Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » Moonlighting ವಿವಾದ ಏನದು?
    ರಾಜ್ಯ

    Moonlighting ವಿವಾದ ಏನದು?

    vartha chakraBy vartha chakraಸೆಪ್ಟೆಂಬರ್ 14, 2022Updated:ಸೆಪ್ಟೆಂಬರ್ 14, 20221 ಟಿಪ್ಪಣಿ2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಇದೀಗ ಇದು ಹೆಚ್ಚಿನ ಚರ್ಚೆಯಲ್ಲಿರುವ ಸಂಗತಿ..ಸಾಫ್ಟವೇರ್ ವಲಯದಲ್ಲಿ ಇದು ವ್ಯಾಪಕ ಚರ್ಚೆಯಲ್ಲಿದೆ. ಇದರ ಪರ- ವಿರೋಧದ ಚರ್ಚೆಗಳು ನಡೆಯುತ್ತಿವೆ.

    * ಒಬ್ಬನೇ ಉದ್ಯೋಗಿಯು ಒಂದಕ್ಕಿಂತ ಹೆಚ್ಚು ಕಂಪನಿಗಳಲ್ಲಿ ಕೆಲಸ ಮಾಡಲು ಅವಕಾಶವಿಲ್ಲ. ಹೀಗೆ ಮಾಡಿರುವುದು ಬೆಳಕಿಗೆ ಬಂದರೆ ಅಂಥ ಉದ್ಯೋಗಿಯನ್ನು ವಜಾ ಮಾಡಬಹುದು ಎಂದು ದೇಶದ ಪ್ರಮುಖ ಐಟಿ ಕಂಪನಿ ಇನ್​ಫೊಸಿಸ್ ಹೇಳಿದೆ.

    * ವಿಪ್ರೋ (Wipro) ಅಧ್ಯಕ್ಷ ರಿಶದ್ ಪ್ರೇಮ್​ಜಿ (Rishd Premji) ಅವರು ‘ಮೂನ್​ಲೈಟ್​ ಎನ್ನುವುದು ಮೋಸ’ ಎಂದಿದ್ದಾರೆ.

    * ಇದರ ಬೆನ್ನಲ್ಲೇ ಮೋಹನ್​ದಾಸ್ ಪೈ ‘ಮೂನ್​ಲೈಟ್​ ಮಾಡುವುದನ್ನು ಮೋಸ ಎಂದು ಕರೆಯುವುದು ಸರಿಯಲ್ಲ. ಯಾವುದೇ ಉದ್ಯೋಗಿಯು ದಿನದ ಒಂದು ನಿರ್ದಿಷ್ಟ ಅವಧಿಯಲ್ಲಿ ಕೆಲಸ ಮಾಡಲು ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿರುತ್ತಾನೆ. ಈ ಅವಧಿಯ ನಂತರ ಏನು ಮಾಡುತ್ತಾರೆ ಎನ್ನುವುದು ಅವರ ಅವರಿಗೆ ಬಿಟ್ಟ ವಿಷಯ’ ಎಂದು ಹೇಳುತ್ತಾರೆ

    *ಕೆಲಸದ ಅವಧಿ ಮುಗಿದ ನಂತರ ಉದ್ಯೋಗಿ ಏನು ಮಾಡುತ್ತಾನೆ ಎನ್ನುವುದನ್ನು ಕಟ್ಟಿಕೊಂಡು ಕಂಪನಿಗಳಿಗೆ ಏನಾಗಬೇಕು’ ಎನ್ನುವುದು ಐಟಿ ಉದ್ಯೋಗಿಗಳ ವಾದವಾಗಿದೆ.

    * ಒಬ್ಬ ಉದ್ಯೋಗಿಯು ಕಾರ್ಮಿಕ ಕಾನೂನುಗಳಂತೆ ದಿನಕ್ಕೆ 8 ತಾಸು ಕೆಲಸ ಮಾಡಬೇಕು. ಆದರೆ ಟಾರ್ಗೆಟ್ ಅಥವಾ ಇತರ ಕಾರಣಗಳನ್ನು ಪರೋಕ್ಷವಾಗಿ ಮುಂದಿಟ್ಟು ಅವರನ್ನು 10 ಗಂಟೆಗೂ ಹೆಚ್ಚು ಕಾಲ ದುಡಿಸಲಾಗುತ್ತಿದೆ. ಇದು ಸರಿಯೇ’ ಎಂದು ಇವರು ವಾದ ಆರಂಭಿಸಿದ್ದಾರೆ.

    * ಆದರೆ ‌ಇದಕ್ಕೆ ವ್ಯತಿರಿಕ್ತವಾಗಿ ಐಟಿ ಉದ್ಯಮಿಗಳು ದಿನದಲ್ಲಿ 8ರಿಂದ 10 ತಾಸು ದುಡಿದ ಉದ್ಯೋಗಿಯು ನಂತರ ಕುಟುಂಬದೊಂದಿಗೆ ಕಾಲ ಕಳೆಯಬೇಕು, ವಿಶ್ರಾಂತಿ ಪಡೆಯಬೇಕು. ಆಗ ಮಾತ್ರ ಅವನು ಮತ್ತೊಂದು ದಿನದ ಕೆಲಸಕ್ಕೆ ಸಿದ್ಧನಾಗಲು ಸಾಧ್ಯ. ಇಲ್ಲದಿದ್ದರೆ ಮಾರನೇ ದಿನದ ಉತ್ಪಾದಕತೆಯ ಮೇಲೆ ಇದು ಪರಿಣಾಮ ಬೀರುತ್ತದೆ. ಹೀಗಾಗಿ ಮೂನ್​ಲೈಟ್ ಸಹಿಸಲು ಆಗುವುದಿಲ್ಲ ಎಂದು ವಾದಿಸುತ್ತಾರೆ.

    * ಕಾರ್ಮಿಕ ಕಾನೂನು ಎನು ಹೇಳುತ್ತದೆ ಎಂದರೆ.
    ನಿರ್ದಿಷ್ಟ ಕಂಪನಿಯು ಕೆಲಸವನ್ನು ಕೊಡುವಾಗ ಉದ್ಯೋಗಿಗಳೊಂದಿಗೆ ಮಾಡಿಕೊಳ್ಳುವ ಒಪ್ಪಂದ ಪತ್ರದಲ್ಲಿರುವ ಷರತ್ತುಗಳು ಉದ್ಯೋಗಿಗಳಿಗೆ ಅನ್ವಯವಾಗುತ್ತದೆ. ಅದರಲ್ಲಿ ಮತ್ತೊಂದು ಕಂಪನಿಯಲ್ಲಿ ಕೆಲಸಕ್ಕೆ ಅವಕಾಶವಿಲ್ಲ ಎಂಬ ಷರತ್ತು ಇದ್ದು, ಉದ್ಯೋಗಿ ಅದಕ್ಕೆ ಒಪ್ಪಿಕೊಂಡು ಕೆಲಸಕ್ಕೆ ಸೇರಿದ ನಂತರ ಮೂನ್​ಲೈಟ್ ಮಾಡಿದರೆ ಅದು ಅಕ್ರಮ ಎನಿಸಿಕೊಳ್ಳುತ್ತದೆ.

    * ಹಾಗಾದರೆ ಈ ಮೂನ್ ಲೈಟ್ ಅಂದರೆ ಏನು‌ ಇದು ಏಕಾಎಕಿ ಉದ್ಬವಿಸಿತಾ..ಅನ್ನೋದು ಪ್ರಶ್ನೆ.

    *ಐಟಿ ಉದ್ಯಮದ ಉದ್ಯೋಗಿಯೊಬ್ಬ ಬೇರೊಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನುವ ಕಾರಣಕ್ಕೆ ಭಾರತದಲ್ಲಿ ಮೂನ್​ಲೈಟ್ ಬಗ್ಗೆ ಇದೀಗ ಚರ್ಚೆ ಆರಂಭವಾಗಿದೆ. ಆದರೆ ಇದು ಮೊದಲಿನಿಂದಲೂ ಚಾಲ್ತಿಯಲ್ಲಿದ್ದ ಕ್ರಮವೇ ಆಗಿದೆ. ಅಕ್ರಮ-ಸಕ್ರಮ ಎಂಬ ಚರ್ಚೆಯೂ ಬಹುಕಾಲದಿಂದ ಚಾಲ್ತಿಯಲ್ಲಿತ್ತು

    *ಸರ್ಕಾರಿ ವೈದ್ಯರು ಖಾಸಗಿ ಕ್ಲಿನಿಕ್ ನಡೆಸುವುದು ಹೀಗೆ ಹಲವು ರೀತಿಯಲ್ಲಿ ಮೂನ್​ಲೈಟ್ ಭಾರತೀಯ ಸಮಾಜದಲ್ಲಿ ಮೊದಲಿನಿಂದಲೂ ಅಸ್ತಿತ್ವದಲ್ಲಿತ್ತು.

    * ಈಗಿರುವ ಕೆಲಸದಿಂದ ತನಗೆ ಬೇಕಿರುವಷ್ಟು ಸಂಪಾದನೆ ಸಾಧ್ಯವಾಗುತ್ತಿಲ್ಲ ಎಂದಾಗ ಬಿಡುವಿನ ಅವಧಿಯಲ್ಲಿ ಮತ್ತೊಂದು ಕೆಲಸ ಮಾಡಿ ಸಂಪಾದನೆ ಹೆಚ್ಚಿಸಿಕೊಂಡರೆ ತಪ್ಪೇನು? ಲಂಚ ಪಡೆಯುವುದು ಅಥವಾ ಭಿಕ್ಷೆ ಬೇಡುವುದಕ್ಕಿಂತಲೂ ಇದು ಒಳ್ಳೆಯದಲ್ಲವೇ? ಎಷ್ಟು ಕಂಪನಿಗಳು ನಿಗದಿತ ಅವಧಿಗಿಂತಲೂ ಹೆಚ್ಚು ದುಡಿಸಿಕೊಂಡಿದ್ದಕ್ಕೆ ಇನ್ಸೆನ್ಟೀವ್ ಕೊಡುತ್ತಿವೆ’

    ಇಷ್ಟೆಲ್ಲದರ ನಡುವೆ ಇಲ್ಲಿರುವುದು ನೈತಿಕತೆಯ ಪ್ರಶ್ನೆ.ತಾನು ಮೂಲದಲ್ಲಿ ಕೆಲಸ ಮಾಡುವ ಸಂಸ್ಥೆಯ ಹಿತಾಸಕ್ತಿ ಕಾಪಾಡುತ್ತಲೆ ಮತ್ತೊಂದು ಕೆಲಸದಲ್ಲಿ ಹೇಗೆ ನ್ಯಾಯ ಸಲ್ಲಿಸಬಹುದು ಎನ್ನುವುದಾಗಿದೆ

    m ಕಾನೂನು ನ್ಯಾಯ
    Share. Facebook Twitter Pinterest LinkedIn Tumblr Email WhatsApp
    Previous Articleಮಧು ಬಂಗಾರಪ್ಪ OBC ಅಧ್ಯಕ್ಷ
    Next Article Honey trap ಖೆಡ್ಡಾಕ್ಕೆ ಬಿದ್ದ ಬಿಜೆಪಿ ಮುಖಂಡ..
    vartha chakra
    • Website

    Related Posts

    ಉಗ್ರರನ್ನು ಹೊಡೆದುರುಳಿಸಿದ್ದು ಬೆಂಗಳೂರಿನ ಡ್ರೋನ್

    ಮೇ 8, 2025

    ಆಪರೇಷನ್ ಸಿಂಧೂರ

    ಮೇ 7, 2025

    ಜನಾರ್ದನ ರೆಡ್ಡಿ ಮತ್ತೆ ಜೈಲು ಪಾಲು

    ಮೇ 6, 2025

    Comments are closed.

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಉಗ್ರರನ್ನು ಹೊಡೆದುರುಳಿಸಿದ್ದು ಬೆಂಗಳೂರಿನ ಡ್ರೋನ್

    ಗೆಲುವಿಗಾಗಿ ವಿಶೇಷ ಪೂಜೆ.

    ಆಪರೇಷನ್ ಸಿಂಧೂರ

    ಮಹಿಳೆಯರೇ‌ ಹುಷಾರ್

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • AnthonyObese ರಲ್ಲಿ ಇಂದಿರಾ ಗಾಂಧಿ ಚುನಾವಣೆ ಹೇಗೆ ನಡೆದಿತ್ತು ಗೊತ್ತಾ..? | Indira Gandhi
    • ремонт бытовой техники в москве ರಲ್ಲಿ ಪ್ರಜ್ವಲ್… ಎಲ್ಲಿದ್ದೀಯಪ್ಪಾ.!
    • Floydfox ರಲ್ಲಿ ಮುಖ್ಯ ಶಿಕ್ಷಕಿ ಮಾಡಿದ ಘನಂದಾರಿ ಕೆಲಸ | Viral News
    Latest Kannada News

    ಉಗ್ರರನ್ನು ಹೊಡೆದುರುಳಿಸಿದ್ದು ಬೆಂಗಳೂರಿನ ಡ್ರೋನ್

    ಮೇ 8, 2025

    ಗೆಲುವಿಗಾಗಿ ವಿಶೇಷ ಪೂಜೆ.

    ಮೇ 8, 2025

    ಆಪರೇಷನ್ ಸಿಂಧೂರ

    ಮೇ 7, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಯುದ್ಧದ ಎಫೆಕ್ಟ್ ಐಪಿಎಲ್ ಪಂದ್ಯವೇ ರದ್ದು #india #pakistan #worldnews #attack #sharevideo #dailyupdate
    Subscribe