ಬೆಂಗಳೂರು,ಜೂ.30- ಹಲ್ಲೆ ಸಂಬಂಧ ಬಿಜೆಪಿ ಮುಖಂಡ ಕೆ.ಎನ್ ಚಕ್ರಪಾಣಿ ವಿರುದ್ಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಬಿಜೆಪಿ ಮುಖಂಡ ಕೆ.ಎನ್ ಚಕ್ರಪಾಣಿ ಅವರು ನನ್ನ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಶ್ರೀಧರ್ ಮೂರ್ತಿ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಲಾಗಿದೆ.
ಕೊಡಿಗೆಹಳ್ಳಿ ವಿರೂಪಾಕ್ಷಪುರದಲ್ಲಿರುವ ಚಕ್ರಪಾಣಿ ಮನೆ ಮುಂದೆಯೇ ಶ್ರೀಧರ್ ಮೂರ್ತಿ ಅವರ ಅಪಾರ್ಟ್ಮೆಂಟ್ ಇದ್ದು, ರಿಪೇರಿ ಕೆಲಸ ನಡೆಸುತ್ತಿದ್ದರು. ಈ ವೇಳೆ 12 ಜನರ ಗ್ಯಾಂಗ್ನೊಂದಿಗೆ ಬಂದ ಚಕ್ರಪಾಣಿ ನಮ್ಮ ಮನೆ ಮುಂದೆ ನೀನು ಇರಬಾರದು, ಇದ್ದರೆ ನಿನ್ನನ್ನು ಸುಮ್ಮನೆ ಬಿಡಲ್ಲ ಎಂದು ಜೀವ ಬೆದರಿಕೆ ಹಾಕಿದಲ್ಲದೇ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆ ಸಂಬಂಧ ಸೆಕ್ಷನ್ 143,448,323,504,506 ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.