ಬೆಳಗಾವಿ,ಜು.22-ತನ್ನನ್ನು ಕಡೆಗಣಿಸಿದ ಪ್ರೇಯಸಿಯನ್ನು ಕೊಂದ ಯುವಕನೋರ್ವ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬಸವ ನಗರದಲ್ಲಿ ನಡೆದಿದೆ.
ಯರಗಟ್ಟಿ ತಾಲೂಕಿನ ಮದ್ದೂರಿನ ಪ್ರೇಯಸಿ ರೇಣುಕಾ ಪಶ್ಚನ್ನವರ್ (28)ನನ್ನು ಕೊಂದ ರಾಮಚಂದ್ರ ಎಂಬ ಪಾಗಲ್ ಪ್ರೇಮಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.
ರೇಣುಕಾ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದು ಆಕೆಯನ್ನು ಎರಡು ವರ್ಷದಿಂದ ರಾಮಚಂದ್ರ ಪ್ರೀತಿಸುತ್ತಿದ್ದು ಇಬ್ಬರು ಹಲವೆಡೆ ಸುತ್ತಾಡುತ್ತಿದ್ದರು.
ಕೆಲ ದಿನಗಳ ಹಿಂದೆ ರಾಮಚಂದ್ರನನ್ನು ರೇಣುಕ ಕಡೆಗಣಿಸುತ್ತಿದ್ದು ಇದರಿಂದ ಆತ ಆಕ್ರೋಶಗೊಂಡಿದ್ದ.
ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಬಂದಿದ್ದ ಆತ ನಿನ್ನೆ ರಾತ್ರಿ ರೇಣುಕಾ ರೂಮ್ ಗೆ ಹೋಗಿ ಗಲಾಟೆ ಮಾಡಿ ಕುತ್ತಿಗೆ ಬಿಗಿದು ಕೊಂದು ಹತ್ಯೆ ಮಾಡಿ ನಂತರ ತಾನೂ ಆತ್ಮಹತ್ಯೆ ಶರಣಾಗಿದ್ದಾನೆ. ಈ ಘಟನೆ ಸಂಬಂಧ ಯರಗಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.