ್ ನಲ್ಲಿ ಸಿಲುಕೊಂಡಿದ್ದರು.
ಲಿಫ್ಟ್ ನಲ್ಲಿ ಹೋಗುತ್ತಿದ್ದ ವೇಳೆ ಕರೆಂಟ್ ಹೋಗಿದ್ದು ಲಿಫ್ಟ್ ನಿಂತು ಹೋಗಿತ್ತು. ಇನ್ನು ಕರೆಂಟ್ ಬಂದ ಮೇಲೂ ಲಿಫ್ಟ್ ವರ್ಕ್ ಆಗಿಲ್ಲ. ಕೊನೆಗೆ ಅರ್ಧ ಗಂಟೆಯ ಬಳಿಕ ಕಚೇರಿಯ ನೆಲಮಹಡಿಯಲ್ಲಿ ಲಿಫ್ಟ್ ಅರ್ಧದಲ್ಲಿ ತೆರೆದುಕೊಂಡಿದೆ. ಬಳಿಕ ಲಿಫ್ಟ್ನಿಂದ ಜಾದವ್ ಹೊರ ಬಂದಿದ್ದಾರೆ. ಸದ್ಯ ಲಿಫ್ಟ್ ಟೆಕ್ನಿಷಿಯನ್ ಕರೆಸಿ ಕೆಟ್ಟು ನಿಂತ ಲಿಫ್ಟ್ ಸರಿಪಡಿಸಲಾಗುತ್ತಿದೆ.

