ದೆಹಲಿ ಪೊಲೀಸರ ತನಿಖೆಯ ಪ್ರಕಾರ, ಆರೋಪಿಗಳ ಮೊದಲ ಸಭೆ ಸುಮಾರು 18 ತಿಂಗಳ ಹಿಂದೆ ಮೈಸೂರಿನಲ್ಲಿ ನಡೆದಿತ್ತು. ಈ ಸಭೆಯಲ್ಲಿ ಅವರು ನಿರುದ್ಯೋಗ, ಹಣದುಬ್ಬರ ಮತ್ತು ಮಣಿಪುರದ ಹಿಂಸಾಚಾರ ಸೇರಿದಂತೆ ಸಂಸತ್ತು ಚರ್ಚಿಸಬೇಕು ಎಂದು ಅವರು ನಂಬಿರುವ ವಿಷಯಗಳನ್ನು ಹೈಲೈಟ್ ಮಾಡುವ ವಿವಿಧ ವಿಧಾನಗಳ ಕುರಿತು ಮಾತನಾಡಿದರು. ಒಂಬತ್ತು ತಿಂಗಳ ಹಿಂದೆ, ಈ ವರ್ಷದ ಮಾರ್ಚ್ನಲ್ಲಿ ಮತ್ತೊಂದು ಸಭೆ ನಡೆಸಲಾಯಿತು ಮತ್ತು ವಿವರವಾದ ಯೋಜನೆ ರೂಪುಗೊಂಡಿತು ಎಂದು ಪೊಲೀಸ್ ಅಕಾರಿಗಳು ತಿಳಿಸಿದ್ದಾರೆ. ಚಂಡೀಗಢ ವಿಮಾನ ನಿಲ್ದಾಣದ ಬಳಿ ಈ ಸಭೆ ನಡೆದಿದ್ದು, ಕನಿಷ್ಠ ಬೆಂಬಲ ಬೆಲೆಗೆ ಕಾನೂನಾತ್ಮಕ ಖಾತರಿ ನೀಡುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಇದರ ಸುಮಾರು ನಾಲ್ಕು ತಿಂಗಳ ನಂತರ, ಜುಲೈನಲ್ಲಿ, ಸಂಸತ್ತಿನ ಸಂಕೀರ್ಣದ ವಿಚಕ್ಷಣವನ್ನು ನಡೆಸಲು ಶರ್ಮಾ ಲಕ್ನೋದಿಂದ ನವದೆಹಲಿಗೆ ತೆರಳಿದರು.ಸೆಪ್ಟೆಂಬರ್ನಲ್ಲಿ ಹೊಸ ಸಂಸತ್ತಿನ ಕಟ್ಟಡದಲ್ಲಿ ಮೊದಲ ಅಧಿವೇಶನ ನಡೆಯುವುದಕ್ಕೂ ಮುನ್ನ ಇದು ಶರ್ಮಾ ಅವರಿಗೆ ಪ್ರವೇಶ ಪಡೆಯಲು ಸಾಧ್ಯವಾಗಲಿಲ್ಲ. ಅವರು ಹೊರಗಿನಿಂದ ಕಟ್ಟಡದ ಪಹರೆ ನಡೆಸಿದರು, ಎಲ್ಲಾ ಭದ್ರತಾ ವ್ಯವಸ್ಥೆಗಳನ್ನು ಗಮನಿಸಿದರು ಮತ್ತು ಗುಂಪಿನ ಉಳಿದವರಿಗೆ ವರದಿ ಮಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ALSO READ | Latest Kannada News
ಲೋಕಸಭೆಗೆ ನುಗ್ಗಿದ ಮನೋರಂಜನ್ ಯಾರು ಗೊತ್ತಾ? | Lok Sabha Security Breach


1 ಟಿಪ್ಪಣಿ
Descubra o Mostbet e viva a verdadeira emoГ§ГЈo de jogar online – https://mostbetpt.pro/ , Mostbet: bГґnus generoso, jogos incrГveis e saques sem complicaГ§ГЈo .