ಶ್ರೀ ಪಲಿಮಾರು ಮಠ, ಉಡುಪಿ ಸಾಧ್ವೀ ಮಾಧ್ವೀ ಪಾಠಶಾಲಾ ಸಮುದಾಯ ಶಾಲೆ ಎನ್.ಐ.ಓ.ಎಸ್ (NIOS) ಅಕ್ಷರಾರಂಭ ಕಾರ್ಯಕ್ರಮ ರಥಬೀದಿಯ ವಿದ್ಯಾಮಾನ್ಯ ಸಭಾಭವನದಲ್ಲಿ ಇಂದು ನಡೆಯಿತು. ಶಾಸಕರಾದ ಕೆ. ರಘುಪತಿ ಭಟ್ ರವರು ಭಾಗವಹಿಸಿದರು.
ಅಕ್ಷರಾರಂಭವನ್ನು ಅದಮಾರು ಮಠದ ಶ್ರೀ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಹಾಗು ಪಲಿಮಾರು ಮಠದ ಶ್ರೀ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಉದ್ಘಾಟಿಸಿ ಆಶೀರ್ವಚಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಶೋಕ್ ಕಾಮತ್ ಹಾಗೂ ಸಾಧ್ವೀ ಮಾಧ್ವೀ ಪಾಠಶಾಲಾ ಆಡಳಿತ ಮಂಡಳಿಯವರು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.