ಆಪರೇಷನ್ ಸಿಂಧೂರಕ್ಕೆ ಪ್ರತೀಕಾರ ತೆಗೆದುಕೊಳ್ಳಲು ಮುಂದಾದ ಪಾಕ್ ಇದೀಗ ಹೈರಾಣಾಗಿದೆ. ಶತ್ರುಕಡೆಯಿಂದ ನುಗ್ಗಿ ಬಂದ ಮಿಸೈಲ್ಗಳನ್ನ ಭಾರತ ಭಸ್ಮ ಮಾಡಿದೆ. ಪಾಕಿಸ್ತಾನದ ಚೀನಾ ನಿರ್ಮಿತ ಎಚ್ಕ್ಯು 16 ಅನ್ನು ಉಡೀಸ್ ಮಾಡಿದೆ. ಪಾಕ್ನ 15 ನಗರಗಳ ಮೇಲೆ ಇಂಡಿಯನ್ ಡ್ರೋನ್ ಎರಗಿವೆ. ಬೆಚ್ಚಿಬಿದ್ದಿರೋ ಪಾಕಿಸ್ತಾನ ಸಿಯಾಲ್ಕೋಟ್, ಕರಾಚಿ ಲಾಹೋರ್ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದೆ. ಯಾಕಾದ್ರೂ ಪಹಲ್ಗಾಂ ತಂಟೆಗೆ ಹೋದ್ನೋ ಅಂತಾ ಗೋಳಾಡ್ತಿದೆ.
ಪಹಲ್ಗಾಂ ಉಗ್ರರ ದಾಳಿಗೆ ಕೆರಳಿರೋ ಭಾರತ ಪ್ರತೀಕಾರದ ರಣಕಹಳೆ ಊದಿದೆ. ಪಾಕ್ಗೆ ನುಗ್ಗಿ ಉಗ್ರರನ್ನ ಸದೆಬಡೀತಿದೆ. ಬಿಲದಲ್ಲಿ ಅಡಗಿದ್ದ ಪಾಕ್ ಬೆಂಬಲಿತ ಉಗ್ರರು ಇದೀಗ ಅಯ್ಯಯ್ಯೋ ಅಂತಾ ಹೊರ ಬರದೇ ಅಡಗಿಕುಳಿತುಕೊಳ್ತಿದ್ದಾರೆ. ಎಲ್ಲಿ ಹೊರಗೆ ಬಂದ್ರೆ ಮೋದಿ ಬ್ರಹ್ಮಾಸ್ತ್ರಕ್ಕೆ ಬಲಿಯಾಗಿಬಿಡ್ತಿವೋ ಅನ್ನೋ ಆತಂಕ ಕಾಡ್ತಿದೆ ಉಗ್ರರಿಗೆ. ಇದೆಲ್ಲದ್ರ ಮಧ್ಯೆ ಭಾರತ ಆಪರೇಷನ್ ಸಿಂಧೂರವನ್ನ ಎರಡನೇ ದಿನಕ್ಕೂ ಮುಂದುವರೆಸಿದಂತೆ ಕಾಣುತ್ತೆ.ಯಾಕಂದ್ರೆ ಈಗಾಗ್ಲೇ ಪಾಕ್ನ 15 ನಗರಗಳ ಮೇಲೆ ಇಂಡಿಯನ್ ಡ್ರೋನ್ ಎರಗಿ ಬೂದಿಮಾಡಿದೆ.
ಪಾಕ್ನ 15 ನಗರಗಳ ಮೇಲೆ ಭಾರತದ ಡ್ರೋನ್ಗಳು ಭೀಕರ ದಾಳಿ ನಡೆಸಿದೆ. ಅಷ್ಟೇ ಅಲ್ದೇ, ಪಾಕಿಸ್ತಾನದ ಚೀನಾ ನಿರ್ಮಿತ ಎಚ್ಕ್ಯು 16 ಅನ್ನು ಉಡೀಸ್ ಮಾಡಲಾಗಿದೆ. ಎಡಿಎಸ್ 16 ಸಿಸ್ಟಮ್ ಸಂಪೂರ್ಣ ಧ್ವಂಸವಾಗಿದೆ. ಡ್ರೋನ್ ದಾಳಿಗಳಲ್ಲಿ ನಾಲ್ವರು ಪಾಕಿಸ್ತಾನಿ ಸೈನಿಕರು ಗಾಯಗೊಂಡಿದ್ದಾರೆನ್ನಲಾಗಿದೆ. ಹಾಗೆಯೇ ಲಾಹೋರ್ನಲ್ಲಿ, ವಾಲ್ಟನ್ ಏರ್ಪೋರ್ಟ್ ಬಳಿ ಸ್ಫೋಟ ಶಬ್ದ ಕೇಳಿಬಂದಿದೆ. ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂ, ಸೇನಾ ಮುಖ್ಯ ಕಚೇರಿ ಮೇಲೆ ಭಾರತದ ಸೇನೆ ಟಾರ್ಗೆಟ್ ನಡೆಸಿರೋದು ಗೊತ್ತಾಗಿದೆ.
ಸದ್ಯ ಬೆಚ್ಚಿಬಿದ್ದಿರೋ ಪಾಕಿಸ್ತಾನ ಸಿಯಾಲ್ಕೋಟ್, ಕರಾಚಿ ಮತ್ತು ಲಾಹೋರ್ ವಿಮಾನ ನಿಲ್ದಾಣಗಳಲ್ಲಿ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಸದ್ಯಕ್ಕಂತೂ ಯಾವುದೇ ಸಾವುನೋವು ಸಂಭವಿಸಿಲ್ಲ. ನಾಗರಿಕ ಮೂಲಸೌಕರ್ಯಕ್ಕೆ ಹಾನಿಯಾಗಿಲ್ಲ ಅಂತ್ಲೇ ಹೇಳಲಾಗ್ತಿದೆ. ಭಾರತ ಏನಿದ್ರು ಮುಖ್ಯವಾಗಿ ಉಗ್ರ ಬೆಂಬಲಿತ ಶಕ್ತಿಗಳ ಮೇಲೆಯೇ ತನ್ನ ಗುರಿ ಇಟ್ಟಿರೋದು ಪಕ್ಕಾ ಆಗಿದೆ.
ಮಾಡೋದೆಲ್ಲಾ ಮಾಡಿ ಇದೀಗ ಭಾರತದ ದಾಳಿಗೆ ಪಾಕಿಸ್ತಾನ ತತ್ತರಿಸಿದೆ. ಅಲ್ಲಿನ ಸಂಸದರು ಪಾಕ್ ಸಂಸತ್ತಿನಲ್ಲಿ ಮಾತನಾಡುವಾಗ್ಲೇ ಕಣ್ಣೀರು ಹಾಕ್ತಿದ್ದಾರೆ. ಅಯ್ಯೋ ನಮ್ಮನ್ನ ಭಾರತದಿಂದ ದಯವಿಟ್ಟು ಕಾಪಾಡಿ ಅಂತಾ ಅಂಗಲಾಚುತ್ತಿದ್ದಾರೆ. ನಿವೃತ್ತ ಮೇಜರ್ ತಾಹಿರ್ ಇಕ್ಬಾಲ್ ಕಣ್ಣೀರು ಹಾಕಿರೋದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಕೆಣಕಿದ ಭಾರತದಿಂದ ಪ್ರತೀಕಾರದ ಸ್ಯಾಂಪಲ್ಗೆ ಪಾಕ್ ಪತರುಗುಟ್ಟಿಹೋಗಿದೆ.
Previous Articleವಿಮಾನ ಹತ್ತಲು ಮೂರು ಗಂಟೆ ಮೊದಲು ಹೋಗಿ
Next Article ಮಾಜಿ ಮಂತ್ರಿ ಮೊಮ್ಮಗ ಕತೆ ಕಟ್ಟಿದ