Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ರವಿ ಬೆಳಗೆರೆಗೆ ಅಪಮಾನ ಮಾಡಿತ್ತಾ ಸ್ಟಾರ್ ಸುವರ್ಣ…?
    ಸುದ್ದಿ

    ರವಿ ಬೆಳಗೆರೆಗೆ ಅಪಮಾನ ಮಾಡಿತ್ತಾ ಸ್ಟಾರ್ ಸುವರ್ಣ…?

    vartha chakraBy vartha chakraಏಪ್ರಿಲ್ 19, 2022Updated:ಏಪ್ರಿಲ್ 21, 2022ಯಾವುದೇ ಟಿಪ್ಪಣಿಗಳಿಲ್ಲ2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಕನ್ನಡ ಚಾನೆಲ್ ಕಟ್ಟಲು ಕನ್ನಡದ ಮನಸ್ಸುಗಳು ಬೇಕು. ಯಾವಯಾವುದೋ ಕಾರಣಕ್ಕೆ ಯಾರಯಾರನ್ನೋ ತಂದು ಚಾನೆಲ್ ಹೆಡ್ ಸ್ಥಾನದಲ್ಲಿ ಕೂರಿಸಿದರೆ ಯಾವುದು ಆಗಬಾರದೋ ಅದೇ ಆಗತ್ತೆ.

    ಸುವರ್ಣ ಚಾನೆಲ್ ನಲ್ಲಿ ಆಗಿದ್ದು ಅದೇ. ರವಿ ಬೆಳೆಗೆರೆ ಅವರ ಜನಪ್ರಿಯ ಕಾದಂಬರಿ `ಹೇಳಿಹೋಗು ಕಾರಣ’ ಧಾರಾವಾಹಿ ಪ್ರಸಾರಕ್ಕೆ ಯೋಗ್ಯವಲ್ಲ ಅಂತ ತಿರಸ್ಕರಿಸಿದೆ. ಆದರೆ ಇದು ದೊಡ್ಡ ಸುದ್ದಿಯಾಗಲೇ ಇಲ್ಲ.

    ‘ಹೇಳಿಹೋಗು ಕಾರಣ’ ಧಾರಾವಾಹಿ ಮಾಡಲು ಸುವರ್ಣ ಚಾನೆಲ್ ತಾತ್ವಿಕ ಒಪ್ಪಿಗೆ ನೀಡಿತ್ತು. ಜೀ ಕನ್ನಡದ `ಗಟ್ಟಿಮೇಳ’ ಬಿಟ್ಟು ಹೊರಬಂದಿದ್ದ ನಿರ್ದೇಶಕ ಅನಿಲ್ ಕೋರಮಂಗಲ ಆರೆಂಟು ತಿಂಗಳು ಶ್ರಮ ಹಾಕಿ  15 ಎಪಿಸೋಡ್ ಚಿತ್ರೀಕರಣ ಕೂಡ ಮಾಡಿದ್ದರು. ಅಷ್ಟರಲ್ಲಿ ಮುಖ್ಯಸ್ಥರ ಬದಲಾವಣೆಯಾಗಿ ಮುಂಬೈ ಮೂಲದ ಸುಷ್ಮಾ ಸುರೇಶ್ ಬ್ಯುಸಿನೆಸ್ ಹೆಡ್ ಆಗಿ ಬಂದರು. ಫಿಕ್ಷನ್ ಹೆಡ್ ಆಗಿ ಉದಯ ಟಿವಿಲಿದ್ದ ಇನ್ನೊಬ್ಬಾಕೆ ಮುಂಬೈವಾಲಿ ಶಿಲ್ಪಾ ಕೊಟೆಚಾ ನೇಮಕವಾದರು. ಅನಿಲ್ ಗೆ ವಕ್ರದೆಸೆ ಶುರುವಾಯ್ತು. ಅದು ಹೋಗಲಿ, ಕನ್ನಡ ಸಾಹಿತ್ಯದ ಗಂಧ ಗಾಳಿ ಇಲ್ಲದ ಶಿಲ್ಪಾ ಕೊಟೆಚಾ 50 ಲಕ್ಷ ರೂಪಾಯಿ ಖರ್ಚುಮಾಡಿ ನಿರ್ಮಿಸಿದ್ದ `ಹೇಳಿ ಹೋಗು ಕಾರಣ’ ಧಾರಾವಾಹಿಯ 15 ಸಂಚಿಕೆಗಳನ್ನೂ ಕಸದ ಬುಟ್ಟಿಗೆ ಎಸೆದುಬಿಟ್ಟರು. ಅನಿಲ್ ಬಾಯಿಬಾಯಿ ಬಡಿದುಕೊಳ್ಳುವಂತಾಯ್ತು.

    ಇಲ್ಲಿ ಶಿಲ್ಪಾ ಒಬ್ಬ ನಿರ್ಮಾಪಕರ ಹೊಟ್ಟೆ ಮೇಲೆ ಹೊಡೆದಿದ್ದು ಒಂದು ಕಡೆ. ಇನ್ನೊಂದು ಕಡೆ ಕನ್ನಡದ ಮೇರು ಬರಹಗಾರ ರವಿ ಬೆಳಗೆರೆಗೆ ಅವಮಾನ ಮಾಡಿದ್ದು ! ಇದರ ವಿರುದ್ಧ ಯಾವ ಕ.ರ.ವೇ ಸಹ ಪ್ರತಿಭಟಿಸಲಿಲ್ಲ.  ಹೋಗಲಿ, ನಿರ್ಮಾಪಕ ಅನಿಲ್ ಕೂಡ ಸೊಲ್ಲೆತ್ತಲಿಲ್ಲ. ಅನಿಲ್ ಒಂದು ಪ್ರತಿಭಟನೆಯ ಕಿಡಿ ಹೊತ್ತಿಸಿದ್ದರೆ ನಡೆಯುತ್ತಿದ್ದ ಕಥೆ ಬೇರೆ. ಆದರೆ ಅವರೇಕೋ `ಜೇನುಗೂಡು’ ರೀಮೇಕ್ ಧಾರಾವಾಹಿ ಸಿಕ್ಕಿತು ಅಂತ ನಡು ಬಗ್ಗಿಸಿಬಿಟ್ಟರು. ಹೊಟ್ಟೆಪಾಡು.

    ಕನ್ನಡ ಸಾಹಿತಿಗೆ ಸಾಹಿತ್ಯಕ್ಕೆ ಕನ್ನಡ ಬಾರದ ಹೆಣ್ಣುಮಕ್ಕಳಿಬ್ಬರು ಸೇರಿಕೊಂಡು ಅವಮಾನ ಮಾಡಿದ್ದನ್ನು ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಕೂಡ ಪ್ರಶ್ನಿಸಲಿಲ್ಲ. ಅದೊಂಥರಾ ಹಲ್ಲಿಲ್ಲದ ಹಾವು!

    ಇಷ್ಟೆಲ್ಲ ಆವಾಂತರ ಮಾಡಿದ ಸುಷ್ಮಾ-ಶಿಲ್ಪಾ ಲಾಂಚ್ ಮಾಡಿದ ರಿಮೇಕ್ ಮುದ್ದುಮಣಿಗಳು, ಬೆಟ್ಟದ ಹೂ, ಜೇನುಗೂಡು ಧಾರಾವಾಹಿಗಳು ಆಹಾ ಓಹೋ ಅನ್ನುವ ಸದ್ದು ಮಾಡಲಿಲ್ಲ. ಚಾನೆಲ್ ನಾಲ್ಕನೇ ಸ್ಥಾನ ಬಿಟ್ಟು ಮೇಲೆದ್ದಿಲ್ಲ. ಸ್ಟಾರ್- ಡಿಸ್ನಿ ಮ್ಯಾನೇಜ್ ಮೆಂಟ್ ನವರು ಜೀ ಕನ್ನಡ ಮತ್ತು ಕಲರ್ಸ್ ಕನ್ನಡ ನೋಡಿ ಕಲಿಯಬೇಕಾದ ಮೊದಲ ಪಾಠ – ಕನ್ನಡ ವಾಹಿನಿ ನಡೆಸಲು ಕನ್ನಡ ಮನಸ್ಸಿನ ಸಾರಥಿ ಇದ್ದರೆ ಮಾತ್ರ ಸಾಧ್ಯ ಅಂತ. ಹೀಗಾದಾಗ ಚಾನೆಲ್ ಉದ್ಧಾರ ಆಗುವುದರ ಜೊತೆಗೆ ಕನ್ನಡ ಸಾಹಿತಿಗಳಿಗೆ ಅವಮಾನ ಆಗುವುದಾದರೂ ನಿಲ್ಲಬಹುದು.

    Verbattle
    Verbattle
    Verbattle
    #helihogukarana #kannadanovel #kannadaserial #ravibelagere #starsuvarna
    Share. Facebook Twitter Pinterest LinkedIn Tumblr Email WhatsApp
    Previous Articleಶಿವರಾಜ್ ಕುಮಾರ್ ಗೆ ಯಾತಕ್ಕಾಗಿ ಶಾಕ್ ಆಯ್ತು?
    Next Article ತನ್ನ ಗೋರಿ ತಾನೇ ತೋಡಿಕೊಳ್ಳುತ್ತಿರುವ ಉದಯ
    vartha chakra
    • Website

    Related Posts

    ಆಟಕ್ಕುಂಟು ಲೆಕ್ಕಕ್ಕಿಲ್ಲದ ಬಿಜೆಪಿ ಸಂಸದರು: ಕೇಂದ್ರದ ವಿರುದ್ಧ ಡಿಸಿಎಂ ಡಿಕೆಶಿ ವಾಗ್ದಾಳಿ

    ಜನವರಿ 31, 2026

    ಸಾರಿಗೆ ನಿಗಮಗಳಿಗೆ ರಾಮಲಿಂಗಾರೆಡ್ಡಿ ಕಟ್ಟಾಜ್ಞೆ

    ಜನವರಿ 31, 2026

    ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಡಾ. ಸಿ.ಜೆ ರಾಯ್ ದಾರುಣ ಅಂತ್ಯ

    ಜನವರಿ 30, 2026

    Comments are closed.

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಆಟಕ್ಕುಂಟು ಲೆಕ್ಕಕ್ಕಿಲ್ಲದ ಬಿಜೆಪಿ ಸಂಸದರು: ಕೇಂದ್ರದ ವಿರುದ್ಧ ಡಿಸಿಎಂ ಡಿಕೆಶಿ ವಾಗ್ದಾಳಿ

    ಸಾರಿಗೆ ನಿಗಮಗಳಿಗೆ ರಾಮಲಿಂಗಾರೆಡ್ಡಿ ಕಟ್ಟಾಜ್ಞೆ

    ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಡಾ. ಸಿ.ಜೆ ರಾಯ್ ದಾರುಣ ಅಂತ್ಯ

    ಕೊಲೆ ಮಾಡಿ ಮನೆಯಲ್ಲಿ ಹೂತು ಹಾಕಿದ ಪಾಪಿ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Donniezew ರಲ್ಲಿ ಹೆದರಿದ ತೇಜಸ್ವಿ ಸೂರ್ಯ..?
    • BrandonStoon ರಲ್ಲಿ ಆಚಾರವಿಲ್ಲದ ನಾಲಿಗೆ- ರಾಮಲಿಂಗಾರೆಡ್ಡಿ ಕಿಡಿ ಕಿಡಿ | Anantkumar Hedge
    • MichaelAffew ರಲ್ಲಿ ಕೋಗಿಲು ಘಟನೆ ಬಗ್ಗೆ ಮಂತ್ರಿ ಕೃಷ್ಣ ಭೈರೇಗೌಡ ನಿಲುವೇನು?
    Latest Kannada News

    ಆಟಕ್ಕುಂಟು ಲೆಕ್ಕಕ್ಕಿಲ್ಲದ ಬಿಜೆಪಿ ಸಂಸದರು: ಕೇಂದ್ರದ ವಿರುದ್ಧ ಡಿಸಿಎಂ ಡಿಕೆಶಿ ವಾಗ್ದಾಳಿ

    ಜನವರಿ 31, 2026

    ಸಾರಿಗೆ ನಿಗಮಗಳಿಗೆ ರಾಮಲಿಂಗಾರೆಡ್ಡಿ ಕಟ್ಟಾಜ್ಞೆ

    ಜನವರಿ 31, 2026

    ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಡಾ. ಸಿ.ಜೆ ರಾಯ್ ದಾರುಣ ಅಂತ್ಯ

    ಜನವರಿ 30, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.