ಪಣಜಿ,ಜೂ.18-
ಯುವಕನೊಬ್ಬ ತನ್ನ ಪ್ರೇಯಸಿಯನ್ನು ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿದ್ದು,ನಗರದ ಹೊರವಲಯದ ಅರಣ್ಯ ಪ್ರದೇಶದಲ್ಲಿ ಆಕೆಯ ಶವ ಪತ್ತೆಯಾಗಿದೆ.
ಕತ್ತು ಸೀಳಿ ಪ್ರೇಯಸಿ ರೋಶಿ ಮೋಸೆಸ್ ರನ್ನು ಕೊಲೆಗೈದ ಪ್ರಿಯಕರ ಸಂಜಯ್ ಕೆವಿನ್(22)ನನ್ನು ಹುಬ್ಬಳ್ಳಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಇವರಿಬ್ಬರು ಮದುವೆಯಾಗಲು ಬೆಂಗಳೂರಿನಿಂದ ಗೋವಾಕ್ಕೆ ಪ್ರಯಾಣಿಸಿದ್ದರು.
ಗೋವಾ ಪ್ರವಾಸದ ಸಮಯದಲ್ಲಿ ತನ್ನ ಗೆಳತಿ ಬೇರೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದಿಂದ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಂಡಾ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ ತಂಡ, ಶ್ವಾನ ದಳ ಮತ್ತು ತಾಂತ್ರಿಕ ತಜ್ಞರ ಸಹಾಯದಿಂದ ಅಪರಾಧ ಸ್ಥಳದ ಪರೀಕ್ಷೆಯನ್ನು ನಡೆಸಲಾಗಿದೆ.
ಕೊಲೆಯಾದ ಯುವತಿ ಶಾಲೆಯೊಂದರಲ್ಲಿ ಬೋಧಕೇತರ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಳು. ಯುವಕ ನಿರುದ್ಯೋಗಿ ಆಗಿದ್ದ. ಪೊಲೀಸರ ಪ್ರಕಾರ, ಕೊಲೆಗೆ ಮುನ್ನ ಆರೋಪಿ ಬೆಂಗಳೂರಿನಲ್ಲಿರುವ ತನ್ನ ಮನೆಯಿಂದ ಹೊರಟು ಹಾವೇರಿ ಬಳಿ ಯುವತಿಯನ್ನು ಭೇಟಿಯಾಗಿದ್ದ. ನಂತರ ಅವರು ಗೋವಾಕ್ಕೆ ತೆರಳಿದ್ದರು. ಅವರು ಶಾಲಾ ಸಹಪಾಠಿಗಳಾಗಿದ್ದು, ಹಲವು ವರ್ಷಗಳಿಂದ ಸಂಬಂಧದಲ್ಲಿದ್ದರು. ಇತ್ತೀಚೆಗೆ, ಆಕೆ ಇನ್ನೊಬ್ಬ ಪುರುಷನೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಅವನಿಗೆ ಅನುಮಾನ ಬರಲು ಪ್ರಾರಂಭಿಸಿತು. ಇದರಿಂದ ಆಕ್ರೋಶಗೊಂಡ ಆರ ಗೋವಾದಲ್ಲಿ ಅವಳನ್ನು ಕೊಲೆ ಮಾಡಲು ಯೋಜಿಸಿದನು. ಈ ಉದ್ದೇಶಕ್ಕಾಗಿ ಅವನು ತನ್ನೊಂದಿಗೆ ಒಂದು ಚಾಕುವನ್ನು ಹೊಂದಿದ್ದನು” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಕಳೆದ ಜೂ.15 ರಂದು ಗೋವಾ ತಲುಪಿದ ಅವರು ಧರ್ಬಂದೋರಾ ಪ್ರದೇಶದ ಪಿಲ್ಲಿಯೆಮ್ನಲ್ಲಿರುವ ಅರಣ್ಯ ಪ್ರದೇಶದ ಬಳಿ ಬಸ್ಸಿನಿಂದ ಇಳಿದರು. “ಆರೋಪಿ ಆಕೆಯನ್ನು ಪೊದೆಯೊಂದಕ್ಕೆ ಕರೆದೊಯ್ದು ಚಾಕುವಿನಿಂದ ಕತ್ತು ಸೀಳಿದ್ದಾನೆ. ನಂತರ ಆಕೆಯ ಫೋನ್ ಕಿತ್ತುಕೊಂಡು ಸ್ಥಳದಿಂದ ಪರಾರಿಯಾಗಿದ್ದ. ಪೊಲೀಸರು ತನಿಖೆ ಮಾಡಿ ಹುಬ್ಬಳ್ಳಿಯನ್ನು ಆತನನ್ನು ಬಂಧಿಸಿದ್ದಾರೆ. ಗೋವಾ ಪ್ರಯಾಣದ ಸಮಯದಲ್ಲಿ ಆಕೆಯ ಜೊತೆ ಜಗಳವಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Previous Articleಗಾಳಿ ಬಿಟ್ಟ ಗೋವಿಂದ ಜೈಲಿಗೆ
Next Article ಕೆಪಿಟಿಸಿಎಲ್ ನೌಕರರಿಗೆ ಇಂಧನ ಮಂತ್ರಿ ಸಲಹೆ.