Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ನೇಪಾಳದಲ್ಲಿ ಭೀಕರ ವಿಮಾನ ಅಪಘಾತ. 72 ಜನರ ದುರ್ಮರಣ!
    ಅಂತಾರಾಷ್ಟ್ರೀಯ

    ನೇಪಾಳದಲ್ಲಿ ಭೀಕರ ವಿಮಾನ ಅಪಘಾತ. 72 ಜನರ ದುರ್ಮರಣ!

    vartha chakraBy vartha chakraJanuary 17, 2023Updated:March 20, 2023No Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಜನವರಿ 15, 2023, ಭಾನುವಾರ ಬೆಳಗ್ಗೆ ನೆರೆರಾಷ್ಟ್ರವಾದ ನೇಪಾಳದ ಪೋಖರಾದಲ್ಲಿ ವಿಮಾನ ಅಪಘಾತವೊಂದು ಸಂಭವಿಸಿದೆ. ಮೂಲಗಳ ಪ್ರಕಾರ ದುರಂತಕ್ಕೀಡಾದ ATR 72 500 ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ 72 ಜನರೂ ಸಾವನ್ನಪ್ಪಿದ್ದಾರೆ. ಅದರಲ್ಲಿ 53 ನೇಪಾಳಿಗಳು, 5 ಭಾರತೀಯರು, 4 ರಷ್ಯನ್ನರು, 2 ಕೊರಿಯನ್ನರು, ಐರ್ಲ್ಯಾನ್ಡ್, ಅರ್ಜೆಂಟೀನಾ, ಆಸ್ಟ್ರೇಲಿಯಾ ಮತ್ತು ಫ್ರಾನ್ಸ್ ನಿಂದ ತಲಾ ಒಬ್ಬರು ಹಾಗೂ 4 ಜನ ಸಿಬ್ಬಂದಿಗಳಿದ್ದರು ಎನ್ನಲಾಗಿದೆ.

    ಯೇತಿ ಏರ್ಲೈನ್ಸ್ (Yeti Airlines) ಗೆ ಸೇರಿದ್ದ ಈ ವಿಮಾನ ಭಾನುವಾರ ಬೆಳಗ್ಗೆ, ದಿನದ ಮೂರನೇ ಹಾರಾಟವನ್ನು ಕಠ್ಮಂಡುವಿನಿಂದ ಆರಂಭಿಸಿ ಪೋಖರಾದೆಡೆಗೆ ಪ್ರಯಾಣ ಬೆಳೆಸಿತ್ತು. ಆದರೆ, ಟೇಕ್ ಆಫ್ ಆದ ಸುಮಾರು 20 ನಿಮಿಷದಲ್ಲಿ ಪೋಖರಾದ ಹೊಸ ವಿಮಾನ ನಿಲ್ದಾಣ ಮತ್ತು ಹಳೆಯ ವಿಮಾನ ನಿಲ್ದಾಣದ ನಡುವೆ ಇರುವ ಸೆಟಿ ನದಿಯ (Seti River) ಬಳಿ ಅಪಘಾತಕ್ಕೀಡಾಗಿದೆ.

    ಯೇತಿ ಏರ್ಲೈನ್ಸ್ ಸುಮಾರು ೨೦ ವರ್ಷಗಳ ಹಳೆಯ ಏರ್ಲೈನ್ಸ್ ಕಂಪನಿ. ಇದುವರೆಗೆ ಸುಮಾರು 6 ATR ವಿಮಾನಗಳನ್ನು ಹೊಂದಿದೆ. ತಾರಾ ಏರ್ (Tara Air) ಎನ್ನುವ ಅವಳಿ ಕಂಪನಿಯೊಂದಿಗೆ ನೇಪಾಳದಾದ್ಯಂತ ಅತಿದೊಡ್ಡ ವಿಮಾನ ಮಾರ್ಗಗಳ ಜಾಲವನ್ನು ಯೇತಿ ಒದಗಿಸುತ್ತಿದೆ. ದುರಂತಕ್ಕೀಡಾದ ATR 72 500 ವಿಮಾನವು ಅವಳಿ ಇಂಜಿನ್ ಟರ್ಬೊ ಪ್ರಾಪ್ಗಳನ್ನು ಹೊಂದಿತ್ತು ಮತ್ತು 15 ವರ್ಷಗಳ ಹಾರಾಟದ ಅನುಭವವಿರುವ ವಿಮಾನವಾಗಿತ್ತು. Flightradar24 (flight tracking website) ನೀಡಿರುವ ಮಾಹಿತಿಯ ಪ್ರಕಾರ, ATR 72 500 ವಿಮಾನದಲ್ಲಿ ಬಳಸಲಾಗಿದ್ದ transponder (ರೇಡಿಯೋ ಸಿಗ್ನಲ್ ಗಳ ಮೂಲಕ ಸಂವಹನಕ್ಕೆ ಸಹಾಯವಾಗುವ ಯಂತ್ರ) ತುಂಬಾ ಹಳೆಯದಾಗಿತ್ತು ಮತ್ತು ನಿಖರವಾದ ಮಾಹಿತಿಯನ್ನು ನೀಡುತ್ತಿರಲಿಲ್ಲ.
    ಸಾಮಾಜಿಕ ಜಾಲಾತಾಣಗಳಲ್ಲಿ ಈ ಘಟನೆಯ ವೀಡಿಯೊ ಒಂದು ಹರಿದಾಡುತ್ತಿದೆ. Experts ಗಳ ಪ್ರಕಾರ, ವೀಡಿಯೊದಲ್ಲಿ ಕಾಣಿಸುವ ಹಾಗೆ, ಲ್ಯಾನ್ಡ್ ಮಾಡುವ ವೇಳೆ ವಿಮಾನ ತುಂಬಾ ವೇಗವಾಗಿ ಚಲಿಸುತ್ತಿತ್ತು ಮತ್ತು ಪೈಲಟ್ ನ ನಿಯಂತ್ರಣ ತಪ್ಪಿತ್ತು ಎಂದು ಹೇಳಲಾಗುತ್ತಿದೆ.

    ಮೇಲ್ನೋಟಕ್ಕೆ ಕಂಡು ಬರುವ ಈ ತಾಂತ್ರಿಕ ದೋಷಗಳು ದುರಂತಕ್ಕೆ ಕಾರಣವಾಗಿರಬಹುದು ಎನ್ನಲಾಗಿದೆಯಾದರೂ ಘಟನೆಯ ಬಗ್ಗೆ ಹೆಚ್ಚಿನ ತನಿಖೆಯನ್ನು ನಡೆಸಲು ತಂಡವೊಂದನ್ನು ರಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

    Airlines ಅಪಘಾತ
    Share. Facebook Twitter Pinterest LinkedIn Tumblr Email WhatsApp
    Previous Articleಪಾಶ್ಚಾತ್ಯ ದೇಶಗಳಲ್ಲಿ ಭಾರಿ ಕ್ರೇಜ್ ಹುಟ್ಟಿಸಿದ RRR
    Next Article ರಾಜ್ಯ Congressನಲ್ಲಿ ಪ್ರಿಯಾಂಕಾ ಸಂಚಲನ
    vartha chakra
    • Website

    Related Posts

    ಸುಂದರಿ ಜಾಲಕ್ಕೆ ಬಲಿಯಾದ ಇರಾನ್.

    June 24, 2025

    ಅಹಮದಾಬಾದ್ ನಲ್ಲಿ ವಿಮಾನ ದುರಂತ.

    June 12, 2025

    ಯುದ್ದ ಆಗಬಹುದು ಹುಷಾರ್ !

    May 10, 2025

    Comments are closed.

    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಎಂದ ಜಮೀರ್ ಅಹ್ಮದ್ ಖಾನ್.

    ಕಾಲ್ತುಳಿತ ಘಟನೆಯ ಕಾರಣ ಪತ್ತೆ ಹಚ್ಚಿದ ಸರ್ಕಾರ !

    ಸುಂದರಿ ಜಾಲಕ್ಕೆ ಬಲಿಯಾದ ಇರಾನ್.

    ಗುಜರಾತ್ ನಲ್ಲಿ ಆಪ್ ಗೆದ್ದೇ ಬಿಡ್ತು.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Chriswot on ಜೈಲಿನಿಂದ ಬಿಡುಗಡೆಯಾದ ಸ್ವಾಮೀಜಿ | Murugha Sharanaru
    • oxzndzjzp on 65 ಜನರ ಪ್ರಾಣ ಉಳಿಸಿದ ಲಾರಿ ಚಾಲಕ | Lorry Driver
    • Melvinboory on ದಯಾನಂದ್ ಗೆ ಯಾಕೆ ಶಿಕ್ಷೆ !
    Latest Kannada News

    ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಎಂದ ಜಮೀರ್ ಅಹ್ಮದ್ ಖಾನ್.

    June 24, 2025

    ಕಾಲ್ತುಳಿತ ಘಟನೆಯ ಕಾರಣ ಪತ್ತೆ ಹಚ್ಚಿದ ಸರ್ಕಾರ !

    June 24, 2025

    ಸುಂದರಿ ಜಾಲಕ್ಕೆ ಬಲಿಯಾದ ಇರಾನ್.

    June 24, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಮುರುಡೇಶ್ವರಕ್ಕೆ_ ಹೋಗ್ತಿದ್ದೀರಾ ಜೀನ್ಸ್ ಹಾಕ್ಲೇಬೇಡಿ! #murudeshwar #culturedress #karnataka #rules #shiva
    Subscribe