ಜಮ್ಮು,ಆ.18- ಅಕ್ರಮವಾಗಿ ನುಸುಳಿ ಭಾರತದ ಜೈಲಿನಲ್ಲಿ ಶಿಕ್ಷೆಗೆ ಒಳಪಟ್ಟ ಪಾಕಿಸ್ತಾನದ ಭಯೋತ್ಪಾದಕ ಪೊಲೀಸ್ ತುಪಾಕಿಯನ್ನು ಕಸಿದು ನಡೆಸಿದ ದಾಳಿಯಲ್ಲಿ ಇಬ್ಬರು ಕಾನ್ಸ್ಟೇಬಲ್ ಗಳು ಗಾಯಗೊಂಡಿದ್ದಾರೆ. ಇದೇ ವೇಳೆ, ನಡೆದ ಗುಂಡಿನ ದಾಳಿಯಲ್ಲಿ ಪಾಕಿಸ್ತಾನ ಕೈದಿ ಹತನಾಗಿರುವ ಘಟನೆ ನಿನ್ನೆ ಮಧ್ಯರಾತ್ರಿ ನಗರದಲ್ಲಿ ನಡೆದಿದೆ.
ಪಾಕಿಸ್ತಾನದ ಕೈದಿ ಮಹಮದ್ ಅಲಿ ಹುಸೈನ್ ಹತ್ಯೆಯಾದ ಯೋಧನಾಗಿದ್ದಾನೆ. ಈತ ಪಾಕ್ ಮತ್ತು ಭಾರತ ಗಡಿ ಬಳಿಕ ಅರ್ನಿಯಾ ಸೆಕ್ಟರ್ನಲ್ಲಿ ಡ್ರೋನ್ ಮೂಲಕ ಶಸ್ತ್ರಾಸ್ತ್ರಗಳನ್ನು ಇಳಿಸುವ ಎಲ್ಇಟಿಯ ಕಮಾಂಡರ್ ಆಗಿದ್ದ. ಈತನನ್ನು ಹಿಡಿದು ಆ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಬಳಿಕ ಈತನ ಎಲ್ಲ ತಂತ್ರಗಳನ್ನು ತಲೆಕೆಳಗೆ ಮಾಡಿ, ಜೈಲಿಗಟ್ಟಲಾಗಿತ್ತು.
ಬಳಿಕ ಆತನನ್ನು ಅದೇ ಸ್ಥಳಕ್ಕೆ ಕರೆದೊಯ್ದು ಶಸ್ತ್ರಾಸ್ತ್ರ ಪತ್ತೆ ನಡೆಸುತ್ತಿದ್ದಾಗ ಪೊಲೀಸರ ತುಪಾಕಿಯನ್ನ ಕಸಿದು ದಾಳಿ ನಡೆಸಿದ್ದ. ಈ ವೇಳೆ ಪೊಲೀಸ್ ಕಾನ್ಸ್ಟೇಬಲ್ ಗಾಯಗೊಂಡಿದ್ದಾರೆ. ಕೈದಿಯ ದಾಳಿ ತಡೆಯಲು ಪೊಲೀಸರು ಆತನ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಗಾಯಗೊಂಡ ಪೊಲೀಸ್ ಕಾನ್ಸ್ಟೇಬಲ್ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.