Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » Turkey ಭೂಕಂಪದ ಭೀಕರತೆಯ ಕಾರಣಗಳು
    ಅಂತಾರಾಷ್ಟ್ರೀಯ

    Turkey ಭೂಕಂಪದ ಭೀಕರತೆಯ ಕಾರಣಗಳು

    vartha chakraBy vartha chakraFebruary 9, 2023Updated:March 20, 20231 Comment2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಫೆಬ್ರವರಿ 6 ರ ಬೆಳಗಿನ ಜಾವ ಸುಮಾರು 4 ಗಂಟೆಯ ಹೊತ್ತಿಗೆ ಟರ್ಕಿ (Turkey) ದೇಶದ ಗಜಿಯಂಟೇಪ್ (Gaziantep) ಎಂಬ ನಗರದಲ್ಲಿ ಭಾರಿ ಭೂಕಂಪ ಸಂಭವಿಸಿತು. ಪ್ರಾಣ ಕಳೆದುಕೊಂಡವರೆಷ್ಟೋ, ಕಳೆದುಹೋದವರೆಷ್ಟೋ, ನೆಲೆ ಕಳೆದುಕೊಂಡವರೆಷ್ಟೋ, ಜೀವನವನ್ನೇ ಕಳೆದುಕೊಂಡವರೆಷ್ಟೋ? ಅಂಕಿ ಅಂಶಗಳು ದಿನೇ ದಿನೇ ಏರುತ್ತಲೇ ಇವೆ. ಎತ್ತ ನೋಡಿದರೂ ಕುಸಿದು ಬಿದ್ದ ಕಟ್ಟಡಗಳು, ಬಿರುಕು ಮೂಡಿದ ರಸ್ತೆಗಳು, ಧರೆಗುರುಳಿದ ವಿದ್ಯುತ್ ಕಂಬಗಳಂತಹ ಭೀಕರ ದೃಶ್ಯಗಳೇ ಕಾಣಿಸುತ್ತಿವೆ. ರಕ್ಷಣಾ ಕಾರ್ಯ ಭರಪೂರದಿಂದ ಸಾಗುತ್ತಿದೆ. ಅವಶೇಷಗಳ ಅಡಿ ಸಿಲುಕಿರುವ ಜನರನ್ನು ಹೊರತರಲಾಗುತ್ತಿದೆ. ಕೆಲವರು ಅಂತೂ ಇಂತೂ ಜೀವವನ್ನು ಕೈಯಲ್ಲಿ ಹಿಡಿದು ಹೊರಬರುತ್ತಿದ್ದರೆ, ಬಹುತೇಕರು ಶವವಾಗಿ ದೊರೆಯುತ್ತಿದ್ದಾರೆ. ಹಿಮ ಮತ್ತು ಮಳೆಯಿಂದ ಕೂಡಿದ ವಾತಾವರಣದಿಂದಾಗಿ ರಕ್ಷಣಾ ಕಾರ್ಯಕ್ಕೆ ಅಡಚಣೆ ಉಂಟಾಗಿದೆ.

    ಟರ್ಕಿಯಲ್ಲಿ ಭೂಕಂಪ ಆಗುತ್ತಿರುವುದು ಇದೇ ಮೊದಲಲ್ಲ. ಹಾಗೆ ನೋಡಿದರೆ, ಇಡೀ ವಿಶ್ವದಲ್ಲೇ ಅತಿ ಹೆಚ್ಚು ಭೂಕಂಪಕ್ಕೆ ಒಳಗಾಗುವ ದೇಶ ಟರ್ಕಿ. ಅದಕ್ಕೆ ಕಾರಣಗಳೂ ಇವೆ –

    ಅದರ ಭೌಗೋಳಿಕ ಪ್ರದೇಶವೇ ಅದಕ್ಕೆ ಶತ್ರು

    ಟರ್ಕಿ ಇರುವುದು ಅನಟೋಲಿಯನ್ ಟೆಕ್ಟೋನಿಕ್ ಪ್ಲೇಟ್ (Anatolian tectonic plate) ಮತ್ತದರ ದೋಷ ರೇಖೆ(Fault lines) ಗಳ ಮೇಲೆ. ಈ ಟೆಕ್ಟಾನಿಕ್ ಪ್ಲೇಟ್ ಗಳ ಪರಸ್ಪರ ಘರ್ಷಣೆಯಿಂದ ಬಿಡುಗಡೆಯಾಗುವ ಶಕ್ತಿಯಿಂದಲೇ ಭೂಕಂಪಗಳು ಸಂಭವಿಸುತ್ತವೆ. ಮತ್ತು ದೋಷ ರೇಖೆಗಳಲ್ಲಿಯೇ ಹೆಚ್ಚಿನ ಭೂಕಂಪಗಳಾಗುವವು. ಟರ್ಕಿ ದೇಶದ ಬಹುತೇಕ ಪ್ರದೇಶ ಅನಟೋಲಿಯನ್ ಪ್ಲೇಟ್ ಮೇಲೆಯೇ ಇರುವುದರಿಂದ ಅಲ್ಲಿ ಆಗಾಗ್ಗೆ ಭೂಕಂಪಗಳು ಆಗುತ್ತಲೇ ಇರುತ್ತವೆ.

    ತೀವ್ರ ಪ್ರಮಾಣಕ್ಕೆ ಕಾರಣವೇನು? ಯಾಕಿಷ್ಟು ಅಪಾರ ಹಾನಿಯಾಯಿತು?

    1. ಭೂಕಂಪದ ಕೇಂದ್ರ ಬಿಂದು ಭೂಮಿಯ ಮೇಲ್ಪದರದಿಂದ ಆಳದಲ್ಲಿದ್ದಷ್ಟು ಭೂಕಂಪದ ತೀವ್ರತೆ ಕಡಿಮೆ. ಆದರೆ ಮೊನ್ನೆ ನಡೆದ ಭೂಕಂಪದಲ್ಲಿ, ಭೂಕಂಪದ ಕೇಂದ್ರ ಬಿಂದು ಭೂಮಿಯ ಮೇಲ್ಪದರದಿಂದ ಕೇವಲ 18 ಕಿಮಿಗಳ ಆಳದಲ್ಲಿತ್ತು. ಹಾಗಾಗಿ, ತೀವ್ರ ಪರಿಣಾಮಗಳು ಕಾಣಿಸಿದವು.

    2. ಟರ್ಕಿಯ ಭೂಕಂಪ Strike – slip ಇಂದ ಸಂಭವಿಸಿದೆ ಎಂದು ತಜ್ಞರು ಹೇಳಿದ್ದಾರೆ. Strike – slip ಎಂದರೆ, ವಿರುದ್ಧ ದಿಕ್ಕಿನಲ್ಲಿ ಚಲಿಸುವ (ಒಂದು ಹಿಂದೆ, ಮತ್ತೊಂದು ಮುಂದೆ) ಎರಡು ಟೆಕ್ಟಾನಿಕ್ ಪ್ಲೇಟ್ ಗಳ ಘರ್ಷಣೆಯಿಂದ ಉಂಟಾಗುವ ಭೂಕಂಪಕ್ಕೆ Strike – slip ಎಂದು ಹೇಳಲಾಗುತ್ತದೆ. ಇಂತಹ ಘರ್ಷಣೆ ಗಳಲ್ಲಿ ಅಪಾರ ಪ್ರಮಾಣದ ಶಕ್ತಿ ಬಿಡುಗಡೆಯಾಗುವುದರಿಂದ ದೊಡ್ಡ ಪ್ರಮಾಣದ ಹಾನಿ ಆಗುತ್ತದೆ.

    3. ಕೆಲವೇ ಗಂಟೆಗಳ ಅಂತರದಲ್ಲಿ ಪದೇ ಪದೇ ಸಂಭವಿಸಿದ ಭೂಕಂಪಗಳೂ ಹೆಚ್ಚಿನ ಹಾನಿಗೆ ಕಾರಣವಾದವು.

    4. ವರದಿಯೊಂದರ ಪ್ರಕಾರ, ಭೂಕಂಪ ಸಂಭವಿಸಿದ ಪ್ರದೇಶದಲ್ಲಿ ಸುಮಾರು 2 ಮಿಲಿಯನ್ ಜನರು ವಾಸಿಸುತ್ತಿದ್ದರಂತೆ. ಅಲ್ಲದೆ ಅಲ್ಲಿಯ ಕಟ್ಟಡಗಳಲ್ಲಿ ಬಳಸಿದ ಸಿಮೆಂಟ್ ಇತ್ಯಾದಿಗಳು ಕಳಪೆ ಗುಣಮಟ್ಟ ಹೊಂದಿದ್ದರಿಂದಲೂ ಹೆಚ್ಚಿನ ಹಾನಿಗೆ ಕಾರಣವಾಯಿತು ಎನ್ನಲಾಗಿದೆ.

    5. ಮಳೆ ಮತ್ತು ಹಿಮದಿಂದಲೂ ರಕ್ಷಣಾ ಮತ್ತು ಶೋಧ ಕಾರ್ಯದ ವೇಗ ತಗ್ಗಿದ್ದರಿಂದ ಹಾನಿಯ ಪ್ರಮಾಣವನ್ನು ತಗ್ಗಿಸುವುದು ಕಷ್ಟವಾಗುತ್ತಿದೆ.

     

    ಆತಂಕ ಇನ್ನೂ ಮುಗಿದಿಲ್ಲ! 

    ತಜ್ಞರ ಪ್ರಕಾರ ಇಂತಹ ದೊಡ್ಡ ಪ್ರಮಾಣದ ಭೂಕಂಪಗಳು ಹಲವು aftershock ಗಳನ್ನು ಹೊಂದಿರುತ್ತವೆ. Aftershock ಎಂದರೆ, ಘರ್ಷಣೆಗೆ ಒಳಗಾದ ಟೆಕ್ಟಾನಿಕ್ ಪ್ಲೇಟ್ ಗಳು ಮತ್ತೆ ಸಹಜ ಸ್ಥಿತಿಗೆ ಮರಳುವಾಗಲೂ ಭೂಮಿ ಕಂಪಿಸುತ್ತದೆ. ಇದು ಕೆಲವು ಗಂಟೆಗಳಲ್ಲೇ ಮುಗಿಯಲೂಬಹುದು ಅಥವಾ ಕೆಲವು ವರ್ಷಗಳವರೆಗೂ ಆಗಾಗ ಕಾಣಿಸಿಕೊಳ್ಳುತ್ತಲೇ ಇರಬಹುದು. ಕೆಲವೊಮ್ಮೆ ಯಾವುದೇ ಹಾನಿ ಆಗದೆ ಲಘುವಾಗಿ ಕಂಪಿಸಬಹುದು. ಇನ್ನೂ ಕೆಲವೊಮ್ಮೆ ಹಾನಿ ಮಾಡುವಷ್ಟು ದೊಡ್ಡ ಪ್ರಮಾಣದಲ್ಲಿಯೂ ಸಂಭವಿಸಬಹುದು. ಹಾಗಾಗಿ, ಟರ್ಕಿಯಲ್ಲಿ ಸಂಭವಿಸಿದ ಈ ಭೂಕಂಪಕ್ಕೂ aftershock ಗಳನ್ನು ನಿರೀಕ್ಷಿಸಲಾಗಿದೆ. ಹಾಗಾಗಿ, ಅಪಾಯದ ಕತ್ತಿ ಇನ್ನೂ ಟರ್ಕಿಯ ಮೇಲೆ ತೂಗುತ್ತಲೇ ಇದೆ.

     

    ಚಿತ್ರಗಳ ಕೃಪೆ – ಅಂತರ್ಜಾಲ

    Verbattle
    Verbattle
    Verbattle
    #Strike Fault lines international news Strike - slip tectonic plate turkey turkey-syria-earthquake ಭೂಕಂಪ
    Share. Facebook Twitter Pinterest LinkedIn Tumblr Email WhatsApp
    Previous Articleಕೊನೆಯ ಅಧಿವೇಶನ – ಗೈರಾಗಬೇಡಿ
    Next Article ಯಾರಿವರು Bageshwar Dham Sarkar?
    vartha chakra
    • Website

    Related Posts

    ಕಪ್ಪೆ ವಿಷದಿಂದ ಪ್ರತಿಪಕ್ಷ ನಾಯಕನ ಹತ್ಯೆ!

    February 15, 2026

    ರಷ್ಯಾ ಅಧ್ಯಕ್ಷ ಪುತಿನ್ ಸುತ್ತ ಲೈಂಗಿಕ ಬ್ಲ್ಯಾಕ್‌ಮೇಲ್ ತಂತ್ರದ ಹುತ್ತ: ಏನಿದು ಹನಿ ಟ್ರ್ಯಾಪ್?

    February 10, 2026

    4 ಗಂಟೆ ಸಮುದ್ರದಲ್ಲಿ ಈಜಿ ಅಮ್ಮ, ಒಡಹುಟ್ಟಿದವರ ಪ್ರಾಣ ಉಳಿಸಿದ ಬಾಲಕ!

    February 8, 2026

    1 Comment

    1. Skhuvs on February 16, 2026 4:36 am

      mcluck Georgia mcluckcasinogm.com www mcluck

      Reply

    Leave A Reply Cancel Reply

    Verbattle
    Categories
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಮಹಾಶಿವರಾತ್ರಿ ವಿಶೇಷ: ‘ಶಿವ’ ಎಂದರೆ ಶೂನ್ಯವೂ ಹೌದು, ಅನಂತವೂ ಹೌದು!

    ಸತ್ತವಳು ಎದ್ದು ಬಂದಾಗ!

    ಕಪ್ಪೆ ವಿಷದಿಂದ ಪ್ರತಿಪಕ್ಷ ನಾಯಕನ ಹತ್ಯೆ!

    ಬೆಂಗಳೂರಿನಲ್ಲಿ ಬಡ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಜಾಗ ಮಂಜೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Vfrgij on ಸಂಸದ ಡಿ.ಕೆ. ಸುರೇಶ್ ಸೋದರಿ ಹೆಸರಲ್ಲಿ ಪಂಗನಾಮ.
    • Tracymix on ವಕೀಲರಿಗೆ ಕಪ್ಪು ಕೋಟ್ ಬೇಕಿಲ್ಲ | Lawyers
    • LinwoodGah on ಅಮಲಿನಲ್ಲಿ ಆಗಿದ್ದಕ್ಕೆ ಅಂದರ್!
    Latest Kannada News

    ಮಹಾಶಿವರಾತ್ರಿ ವಿಶೇಷ: ‘ಶಿವ’ ಎಂದರೆ ಶೂನ್ಯವೂ ಹೌದು, ಅನಂತವೂ ಹೌದು!

    February 15, 2026

    ಸತ್ತವಳು ಎದ್ದು ಬಂದಾಗ!

    February 15, 2026

    ಕಪ್ಪೆ ವಿಷದಿಂದ ಪ್ರತಿಪಕ್ಷ ನಾಯಕನ ಹತ್ಯೆ!

    February 15, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.