ಬೆಂಗಳೂರು,ಫೆ.18-
ಚಿನ್ನಾಭರಣ ಗಿರವಿ ಇರಿಸಲು ಬಂದು ಅಂಗಡಿಗೆ ಬೆಂಕಿಯಿಟ್ಟಿದ್ದ ಆರೋಪಿಯನ್ನು ಗಿರಿನಗರ (Girinagara) ಪೊಲೀಸರು ಬಂಧಿಸಿದ್ದಾರೆ.
ಬಸವರಾಜ್ ಬಂಧಿತ ಆರೋಪಿಯಾಗಿದ್ದು, ಆರೋಪಿಯು ಕಳೆದ ಫೆ 12ರಂದು ಗಿರಿನಗರದ ಮುನೇಶ್ವರ ಬ್ಲಾಕ್ (Muneshwara Block) ಸಂತೋಷ್ ಬ್ಯಾಂಕರ್ಸ್ ಮತ್ತು ತುಳಸಿ ಜ್ಯುವೆಲ್ಲರ್ಸ್ ಅಂಗಡಿಯಲ್ಲಿ ನಡೆಸಿದ ಕೃತ್ಯದಿಂದ ಅಂಗಡಿ ಮಾಲೀಕ ಭವರ್ ಲಾಲ್ (54) ಬೆನ್ನಿಗೆ ಗಾಯಗಳಾಗಿದ್ದವು.
ಬೆಳಗ್ಗೆ ಅಂಗಡಿಗೆ ಬಂದಿದ್ದ ಆರೋಪಿ ಬಸವರಾಜ್ ತನ್ನ ಬಳಿಯಿದ್ದ ಚಿನ್ನಾಭರಣ ಅಡವಿಟ್ಟುಕೊಂಡು ಹಣ ನೀಡುವಂತೆ ಕೇಳಿದ್ದ. ಆರೋಪಿಯ ಬಳಿಯಿದ್ದ ಚಿನ್ನಾಭರಣ ಪರಿಶೀಲಿಸಿದ್ದ ಅಂಗಡಿ ಮಾಲೀಕ ಭವರ್ ಲಾಲ್, ಪ್ರತಿಯಾಗಿ ಐವತ್ತು ಸಾವಿರ ರೂ ನೀಡುವುದಾಗಿ ತಿಳಿಸಿದ್ದರು. ಅಷ್ಟಕ್ಕೇ ಸಿಟ್ಟಿಗೆದ್ದ ಆರೋಪಿ ಅಂಗಡಿ ಮಾಲೀಕನ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿ ಪರಾರಿಯಾಗಿದ್ದ.
ಘಟನೆಯಲ್ಲಿ ಅಂಗಡಿಗೆ ಹಾನಿಯಾಗಿದ್ದು ಮಾಲೀಕ ಭವರ್ ಲಾಲ್ ಬೆನ್ನಿಗೆ ಗಾಯಗಳಾಗಿದ್ದವು. ಸದ್ಯ ಪ್ರಕರಣ ದಾಖಲಿಸಿಕೊಂಡ ಗಿರಿನಗರ ಪೊಲೀಸರು ನೆಲಮಂಗಲ (Nelamangala) ಬಳಿ ಆರೋಪಿಯನ್ನು ಬಂಧಿಸಿದ್ದು ತನಿಖೆ ಮುಂದುವರೆಸಿರುವುದಾಗಿ ತಿಳಿಸಿದ್ದಾರೆ.
ಕಾರಿಗೆ ಬೆಂಕಿ:
ನಿಂತಿದ್ದ ಕಾರಿಗೆ ಕಸದಿಂದ ಬೆಂಕಿ ತಗುಲಿದ ಪರಿಣಾಮ ಬೆಂಕಿಯ ಕೆನ್ನಾಲಿಗೆ ಸಂಪೂರ್ಣ ಕಾರು ಸುಟ್ಟು ಭಸ್ಮವಾಗಿರುವ ಘಟನೆ ಹೊಸಕೋಟೆ (Hosakote) ನಗರದ ಸಾಧನಾ ಚಿತ್ರಮಂದಿರ ಬಳಿ ನಡೆದಿದೆ. ಟಾಟಾ ಇಂಡಿಕಾ ಕಾರಿಗೆ ಬೆಂಕಿ ತಗುಲಿದ್ದು, ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ.
5 ಪ್ರತಿಕ್ರಿಯೆಗಳು
clomid only cycle cost of clomid at cvs get generic clomiphene without a prescription where can i buy cheap clomid how to buy clomiphene pill where to buy clomiphene no prescription where to get cheap clomid price
With thanks. Loads of knowledge!
More posts like this would prosper the blogosphere more useful.
oral propranolol – cheap inderal 10mg cost methotrexate 5mg
buy amoxil medication – amoxicillin cheap buy ipratropium 100 mcg generic