Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » BL ಸಂತೋಷ್ ಅಂದರೆ ಯಾರು ಅದು?
    Bengaluru

    BL ಸಂತೋಷ್ ಅಂದರೆ ಯಾರು ಅದು?

    vartha chakraBy vartha chakraJune 5, 2023Updated:June 5, 20235 Comments3 Mins Read
    Facebook Twitter WhatsApp Pinterest LinkedIn Tumblr Email
    Pic courtesy: Deccan Herald
    Share
    Facebook Twitter LinkedIn Pinterest Email WhatsApp

    ಬೆಂಗಳೂರು – ರಾಜ್ಯ ವಿಧಾನಸಭೆ Election ಸೋಲಿನ ಹೊಡೆತದಿಂದ ತತ್ತರಿಸಿರುವ ಬಿಜೆಪಿಯಲ್ಲಿ ಇದೀಗ ಭಿನ್ನಮತದ ಧಗೆ ಆವರಿಸಿದೆ.
    ಅದರಲ್ಲೂ ಪಕ್ಷದ ಸಂಘಟನಾತ್ಮಕ ವಿಷಯದಲ್ಲಿ ಸದಾ ಮುಂಚೂಣಿಯಲ್ಲಿದ್ದ ಹಿರಿಯ ನಾಯಕ ಹಾಗೂ ಸಂಘ ಪರಿವಾರದ ಮುಖಂಡ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ವಿರುದ್ಧ ರಾಜ್ಯ ನಾಯಕರು ತಿರುಗಿ ಬಿದ್ದಿದ್ದಾರೆ.
    ಕೆಲವು ದಿನಗಳ ಹಿಂದೆ ಸಂತೋಷ್ ಅವರ ಹೆಸರು ಹೇಳಿದರೆ ಸಾಕು ಬಿಜೆಪಿ ನಾಯಕರು ಬೆಚ್ಚುತ್ತಿದ್ದರು ಅವರ ಒಂದು ಫೋನ್ ಕರೆಗೆ ತಕ್ಷಣವೇ ಎಲ್ಲಾ ಕೆಲಸ ಆಗುತ್ತಿತ್ತು ಸಂತೋಷ್ ಮಾತಂದರೆ ವೇದ ವಾಕ್ಯ ಎಂದು ಪರಿಗಣಿಸಲಾಗಿತ್ತು.
    ಸರ್ಕಾರದ ಮಟ್ಟದ ಕೆಲಸವಿರಲಿ, ಚುನಾವಣೆಯ ವಿಷಯವಿರಲಿ, ಪಕ್ಷ ಸಂಘಟನೆಯ ಮಾತೆ ಇರಲಿ, ಯಾವುದೇ ವಿಷಯದಲ್ಲಿ ಬಿ ಎಲ್ ಸಂತೋಷ್ ಹೇಳಿದರೆ ಸಾಕು ‘ಜೀ’ ಎಂದು ಅದನ್ನು ಶಿರಸಾವಹಿಸಿ ಮಾಡಲಾಗುತ್ತಿತ್ತು. ಚುನಾವಣೆ ಕಾರ್ಯತಂತ್ರ, ಸರ್ಕಾರದ ಆಡಳಿತ ಯಂತ್ರ, ಅಭ್ಯರ್ಥಿಗಳ ಆಯ್ಕೆಯ ರಣತಂತ್ರ ಎಲ್ಲ ವಿಷಯಗಳಲ್ಲೂ ಈ’ ಜೀ’ ಮಾತೆ ಅತ್ಯಂತ ಪ್ರಮುಖವಾಗಿತ್ತು.
    ಆದರೆ ಇದೀಗ ಈ ‘ಜಿ’ ಎಂದರೆ ಯಾರು ಎಂದು ರಾಜ್ಯ ಬಿಜೆಪಿ ನಾಯಕರು ಪ್ರಶ್ನಿಸುತ್ತಿದ್ದಾರೆ. ಸಂತೋಷ್ ಅವರು ಕರೆ ಮಾಡಿದರು ಯಾರು ಕೇಳುತ್ತಿಲ್ಲ ಅವರ ದೂರವಾಣಿ ಕರೆಗೆ ಪ್ರತಿಕ್ರಿಯೆ ನೀಡುತ್ತಿಲ್ಲ ಪಕ್ಷದ ವಿಷಯದಲ್ಲಿ ಅವರು ನೀಡುವ ಸೂಚನೆ ಪಾಲಿಸುತ್ತಿಲ್ಲ ಅವರ ಪಕ್ಷ ಅವರು ಏನು ಬೇಕಾದರೂ ಮಾಡಿಕೊಳ್ಳಲಿ ಎನ್ನುತ್ತಿದ್ದಾರೆ ರಾಜ್ಯ ಬಿಜೆಪಿ ನಾಯಕರು.
    “ವಿಧಾನಸಭೆ ಚುನಾವಣೆ ಎನ್ನುವ ಕಹಿ ಅನುಭವ ಮುಗಿದಿದೆ ರಾಜಕೀಯ ಪಕ್ಷಗಳಿಗೆ ಸೋಲು- ಗೆಲುವು ಎನ್ನುವುದು ಒಂದು ಭಾಗ ಗೆಲುವಿನಿಂದ ಬೀಗಬಾರದು ಸೋತಿದ್ದೇವೆ ಎಂದು ಧೃತಿಗೆಡಬಾರದು ಮುಂದಿನ ಹೋರಾಟಕ್ಕೆ ಅಣಿಯಾಗಬೇಕು” ಇದು ಸಂತೋಷ್ ಅವರ ಮಾತು ಆದರೆ ಈ ಮಾತು ರಾಜ್ಯದ ಬಿಜೆಪಿ ನಾಯಕರುಗಳಿಗೆ ರುಚಿಸುತ್ತಿಲ್ಲ.
    ವಿಧಾನಸಭೆ ಚುನಾವಣೆ ಮುಗಿದಿದೆ ನಮ್ಮ ಮುಂದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಲೋಕಸಭೆ ಸೇರಿದಂತೆ ಹಲವು ಚುನಾವಣೆಗಳು ಇವೆ ಈ ಚುನಾವಣೆಗಳು ನಮಗೆ ಸವಾಲು ಅವುಗಳಿಗೆ ಈಗಿಂದಲೇ ತಯಾರಿ ಆರಂಭಿಸಬೇಕು ಎಂಬ ಸಂತೋಷ್ ಅವರ ಕರೆ ಯಾವ ನಾಯಕರಿಗೂ ಕೇಳುತ್ತಿಲ್ಲ.
    ಈ ಹಿಂದೆ ಸಂತೋಷ ಅವರ ಒಂದು ಕರೆಗೆ ಈ ಎಲ್ಲ ಬಿಜೆಪಿ ನಾಯಕರು ಓಡಿ ಬರುತ್ತಿದ್ದರು ಆದರೆ ಈಗ ಅವರಿಗೆ ಕ್ಯಾರೆ ಅನ್ನುತ್ತಿಲ್ಲ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳ ಚುನಾವಣೆ ಕಾರ್ಯತಂತ್ರ ಕುರಿತು ಚರ್ಚಿಸಲು ಸಂತೋಷ್ ಅವರು ಬೆಂಗಳೂರಿನಲ್ಲಿ ನಗರದ ಬಿಜೆಪಿ ಶಾಸಕರು ಮತ್ತು ಪ್ರಮುಖ ನಾಯಕರ ಸಭೆ ಕರೆದಿದ್ದಾರೆ.
    ಬಿಜೆಪಿ ರಾಜ್ಯ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಈ ಸಭೆಗೆ ಸಮಯಕ್ಕೆ ಸರಿಯಾಗಿ ಸಂತೋಷ್ ಅವರು ಕಚೇರಿಯ ಸಿಬ್ಬಂದಿ ಜೊತೆಗೆ ಹಾಜರಾಗಿ ಕುಳಿತಿದ್ದಾರೆ ಆದರೆ ಯಾವೊಬ್ಬ ನಾಯಕರು ಈ ಸಭೆಗೆ ಬರಲಿಲ್ಲ ಅದು ಹೋಗಲಿ ತಾವು ಬರುವುದಿಲ್ಲ ಎಂದು ಕೂಡ ಹೇಳಲಿಲ್ಲ ಪಕ್ಷದ ರಾಜ್ಯ ಕಚೇರಿಯಿಂದ ಈ ನಾಯಕರಿಗೆ ಕರೆ ಮಾಡಿದರೆ ಯಾವ ಸಭೆ ಯಾವ ಸಂತೋಷ್ ಎಂದು ಪ್ರಶ್ನಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
    ಸಭೆಯ ಕುರಿತು ಮಾಹಿತಿ ನೀಡುವಲ್ಲಿ ಏನೋ ಗೊಂದಲ ಉಂಟಾಗಿರಬಹುದು ಎಂದು ಭಾವಿಸಿದ ಸಂತೋಷ್ ಒಂದು ಸಭೆಯನ್ನು ರದ್ದುಗೊಳಿಸಿ ಎರಡು ದಿನ ಬಿಟ್ಟು ಮತ್ತೊಂದು ಸಭೆಯನ್ನು ಕರೆದಿದ್ದಾರೆ ಈ ಸಭೆಗೆ ತಪ್ಪದೆ ಹಾಜರಾಗುವಂತೆ ಪಕ್ಷದ ಕಚೇರಿಯಿಂದ ಅಧಿಕೃತ ಜ್ಞಾಪನಾ ಪತ್ರ ರವಾನಿಸಿದ್ದಾರೆ ಅಷ್ಟೇ ಅಲ್ಲ ಕಚೇರಿ ಸಿಬ್ಬಂದಿ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದಾರೆ ಇದಕ್ಕೆ ಯಾರು ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಾಗೆಯೇ ಎರಡನೇ ಸಭೆಗೂ ಯಾರೊಬ್ಬರೂ ಹಾಜರಾಗಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.
    ಈ ಕುರಿತಂತೆ, ಬೆಂಗಳೂರಿನ ಬಿಜೆಪಿ ನಾಯಕರು ತಮ್ಮ ತಮ್ಮಲ್ಲೇ ಮಾತನಾಡಿಕೊಂಡಿದ್ದು ಪಕ್ಷದ ಈ ಎಲ್ಲ ವಿದ್ಯಮಾನಗಳಿಗೆ ಗೊಂದಲಗಳಿಗೆ ಮತ್ತು ದಯನೀಯ ಸೋಲಿಗೆ ಸಂತೋಷ್ ಅವರ ಅತಿಯಾದ ಹಸ್ತಕ್ಷೇಪ ಹಿರಿಯ ನಾಯಕರ ಕಡೆಗಣನೆ ಪಕ್ಷದ ಮುಖಂಡರ ಅಭಿಪ್ರಾಯಗಳಿಗೆ ಅವಕಾಶವೇ ನೀಡದೆ ಏಕ ಪಕ್ಷಿಯವಾಗಿ ಕೈಗೊಂಡ ತೀರ್ಮಾನಗಳೇ ಪ್ರಮುಖ ಕಾರಣ. ಇದನ್ನು ಹೀಗೆ ಮುಂದುವರೆಯಲು ಬಿಟ್ಟರೆ ನಮಗೆ ಇನ್ನಷ್ಟು ಹಿನ್ನಡೆ ಆಗಲಿದೆ ಪಕ್ಷಕ್ಕೆ ಹೊಸ ರೂಪ ನೀಡುವವರೆಗೆ ಯಾವುದೇ ಸಭೆ ಗಳಿಗೆ ಹಾಜರಾಗಬಾರದು ಹಾಗೂ ಸಂತೋಷ್ ಅವರು ದೈನಂದಿನ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡುವುದು ನಿಲ್ಲುವವರೆಗೆ ನಾವು ಹೀಗೆ ಇರಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

    Election ರಾಜಕೀಯ
    Share. Facebook Twitter Pinterest LinkedIn Tumblr Email WhatsApp
    Previous Articleಗೌಡ‌ ಸಂಪ್ರದಾಯದಂತೆ ಅಭಿಷೇಕ್-ಅವೀವಾ ಮದುವೆ
    Next Article ನೈತಿಕ ಪೊಲೀಸ್ ಗಿರಿ ವಿರುದ್ಧ ಸಮರ ಸಾರಿದ ಖಾಕಿ ಪಡೆ
    vartha chakra
    • Website

    Related Posts

    HMT ಭೂಮಿ ಕಬಳಿಸಲು ಕುಮ್ಮಕ್ಕು ನೀಡಿದ ಅಧಿಕಾರಿಗಳು !

    May 30, 2025

    Honey trap ಪ್ರಕರಣ ಏನಾಯ್ತು ಗೊತ್ತಾ ?

    May 30, 2025

    ವಿಧಾನ ಪರಿಷತ್ ಸದಸ್ಯರಿಗೆ ಬಿಸಿ ಮುಟ್ಟಿಸಿದ ಹೈಕಮಾಂಡ್.

    May 29, 2025

    5 Comments

    1. skoraya narkologicheskaya pomosh_rpel on September 10, 2024 3:03 pm

      наркологическая скорая бесплатная наркологическая скорая бесплатная .

      Reply
    2. skoraya narkologicheskaya pomosh_heMl on September 13, 2024 2:16 am

      наркологическая скорая наркологическая скорая .

      Reply
    3. Vivod iz zapoya v Almati _pwPn on September 17, 2024 5:07 am

      Вывод из запоя Вывод из запоя .

      Reply
    4. Biznes idei_ufOl on September 18, 2024 1:08 pm

      малый бизнес примеры малый бизнес примеры .

      Reply
    5. instagram story viewer _nvKl on October 6, 2024 6:27 am

      stories viewer [url=anonstoriesview.com]stories viewer[/url] .

      Reply

    Leave A Reply Cancel Reply

    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಥಿಯೇಟರ್ ಸುಡುವ ಎಚ್ಚರಿಕೆ ಮಧ್ಯೆಯೂ ‘ಥಗ್ ಲೈಫ್’ ಪ್ರದರ್ಶನಕ್ಕೆ ಮುಂದಾದ ಕರ್ನಾಟಕದ ಚಿತ್ರಮಂದಿರಗಳು !

    HMT ಭೂಮಿ ಕಬಳಿಸಲು ಕುಮ್ಮಕ್ಕು ನೀಡಿದ ಅಧಿಕಾರಿಗಳು !

    Honey trap ಪ್ರಕರಣ ಏನಾಯ್ತು ಗೊತ್ತಾ ?

    ಜನಾರ್ದನ ರೆಡ್ಡಿ ಕೇಸ್ ವಿಚಾರಣೆಗೆ ಜಡ್ಜ್ ಯಾರೂ ರೆಡಿ ಇಲ್ಲ.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • https://SafeTherapyClinics.com on ಯಡಿಯೂರಪ್ಪ ಅವರನ್ನು ಅನುಕರಿಸುವ ವಿಜಯೇಂದ್ರ | Yediyurappa
    • StanleyNed on ಇನ್ನು ಮುಂದೆ ಜಾಲತಾಣ Koo ಇರುವುದಿಲ್ಲ.
    • vfunwlzko on ಶ್ರಮಜೀವಿ ಖಾದರ್ ಕೈಹಿಡಿಯಲಿರುವ ಮತದಾರ | UT Khader
    Latest Kannada News

    ಥಿಯೇಟರ್ ಸುಡುವ ಎಚ್ಚರಿಕೆ ಮಧ್ಯೆಯೂ ‘ಥಗ್ ಲೈಫ್’ ಪ್ರದರ್ಶನಕ್ಕೆ ಮುಂದಾದ ಕರ್ನಾಟಕದ ಚಿತ್ರಮಂದಿರಗಳು !

    May 31, 2025

    HMT ಭೂಮಿ ಕಬಳಿಸಲು ಕುಮ್ಮಕ್ಕು ನೀಡಿದ ಅಧಿಕಾರಿಗಳು !

    May 30, 2025

    Honey trap ಪ್ರಕರಣ ಏನಾಯ್ತು ಗೊತ್ತಾ ?

    May 30, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸಚಿವ ಖಂಡ್ರೆ ಮನೆ ಬಳಿಯೇ ಕಾರ್ ಗಾಜು ಒಡೆದು 2 ಲಕ್ಷ ಕಳವು!
    Subscribe