Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಬೆಸ್ಕಾಂ ಅಧಿಕಾರಿಗಳ ಮೈಚಳಿ ಬಿಡಿಸಿದ ಕೆ.ಜೆ. ಜಾರ್ಜ್ | KJ George
    ರಾಜಕೀಯ

    ಬೆಸ್ಕಾಂ ಅಧಿಕಾರಿಗಳ ಮೈಚಳಿ ಬಿಡಿಸಿದ ಕೆ.ಜೆ. ಜಾರ್ಜ್ | KJ George

    vartha chakraBy vartha chakraಜೂನ್ 1, 2023Updated:ಜೂನ್ 2, 2023ಯಾವುದೇ ಟಿಪ್ಪಣಿಗಳಿಲ್ಲ2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು, ಜೂ. 1-
    ಇಂಧನ ಇಲಾಖೆಯ ನೂತನ ಸಚಿವರಾಗಿ ಕಾರ್ಯಾರಂಭ ಮಾಡಿರುವ ಕೆಜೆ ಜಾರ್ಜ್ ಇಲಾಖೆಗೆ ಹೊಸ ರೂಪ ನೀಡಲು ಮುಂದಾಗಿದ್ದಾರೆ ಈ ನಿಟ್ಟಿನಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಬೆಸ್ಕಾಂನ ಜಡ್ಡುಗಟ್ಟಿದ ಆಡಳಿತ ವ್ಯವಸ್ಥೆಗೆ ಸಾಣೆ ಹಿಡಿಯಲು ತೀರ್ಮಾನಿಸಿದ್ದಾರೆ.
    ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಕೆಜೆ ಜಾರ್ಜ್ ಅವರು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಗ್ರ ಮಾಹಿತಿ ಪಡೆದುಕೊಂಡರು ಆನಂತರ ನಿವೃತ್ತ ಅಧಿಕಾರಿಗಳು ಇಂಧನ ದಕ್ಷತೆಯುಳ್ಳ ವ್ಯಕ್ತಿಗಳ ಜೊತೆ ಮಾತುಕತೆ ನಡೆಸಿ ಇಲಾಖೆಗೆ ಹೊಸ ರೂಪ ನೀಡುವ ಕುರಿತಂತೆ ಮಾಹಿತಿ ಪಡೆದುಕೊಂಡರು.
    ಈ ಎಲ್ಲಾ ಮಾಹಿತಿಗಳ ಆಧಾರದಲ್ಲಿ ಇಂದು ದಿಡೀರ್ ಬೆಸ್ಕಾಂ ಕೇಂದ್ರ ಕಚೇರಿಗೆ ಭೇಟಿ ನೀಡಿದರು. ಕಚೇರಿಯ ಎಲ್ಲಾ ವಿಭಾಗಗಳಿಗೆ ತೆರಳಿ ಸಿಬ್ಬಂದಿಯ ಹಾಜರಾತಿ ಕಾರ್ಯಕ್ಷಮತೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾಹಿತಿ ಪಡೆದುಕೊಂಡು ಅನಧಿಕೃತ ಗೈರು ಹಾಜರಾದವರಿಗೆ ಎಚ್ಚರಿಕೆ ನೀಡುವಂತೆ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದರು.
    ಮಂತ್ರಿಯಾದ ನಂತರ ಕಚೇರಿಗೆ ಇದು ತಮ್ಮ ಮೊದಲ ಭೇಟಿಯಾಗಿದೆ ಹೀಗಾಗಿ ಯಾರ ಬಗ್ಗೆಯೂ ಕಠೋರವಾಗಿ ಮಾತನಾಡುವುದಿಲ್ಲ ಇನ್ನು ಮುಂದೆ ಇಂತಹ ದಿಡೀರ್ ಭೇಟಿ ಹೆಚ್ಚಳವಾಗಲಿದೆ ಕಚೇರಿಯ ಸಿಬ್ಬಂದಿ ತಮ್ಮ ಕಾರ್ಯವೈಖರಿಯನ್ನು ಸುಧಾರಿಸಿಕೊಳ್ಳಬೇಕು. ಕೆಲಸದ ಅವಧಿಯಲ್ಲಿ ತಮ್ಮ ಸ್ಥಳ ಬಿಟ್ಟು ಬೇರೆ ಕಡೆ ಹೋಗಬಾರದು ಅನಧಿಕೃತ ಗೈರು ಹಾಜರಿಯನ್ನು ಆಶಿಸ್ತು ಎಂದು ಪರಿಗಣಿಸಿ ಶಿಸ್ತು ಕ್ರಮ ಜರುಗಿಸಲಾಗುವುದು ಇದಕ್ಕೆ ಅವಕಾಶ ನೀಡಬಾರದು ಎಂದು ಹೇಳಿದರು.

    ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ ತಾಂತ್ರಿಕ ವಿಭಾಗದ ನಿರ್ದೇಶಕ ಆಡಳಿತ ವಿಭಾಗದ ನಿರ್ದೇಶಕ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
    ಈ ವೇಳೆ ಬೆಸ್ಕಾಂ ವ್ಯಾಪ್ತಿಯಲ್ಲಿನ ವಿದ್ಯುತ್ ಗ್ರಾಹಕರ ಸಂಖ್ಯೆ ವಿದ್ಯುತ್ ಬಳಕೆಯ ಪ್ರಮಾಣ ಬಿಲ್ ಪಾವತಿಯ ವೈಖರಿ ಸೇರಿದಂತೆ ಹಲವು ಮಾಹಿತಿಗಳನ್ನು ಕೇಳಿದರು ಈ ಪ್ರಶ್ನೆಗಳಿಗೆ ಉತ್ತರ ಹೇಳಲು ಉನ್ನತ ಅಧಿಕಾರಿಗಳು ತಡಬಡಾಯಿಸಿದಾಗ ಅವರನ್ನು ಲಘುವಾಗಿ ತರಾಟೆಗೆ ತೆಗೆದುಕೊಂಡ ಸಚಿವ ಜಾರ್ಜ್ ತಾವು ಉನ್ನತ ಅಧಿಕಾರಿ ತಮ್ಮ ಬಳಿ ಎಲ್ಲ ಮಾಹಿತಿ ಇರಬೇಕು ಇದು ನನ್ನ ಮೊದಲ ಭೇಟಿ ಇನ್ನು ಮುಂದೆ ಇಂತಹ ಆಲಕ್ಷ್ಯ ಧೋರಣೆಯನ್ನು ಸಹಿಸುವುದಿಲ್ಲ ನಾನು ಕೇಳಿದಾಗ ನೀವು ಎಲ್ಲ ಮಾಹಿತಿಯನ್ನು ನೀಡಬೇಕು ಎಂದು ತಾಕೀತು ಮಾಡಿದರು.
    ಇದಾದ ಬಳಿಕ ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆ ನಡೆಸಿ ಗೃಹ ಜ್ಯೋತಿ ಯೋಜನೆಯ ಅನುಷ್ಠಾನದ ಬಗ್ಗೆ ವಿವರವಾದ ಮಾಹಿತಿ ಪಡೆದುಕೊಂಡರು.

    ರಾಜ್ಯದಲ್ಲಿ ಗೃಹ ಬಳಕೆ ವಿದ್ಯುತ್ ಬಳಕೆದಾರರು ಪ್ರತಿ ತಿಂಗಳು ಸರಾಸರಿ 53 ಯೂನಿಟ್ ಮಾತ್ರ ಉಪಯೋಗಿಸುತ್ತಿದ್ದಾರೆ. ಹೆಚ್ಚುವರಿ 147 ಯುನಿಟ್ ಅನ್ನ ಘೋಷಣೆ ಮಾಡಿದರೆ ಅದರ ಬಳಕೆ ಸ್ವರೂಪದ ಬಗ್ಗೆಯೂ ಚರ್ಚಿಸಬೇಕಿದೆ. ಮನೆ ಮಾಲೀಕರು ಹೆಚ್ಚವರಿ ಎಲೆಕ್ಟ್ರಾನಿಕ್ ಉಪಕರಣ ಬಳಸಿದರೇ ಶೇಕಡ 15 ರಿಂದ 20ರಷ್ಟು ಹೆಚ್ಚು ಬಳಕೆ ಮಾಡಬಹುದು. ಹೀಗಾಗಿ 200 ಯೂನಿಟ್ ಬಳಕೆ ವಿಚಾರಕ್ಕೆ ಅರ್ಜಿ ಆಹ್ವಾನ ಹಾಗೂ ಬಿಲ್ ಕಟ್ಟುವ ಮಾದರಿ ಜಾರಿಗೆ ತರಬಹುದು. ಈಗಾಗಲೇ ಇರುವ ದೆಹಲಿ ಮಾಡಲ್ ನಂತೆ ಕಾರ್ಯನಿರ್ವಹಿಸುವುದು ಸಹ ಒಂದು ಆಯ್ಕೆಯಾಗಿ ಪರಿಗಣಿಸಬಹುದು. ವಿದ್ಯುತ್ ಸಬ್ಸಿಡಿ ಬೇಡ ಎಂದು ಸ್ವಯಂ ಪ್ರೇರಿತವಾಗಿ ಕೈ ಬಿಡುವವರನ್ನ ಸಹ ಗುರುತಿಸಬಹುದು. ಈ ರೀತಿ ಸಬ್ಸಿಡಿ ನಿರಾಕರಿಸುವವರು ರಾಜ್ಯದಲ್ಲಿ ಅಂದಾಜು 5 ಲಕ್ಷ ಮಂದಿ ಎಂದು ಗುರುತಿಸಬಹುದಾಗಿದೆ ಎಂದು ಅಧಿಕಾರಿಗಳು ಸುದೀರ್ಘ ವಿವರಣೆ ನೀಡಿದರು

    bescom keb kj george
    Share. Facebook Twitter Pinterest LinkedIn Tumblr Email WhatsApp
    Previous Articleಜನರ ನಡುವೆ ಕೆಲಸ ಮಾಡಲು ‘ಸಮೂಹಶಕ್ತಿ’ ಸಂಕಲ್ಪ | Samooha Shakti
    Next Article ವೇದಿಕೆಯ ಮೇಲೆ ಮುಗ್ಗರಿಸಿ ಬಿದ್ದ ಅಮೇರಿಕಾ ಅಧ್ಯಕ್ಷ
    vartha chakra
    • Website

    Related Posts

    ಪರಮೇಶ್ವರ್ ವಿರುದ್ಧ ED ಕೆಂಗಣ್ಣು

    ಮೇ 22, 2025

    ವಿಮಾನ ಹತ್ತಲು ಮೂರು ಗಂಟೆ ಮೊದಲು ಹೋಗಿ

    ಮೇ 9, 2025

    ಸಿದ್ದರಾಮಯ್ಯ ಕಾಂಗ್ರೆಸ್ಸಿನಿಂದ ಉಚ್ಚಾಟನೆ ಸಾಧ್ಯವೇ..!

    ಏಪ್ರಿಲ್ 30, 2025

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬಾಲಿವುಡ್ ಬೆಡಗಿ ತಮನ್ನಾ ಗೆ 6.2 ಕೋಟಿ !

    ಪರಮೇಶ್ವರ್ ವಿರುದ್ಧ ಇಡಿ ದಾಳಿ ಯಾಕೆ ಗೊತ್ತಾ ?

    ಬೆಂಗಳೂರಿಗೆ ಕುಮಾರಸ್ವಾಮಿ ಬಂಪರ್ ಕೊಡುಗೆ.

    ಅಲೋಕ್ ಕುಮಾರ್ Promotion ಗೆ ಇಲ್ಲ, ಯಾಕೆ ಗೊತ್ತಾ ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • tiktok-ads-agency-account.org_AgomE ರಲ್ಲಿ ಬೆಂಗಳೂರಿನ ಚಿರತೆ ಪಡೆ ಕಾರ್ಯಾರಂಭ | Leopard Task Force
    • tiktok-ads-agency-account.org_AgomE ರಲ್ಲಿ ಅಧಿಕಾರಿಗಳ ಮೈ ಚಳಿ ಬಿಡಿಸಿದ ಮಂತ್ರಿ ಕೆ.ಜೆ.ಜಾರ್ಜ್ | KJ George
    • Philliphig ರಲ್ಲಿ ಲೋಕಾಯುಕ್ತ ಪೋಲಿಸ್ ಮತ್ತಷ್ಟು Smart.
    Latest Kannada News

    ಬಾಲಿವುಡ್ ಬೆಡಗಿ ತಮನ್ನಾ ಗೆ 6.2 ಕೋಟಿ !

    ಮೇ 22, 2025

    ಪರಮೇಶ್ವರ್ ವಿರುದ್ಧ ಇಡಿ ದಾಳಿ ಯಾಕೆ ಗೊತ್ತಾ ?

    ಮೇ 22, 2025

    ಬೆಂಗಳೂರಿಗೆ ಕುಮಾರಸ್ವಾಮಿ ಬಂಪರ್ ಕೊಡುಗೆ.

    ಮೇ 22, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಅಂದು ಇಮ್ಮಡಿ ಪುಲಿಕೇಶಿ ಇಂದು ಸಿದ್ದು ಸರ್ಕಾರ #siddaramaiah #dkshivakumar #congress #pawankalyan #kpcc
    Subscribe